ಗುತ್ತಿಗಾರು : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಗಾಳಿ ಮಳೆಗೆ ಕುಸುಮ ಎಂಬವರ ಮನೆ ಗೋಡೆ ಕುಸಿತವಾಗಿ ಭಾಗಶ: ಹಾನಿಯಾಗಿದೆ ಎಂದು ವರದಿಯಾಗಿದೆ. ಇದರಿಂದ ಮನೆಯ ಛಾವಣಿಗೂ ಹಾನಿಯಾಗಿದೆ. ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕ ಎಂಬಲ್ಲಿ ಗಿರೀಶ್ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ಇದೇ ಸಂದರ್ಭ ಗುತ್ತಿಗಾರು ಪೇಟೆಯಲ್ಲಿ ಹೂವು ಮಾರಾಟ ಮಾಡುವ ಶೆಡ್ ಮೇಲೆ ಮರದ ಗೆಲ್ಲು ಬಿದ್ದು ದಮಯಂತಿ ಎಂಬವರ ಅಂಗಡಿಗೂ ಹಾನಿಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel