ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಪುತ್ತೂರು ಘಟಕದಲ್ಲಿ ಗೃಹರಕ್ಷಕ ದಳದ ಪದೋನ್ನತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಘಟಕದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದ ಪುತ್ತೂರು ಸಂಚಾರಿ ಠಾಣೆಯಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಯ್ಯದ್ ಇಬ್ರಾಹಿಂ ಅವರಿಗೆ ಎ.ಎಸ್.ಎಲ್ (ಅಸಿಸ್ಟೆಂಟ್ ಸೆಕ್ಷನ್ ಲೀಡರ್) ಹುದ್ದೆಗೆ ಹಾಗೂ ಜಗನ್ನಾಥ ರವರಿಗೆ ಎಸ್ಎಲ್ (ಸೆಕ್ಷನ್ ಲೀಡರ್) ಹುದ್ದೆಗೆ ಪದೋನ್ನತಿ ಆದೇಶ ಪತ್ರವನ್ನು ಜಿಲ್ಲಾ ಸಮಾವೇಶ ಡಾ|| ಮುರಲೀ ಮೋಹನ್ ಚೂಂತಾರು ನೀಡಿದರು.
ಇದೇ ಸಂದರ್ಭದಲ್ಲಿ ಪುತ್ತೂರು ಘಟಕದಲ್ಲಿ ನಿವೃತ್ತಿ ಹೊಂದಿದ ಅಲ್ಬರ್ಟ್ ಅವರನ್ನು ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು. ಪುತ್ತೂರು ಠಾಣೆಯ ಹೆಡ್ಕಾನ್ಸ್ಟೇಬಲ್ ಸ್ಕರೀಯ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel