ಗ್ರಾಮೀಣ ಭಾಗದ ಜನರ ಪ್ರಮುಖವಾದ ಸಂಪರ್ಕ ವ್ಯವಸ್ಥೆ ಬಿ ಎಸ್ ಎನ್ ಎಲ್ ಪುನರುಜ್ಜೀವನಗೊಳ್ಳುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ 50,000 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂಬ ಸುಳಿವು ಲಭ್ಯವಾಗಿದ್ದು ಮುಂದಿನ ವಾರ ಈ ಬಗ್ಗೆ ಕೇಂದ್ರ ಸರಕಾರದಲ್ಲಿ ಚರ್ಚೆಯಾಗಲಿದೆ. ಹೀಗಾಗಿ ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯ ಹಾದಿಯತ್ತ ಸಾಗಲಿದೆ.
ಇದೇ ವೇಳೆ ವೇತನವೂ ಬಿ ಎಸ್ ಎನ್ ಎಲ್ ನೌಕರರಿಗೆ ಸಿಗಲಿದೆ. ಸೆಪ್ಟೆಂಬರ್ ತಿಂಗಳ ಸಂಬಳ ದೀಪಾವಳಿಗೂ ಮುನ್ನವೇ ನೌಕರರಿಗೆ ಸಿಗಲಿದೆ. ದೀಪಾವಳಿ ಹಬ್ಬದ ಮೊದಲು ಕಂಪನಿಯು ತನ್ನ ಸಂಪನ್ಮೂಲಗಳ ಮೂಲಕ ನೌಕರರಿಗೆ ಸಂಬಳ ನೀಡಲಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷರು ಹೇಳಿದ್ದಾರೆ. ವಿಆರ್ಎಸ್ ಯೋಜನೆಯ ಬಗ್ಗೆ ಇದೇ ವೇಳೆ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ಕಂಪನಿ ಪ್ರತಿ ತಿಂಗಳು 1,600 ಕೋಟಿ ಗಳಿಸುತ್ತಿದೆ. ಅದೇ ಸಮಯದಲ್ಲಿ ನೌಕರರಿಗೆ ಸಂಬಳ ನೀಡಲು ಕಂಪನಿ 850 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಇಲ್ಲಿ ವೇತಕ್ಕೆ ಅಧಿಕ ಖರ್ಚಾಗುತ್ತಿದೆ. ಅದೇ ಮಾದರಿಯ ಕೆಲಸಗಳು ನಡೆಯುತ್ತಿಲ್ಲ ಎಂಬ ಕಾರಣದಿಂದಲೇ ಬಿ ಎಸ್ ಎನ್ ಎಲ್ ಕಡೆಗೆ ಆಸಕ್ತಿ ಕಡಿಮೆಯಾಗಿತ್ತು. ಖಾಸಗಿ ಕಂಪನಿಗೆ ಪೈಪೋಟಿ ನೀಡಲು ಕಾರ್ಯತತ್ಪರತೆಯೂ ಅಗತ್ಯವಾಗಿತ್ತು. ಅಧಿಕ ಸಂಬಳ ಪಡೆದರೂ, ಸರಕಾರ ನೀಡಿದರೂ ಅದೇ ಮಾದರಿಯಲ್ಲಿ ಕೆಲಸಗಳು , ಸರಕಾರದ ನಿಯಮಗಳಲ್ಲಿ ಬದಲಾವಣೆ ಆಗದೇ ಇರುವುದು, ಹಿರಿಯ ಅಧಿಕಾರಿಗಳ ನಿರಾಸಕ್ತಿ, ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದ ಬಿ ಎಸ್ ಎನ್ ಎಲ್ ಹಿಂದೆ ಉಳಿಯಲು ಕಾರಣವಾದರೆ, ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಶಕ್ತವಾಗಲಿಲ್ಲ ಎಂಬ ವಿಶ್ಲೇಷಣೆ ಹಿರಿಯ ತಜ್ಞರಿಂದ ನಡೆದಿತ್ತು. ಇದೀಗ ಕೇಂದ್ರ ಸರಕಾರವು ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯತ್ತ ಮುಖ ಮಾಡಿರುವುದು ಗ್ರಾಮೀಣ ಭಾಗದ ಜನರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆ ಮೂಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…
ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…