ಸುದ್ದಿಗಳು

ಗುತ್ತಿಗಾರು ಸಹಕಾರಿ ಸಂಘದ ಮಹಾಸಭೆ : 1.01 ಕೋಟಿ ಲಾಭ – ಶೇ.6 ಡಿವಿಡೆಂಡ್ ಘೋಷಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಶನಿವಾರ ಸಂಘದ ಆವರಣದಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ವಹಿಸಿದ್ದರು. ಸಂಘವು ಸದ್ರಿ ವರ್ಷದಲ್ಲಿ  1, 01,59,122 ರೂಪಾಯಿ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಣೆ ಮಾಡಲಾಯಿತು.

Advertisement
Advertisement

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 5503 ಸದಸ್ಯರಿದ್ದು ಒಟ್ಟು 8.04 ಕೋಟಿ ಪಾಲುಬಂಡವಾಳ ಹೊಂದಿದೆ. ವರ್ಷಾಂತ್ಯದಲ್ಲಿ ಒಟ್ಟು 308.63 ಕೋಟಿ ವ್ಯವಹಾರ ನಡೆಸಿ  1.01 ಕೋಟಿ ರೂಪಾಯಿ ಲಾಭ ಗಳಿಸಿದೆ.

ರಸಗೊಬ್ಬರ , ಕೃಷಿ ಬಳಕೆ ಮಾರಾಟ ಇತ್ಯಾದಿಗಳಿಂದ ಒಟ್ಟು92.41 ಲಕ್ಷ ರೂಪಾಯಿ ವ್ಯವಹಾರ ನಡೆಸಿ 7.06 ಲಕ್ಷ ರೂಪಾಯಿ ಲಾಭ ಗಳಿಸಿದ್ದರೆ, ಪೆಟ್ರೋಲಿಯಂ ವ್ಯವಹಾರದಲ್ಲಿ ಒಟ್ಟು 8.89 ಕೋಟಿ ರೂಪಾಯಿ ವ್ಯವಹಾರ ನಡೆಸಿ 23.73 ಲಕ್ಷ ರೂಪಾಯಿ ಲಾಭ ಗಳಿಸಿದೆ. ಸಂಘದ 1612 ಮಂದಿ ಸದಸ್ಯರು ಸಾಲಾ ಮನ್ನಾಕ್ಕೆ ಅರ್ಹತೆ ಪಡೆದಿದ್ದಾರೆ.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಡಿ ಮಂಜುಳ ಮುತ್ಲಾಜೆ, ನಿರ್ದೇಶಕರುಗಳಾದ ಬಿ.ಕೆ ಬೆಳ್ಯಪ್ಪ ಗೌಡ, ಭರತ್ ಮುಂಡೋಡಿ, ಕೃಷ್ಣಯ್ಯ ಮೂಲೆತೋಟ, ದಿನೇಶ್ ಕೆ ಸರಸ್ವತಿ ಮಹಲ್, ಆನಂದ ಕೆಂಬಾರೆ, ಶೈಲಜಾ ಮುಂಡೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ಉಪಸ್ಥಿತರಿದ್ದರು.

ಅಧ್ಯಕ್ಷ ಮುಳಿಯ ಕೇಶವ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ವರದಿ ವಾಚಿಸಿ ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಪ್ರಸ್ತುತ ವರ್ಷ ಮೃತಪಟ್ಟ ಸದಸ್ಯರಿಗೆ ಹಾಗೂ ವೀರ ಮರಣ ಹೊಂದಿದ ಯೋಧರಿಗೆ  ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಇದೇ ಸಂದರ್ಭ ಸಂಘದ ಪೆಟ್ರೋಲ್ ಪಂಪ್ ನಿಂದ ಹೆಚ್ಚು ಡೀಸೆಲ್/ಪೆಟ್ರೋಲ್ ಖರೀದಿ ಮಾಡಿದವರನ್ನು ಗುರುತಿಸಲಾಯಿತು. ವರ್ಷಕ್ಕೆ 37 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಸೌರಭ ವ್ಯಾನ್ ಮಾಲಕ ಕುಮಾರ್ , 26 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ದೇವಿಪ್ರಸಾದ್ ಚಿಕ್ಮುಳಿ, 8 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಜ್ಞಾನದೀಪ ವಿದ್ಯಾಸಂಸ್ಥೆಯನ್ನು ಗೌರವಿಸಲಾಯಿತು.

ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಅಡಿಕೆ ಹಾಕಿದ ಕೃಷಿಕರಾದ ಉಣ್ಣಿಕೃಷ್ಣನ್, ರತ್ಮಾ ಎಂ ಡಿ ಹಾಗೂ ಪರಮೇಶ್ವರ ಭಟ್ ವಳಲಂಬೆ ಅವರನ್ನು ಗುರುತಿಸಲಾಯಿತು.ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಕೊಕೋ ಹಾಕಿದ ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ‌ ಚಣಿಲ , ಕೇಶವ ಮುಳಿಯ ಅವರನ್ನು ಗುರುತಿಸಲಾಯಿತು. ಅಧಿಕ ಗೊಬ್ಬರ ಖರೀದಿ ಮಾಡಿದ ಸುರೇಶ್ ಸಾಲ್ತಾಡಿ, ತೀರ್ಥರಾಮ ಕಮಿಲ, ಸುಬ್ಬಣ್ಣ ಗೌಡ ಎಂಡಿ ಅವರನ್ನು ಕೂಡಾ ಗೌರವಿಸಲಾಯಿತು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದಲ್ಲಿ 15 ಬಗೆಯ ಔಷಧಗಳು, ಸೌಂದರ್ಯ ವರ್ಧಕಗಳ ಬಳಕೆಗೆ ನಿಷೇಧ

ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…

2 hours ago

ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…

2 hours ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಕೊಡಗಿನಲ್ಲಿ ವ್ಯಾಪಕ ಮಳೆ | ಕೆ ಆರ್ ಎಸ್ ಅಣೆಕಟ್ಟು ಭರ್ತಿ | ಶಿರಾಡಿ ಸಂಚಾರ ಸಂಕಷ್ಟ |

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…

3 hours ago

ಅಮ್ಮನ ಪ್ರೀತಿಗೆ ಎಣೆಯುಂಟೇ?

ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…

3 hours ago

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

17 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

17 hours ago