Advertisement
ಅನುಕ್ರಮ

ಗೆಳೆತನಕ್ಕೊಂದು ವ್ಯಾಖ್ಯಾನ

Share
ಮಗು ಬೆಳೆಯುತ್ತಾ ಸುತ್ತಲಿನ ‌ಪರಿಸರವನ್ನು ಗಮನಿಸಲು ತೊಡಗುತ್ತದೆ. ತನಗೆ ಹತ್ತಿರದವರನ್ನು ಇಷ್ಟಪಡುತ್ತದೆ, ನೆಚ್ಚಿಕೊಳ್ಳುತ್ತದೆ. ಶಾಲಾ ಪರಿಸರ ವನ್ನು ಪ್ರವೇಶಿಸುವ ಮಗು ಪರಿಚಿತ ಮುಖದ ಹುಡುಕಾಟದಲ್ಲಿ ತೊಡಗುತ್ತದೆ. ಯಾವುದೋ ಒಂದು ಮುಖದಲ್ಲಿ ತನ್ನ ತಂಗಿಯೋ, ಅಕ್ಕನೋ , ತಮ್ಮನೋ, ಅಣ್ಣನೋ, ಗೆಳೆಯನೋ ಕಂಡುಬಿಡುತ್ತದೆ. ಮುಖದಲ್ಲಿ ಒಂದು ಮಂದಹಾಸ ಮೂಡುತ್ತದೆ, ಗೆಳೆತನ ಹುಟ್ಟುತ್ತದೆ.
ಕೆಲವೊಮ್ಮೆ ಪುಟ್ಟ ಮಕ್ಕಳಲ್ಲಿ ನಿನ್ನ ಗೆಳೆಯರು ಯಾರು ಎಂದು ಕೇಳಿದಾಗ ತರಗತಿಗಳಲ್ಲಿ ಹತ್ತಿರ ಕುಳಿತವರ ಹೆಸರು  ಹೇಳಿ ಬಿಡುತ್ತಾರೆ. ಯಾಕೆ ಇಷ್ಟ ಅಂದರೆ ಆಕೆ ಚೆಂದ ಇದ್ದಾಳೆ, ಅವಳು ಚಾಕೊಲೇಟ್ ಕೊಡುತ್ತಾಳೆ ಹೀಗೆ  ಮನಸಿಗೆ ಏನು ಅನ್ನಿಸುತ್ತದೋ ಅದನ್ನು ಹೇಳಿ ಮಗು ಹೇಳಿ ಬಿಡುತ್ತವೆ.
ಯಾವಾಗಲೂ ಚಟುವಟಿಕೆ ಯಲ್ಲಿರುವವರಿಗೆ ಗೆಳೆಯರು ಜಾಸ್ತಿ. ಹೋದ ಬಂದಲ್ಲೆಲ್ಲಾ ಅವರಿಗೆ ಮಿತ್ರರೇ. ಕೆಲವರು ಕಲ್ಲನ್ನೂ ಮಾತಾಡಿಸುವಂತವರಿರುತ್ತಾರೆ.  ಸ್ವಲ್ಪ ಮಾತು ಜಾಸ್ತಿ ಇದ್ದು ನೋಡಲೂ  ಸ್ಮಾರ್ಟ್ ಆಗಿ ಇದ್ದರಂತೂ ಕೇಳಲೇ ಬೇಡಿ . ಬೇಡ ಬೇಡವೆಂದರೂ ಹೋದ ಕಡೆಗಳಲ್ಲಿ ಗೆಳೆಯರಾಗಿ ಬಿಡುತ್ತಾರೆ.
ನಾವು ಬಾಲ್ಯ ಸ್ನೇಹಿತರು ಎಂದು ಹೆಮ್ಮೆಯಿಂದ ಹೇಳುವ ಕೆಲವೇ ಕೆಲವು ಗೆಳೆಯರು ನಮ್ಮ ಸುತ್ತ ಮುತ್ತಲಿರುತ್ತಾರೆ. ಅವರ ಭಾವನೆಗಳೂ ಒಂದೇ, ಒಬ್ಬರಿಗೊಬ್ಬರು ಕನಸುಗಳನ್ನು ಹಂಚಿಕೊಂಡಿ ರುತ್ತಾರೆ. ಬಾಳಿನ ಪಥಗಳು ಬೇರೆ ಬೇರೆಯಾದರೂ  ಮನಸುಗಳು ಒಂದೇ ಆಗಿರುತ್ತವೆ. ಬಾಳಿನಲ್ಲಿ ಎದುರಾಗುವ ಕಷ್ಟ, ಸುಖಗಳನ್ನು ಹಂಚಿಕೊಳ್ಳು ವಷ್ಟು ಸಲುಗೆ ಬೆಳೆಸಿಕೊಂಡಿರುತ್ತಾರೆ. ಬಾಯಿಬಿಟ್ಟು ಹೇಳದಿದ್ದರೂ ಕಷ್ಟಗಳ ಸಂಧರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಆರಾಮಾವಾಗಿದ್ದು ಬಿಡುತ್ತಾರೆ.
