Advertisement
MIRROR FOCUS

ಗ್ರಾಮೀಣ ಭಾಗದಲ್ಲಿ ಮಳೆ ಗಾಳಿಯ ಜೊತೆ ಸಮರ ಸಾರುವ ಮೆಸ್ಕಾಂ‌ ಸಿಬಂದಿಗಳು

Share

ಕಳೆದೊಂದು‌‌ ವಾರದಿಂದ ವಿಪರೀತ ಮಳೆ‌ ಹಾಗೂ ಕಳೆದ‌ 3 ದಿನಗಳಿಂದ ಗಾಳಿ.‌ಈ ಸಂದರ್ಭ ನಿರಂತರವಾಗಿ ಶ್ರಮ‌ಪಡುವವರಲ್ಲಿ ಮೆಸ್ಕಾಂ ಸಿಬಂದಿಗಳು ಸೇರುತ್ತಾರೆ.‌ಅವರ ಕಡೆಗೆ ಫೋಕಸ್..


ಸುಳ್ಯ: ಮಳೆಯ ಜೊತೆ ಗಾಳಿ. ಕರೆಂಟಿಲ್ಲ ಅಂತ ನಾವು ಹೇಳಿಬಿಟ್ಟರೆ ಆಯ್ತು..!. ಕೆಲವೇ ಹೊತ್ತಲ್ಲಿ ಕರೆಂಟು ಬರುತ್ತದೆ. ಅದರ ಹಿಂದಿನ ಶ್ರಮ ಅಪಾರ ಇದೆ. ವಿದ್ಯುತ್ 24 ಗಂಟೆಯ ಸೇವೆ, ಅದಕ್ಕೆ ವೇತನವೂ ಇದೆ. ‌ಅದು ನಿಜವೇ, ಆದರೆ ನಡು ರಾತ್ರಿಯಲ್ಲೂ ನೀಡುವ ಸೇವೆ, ಹಗಲಲ್ಲೂ ನಿರಂತರ ಓಡಾಟ ಗಮನಸೆಳೆಯುತ್ತದೆ.

ಮೆಸ್ಕಾಂ ಸಿಬಂದಿಗಳಿಗೆ ಗ್ರಾಮೀಣ ಭಾಗದಲ್ಲಿ ಮಳೆಗಾಲ‌ ಸೇವೆ ನೀಡುವುದೇ ದೊಡ್ಡ ಸವಾಲು. ಒಂದು ಕಡೆ ಗಾಳಿ ಇನ್ನೊಂದು ಕಡೆ ಜಾರುವ ಕಂಬಗಳು. ಇನ್ನೊಂದು ಕಡೆ ಮೈನ್ ಲೈನ್ ಸಮಸ್ಯೆ.‌ಇದೆಲ್ಲಾ ಮೆಸ್ಕಾಂ ಬಗೆ ಬಹುದೊಡ್ಡ ಸವಾಲು. ಹಿರಿಯ ಅಧಿಕಾರಿಗಾಳು ಯೋಜನೆ ಹಾಕಿಕೊಂಡರೆ ಇತರ ಸಿಬಂದಿಗಳು ಕಾರ್ಯರೂಪಕ್ಕೆ ತರುತ್ತಾರೆ.‌ಲೈನ್ ಮೆನ್ ಗಳಂತೂ ಶ್ರಮವಹಿಸಿ ಓಡಾಡುತ್ತಾರೆ.

ಈಗಲೂ ಹಾಗೆಯೇ ಕಳೆದ 3 ದಿನಗಳಿಂದ ‌ನಿರಂತರ ಓಡಾಟ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸರಿ ಮಾಡುವಂತೆ ಮಾಡಿದ ತಕ್ಷಣ ಮೈನ್‌ಲೈನ್ ಹೋಗಿರುತ್ತದೆ ಆಗ ಗ್ರಾಮೀಣ ಭಾಗದ ಲೈನ್ ಅರ್ಧದಲ್ಲೇ ಇರುತ್ತದೆ. ನಂತರ ಅದೂ ಸರಿಯಾಗುತ್ತದೆ. ಹೀಗೇ ಓಡಾಟ ,‌ಸಂಪರ್ಕ ನಡೆಯುತ್ತಲೇ ಇರುತ್ತದೆ.

