ಮರ್ಕಂಜ: ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಬೆಳಕು ಹರಿಯಿತು.
ಈ ಮನೆಗೆ ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಬಿಡಿ, ರೇಶನ್ ಕಾರ್ಡೂ ಇರಲಿಲ್ಲ. ಯುವ ಬ್ರಿಗೆಡ್ ಗಮನಕ್ಕೆ ಈ ಸಂಗತಿ ಬಂದ ಬಳಿಕ ಮನೆಗೆ ಬೆಳಕು ಹರಿದಿತ್ತು. ಇದೀಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುವ ಮೂಲಕ ಬೆಳಕೇ ಹರಿದಿದೆ. ಹೀಗಾಗಿ ಯುವಬ್ರಿಗೆಡ್ ತಂಡಕ್ಕೆ ಮನೆಯವರಿಂದ ಧನ್ಯವಾದ. ಸಾಮಾಜಿಕ ಕೆಲಸ ಮಾಡುತ್ತಿರುವ ಯುವಬ್ರಿಗೆಡ್ ತಂಡಕ್ಕೆ ಸುಳ್ಯನ್ಯೂಸ್.ಕಾಂ ಕಡೆಯಿಂದಲೂ ಅಭಿನಂದನೆ.
ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಯುವ ಬ್ರಿಗೇಡ್ ಕಡೆಯಿಂದ ಸೋಲಾರ್ ಅಳವಡಿಸಿಕೊಡಲಾಗಿತ್ತು.ನಂತರ ತಹಶೀಲ್ದಾರಾದ ಕುಂಞಿ ಅಹಮ್ಮದ್ ಅವರ ಸಹಾಯದಿಂದ ರೇಶನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿತ್ತು. ಭಾನುವಾರ ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್, ವೆಂಕಟ್ರಮಣ ಗೌಡ ಪರಿವಾರಕಾನ , ರವಿಕುಮಾರ್ ಕುರುಂಜಿ ಇವರೆಲ್ಲರ ಸಹಕಾರದೊಂದಿಗೆ ಯುವ ಬ್ರಿಗೇಡ್ ತಂಡವು ಉಚಿತವಾಗಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಮಾಡಿತು.ಈಗ ಬೆಳಕು ಹರಿದಿದೆ.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…