ಜೀವನದ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿ ದ್ದಂತೆ ಬೇರೆ ಬೇರೆ ಮುಖಗಳು ಜೊತೆಯಾಗುತ್ತವೆ. ಗುರಿಗಳು ಬೇರೆಯಾಗುತ್ತವೆ, ಬದುಕಿನ ದೃಷ್ಠಿಕೋನ ಗಳು  ಬದಲಾಗುತ್ತದೆ, ಆದ್ಯತೆಗಳು ಬದಲಾಗುತ್ತವೆ. ಜೀವನದ ಆವಶ್ಯಕತೆಗಳಿಗನುಗುಣವಾಗಿ ಆ ಕ್ಷಣ ದಲ್ಲಿ  ಒಂದಾಗುತ್ತಾರೆ, ದಿನ ಕಳೆದಂತೆ ಮಿತ್ರರಾಗು ತ್ತಾರೆ. ತಮ್ಮ ತಮ್ಮ ಅಭಿರುಚಿಗಳಲ್ಲಿ ಸಾಮ್ಯತೆಯಿದ್ದರೆ ಯಶಸ್ವಿ ಗೆಳೆಯರಾಗುತ್ತಾರೆ, ಇಲ್ಲವಾದರೆ ಅಲ್ಲಿ ಗೆ ಗೆಳೆತನವೊಂದು ಮುಗಿದಂತೆ.
ಶಾಲಾ ಕಾಲೇಜುಗಳಲ್ಲಿ  ಗೆಳೆತನ ಪಕ್ವವಾದುದಾದರೆ  ಬಿಡಿಸಲಾಗದ ನಂಟಾಗುತ್ತದೆ. ಮುಂದೆ ತಮ್ಮ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದರೂ ಒಂದು ಫೋನ್ ಕಾಲ್, ವರ್ಷಕ್ಕೊಂದು ಭೇಟಿ ತಪ್ಪಿಸು ವುದಿಲ್ಲ. ಅಲ್ಲಿ ಬಣ್ಣ, ದುಡ್ಡು , ಜಾತಿ ಯಾವುದೂ ಪ್ರಭಾವ ಬೀರುವುದಿಲ್ಲ. ಕೇವಲ ಗೆಳೆತನ ಮಾತ್ರ ಮೂಡುತ್ತದೆ. ನಂಬಿಕೆ ಬೆಳೆಯುತ್ತದೆ.  ಈಗ ಬಿಡಿ, ಸೋಷಿಯಲ್ ಮೀಡಿಯಾದಿಂದಾಗಿ  ಯಾರು ದೂರವಲ್ಲ, ಹಾಗೆಂದೂ ಹತ್ತಿರವೂ ಅಲ್ಲ. ಅವರವರಷ್ಟಕೆ ಎಲ್ಲರೂ ಬ್ಯುಸಿ . ಆದರೂ ಮೊಬೈಲ್ನಲ್ಲಿ  ಎಲ್ಲರೂ ಉತ್ತರಿಸಿ ಬಿಡುತ್ತಾರೆ. ಅಲ್ಲಿ ಎಲ್ಲರೂ ಆಪ್ತರೇ.  ಎಲ್ಲರೂ ಮಿತ್ರರೇ.
ಬರೆದಷ್ಟು ಮುಗಿಯದ , ನೆನೆದಷ್ಟು  ಖುಷಿಯಾಗುವ ,  ಮಾತಾಡಿದಷ್ಟೂ  ಇನ್ನೂ ಮಾತಾನಾಡಬೇಕೆನಿಸುವ  ವಿಷಯಕ್ಕೆ  ವಸ್ತುವೇ ಗೆಳೆತನ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

6 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

6 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

6 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

7 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

18 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

22 hours ago