ವಿದ್ಯುತ್ ಸಂಪರ್ಕದ ಕೆಲಸದ ಸಂದರ್ಭದಲ್ಲಿ ಪವನ್ ಎಂಬವರು ಕಂಬದಿಂದ ಬಿದ್ದು ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಂತೂ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಗಳ ಮೇಲೆ ಸಮಸ್ಯೆಯಾಗಿದೆ. ಮೆಸ್ಕಾಂ ಇಷ್ಟೆಲ್ಲಾ ಕಾರ್ಯ ಮಾಡುತ್ತಿದ್ದರೂ ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ತುರ್ತು ಸಂಪರ್ಕ ವ್ಯವಸ್ಥೆಯಾದ ಬಿ ಎಸ್ ಎನ್ ಎಲ್ ಸದ್ದಿಲ್ಲದೆ ಕೂತಿದೆ. ಇದಕ್ಕೆ ಉದಾಹರಣೆ ಇಲ್ಲೊಂದು ಸಂದೇಶ..‌ ತಾಲೂಕಿನಲ್ಲಿ ಒಂದು ಈ ಬಗ್ಗೆಯೇ ಒಂದು ಸಭೆಯನ್ನ ಜನಪ್ರತಿನಿಧಿಗಳು ಮಾಡುತ್ತಿದ್ದರೆ ಸರಿಯಾಗುತ್ತಿತ್ತು…

ಬಿ ಎಸ್ ಎನ್ ಎಲ್ ಬಗ್ಗೆ ಬಂದಿರುವ ಸಂದೇಶ ಹೀಗಿದೆ..

ಗ್ರಾಮೀಣ ಪ್ರದೇಶವಾದ ಕೊಲ್ಲಮೊಗ್ರು, ಹರಿಹರಪಲ್ತಡ್ಕ,ಬಾಳುಗೋಡು, ಹಾಗೂ ಕಲ್ಮಕ್ಕಾರು ಪ್ರದೇಶದ ಎಲ್ಲ ಸಾರ್ವಜನಿಕ ಬಂಧುಗಳು ಬಿ ಎಸ್ ಎನ್ ಲ್ ಸರಕಾರಿ ದೂರವಾಣಿಗೆ ಅವಲಂಬಿತರಾಗಿದ್ದು ಸದ್ಯದ ಪರಿಸ್ಥಿತಿ ಯಲ್ಲಿ ಕರೆಂಟು ದಿನದ 24 ಗಂಟೆ ಇಲ್ಲದೆ ಇರುವುದರಿಂದ, ಮೊಬೈಲ್ ಫೋನ್ ಗಳು ಯಾವುದು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.  ಕಳೆದ ವರುಷ ಪ್ರಕ್ರತಿ ವಿಕೋಪಕ್ಕೆ ತುತ್ತಾದ  ಈ ಪ್ರದೇಶದಲ್ಲಿ ಜೀವ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಸಂಜೆವೇಳೆ ಈ ಭಾಗದಲ್ಲಿ ಬಾರಿ ಮಳೆ ಸುರಿದ ವರದಿ ಆಗಿದೆ ಇಲ್ಲಿ ಬಿ ಸ್ ಎನ್ ಲ್ ಬಿಟ್ಟು ಬೇರೆ ವ್ಯವಸ್ಥೆ ಇಲ್ಲ ವಿದ್ಯುತ್ತಿನ ಸಮಸ್ಯೆ ಅದ ಕಾರಣ ಮೂಲ ಸೌಕರ್ಯ ವ್ಯವಸ್ಥೆ ಟವರ್ ಗೆ ಆದರೂ ಡಿಸೇಲ್ ವ್ಯವಸ್ಥೆ ಮಾಡಿ ಕೊಡಬೇಕು. ಯಾವುದಾದರೂ ಪರಿಹಾರ ನಿಧಿ ಬಳಸಿ ಈ ಬಾಗದ ಜನರ ಸಮಸ್ಯೆಗೆ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಯವರಲ್ಲಿ ಕಳಕಳಿಯ ವಿನಂತಿ ಯಾವುದೇ ತುರ್ತುಪರಿಸ್ಥಿತಿ ಗೆ ಈ ಪರಿಸ್ಥಿತಿ ತುಂಬಾ ಕಷ್ಟ ಅರ್ಥ ಮಾಡಿಕೊಳ್ಳಿ ಇದೆ ವಿನಂತಿ….

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

8 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

9 hours ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

9 hours ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

23 hours ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

24 hours ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

2 days ago