ಸುಳ್ಯ:ಎಲಿಮಲೆಯ ರಂಜನಿ ಸಂಗೀತ ಸಭಾದ ವತಿಯಿಂದ ನವರಾತ್ರಿ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ‘ ‘ನವರಾತ್ರಿ ವೈಭವಂ’ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಿತು. ಅತ್ರೇಯಿ ಕೃಷ್ಣಾ ಕಾರ್ಕಳ ಹಾಡುಗಾರಿಕೆ ನಡೆಸಿಕೊಟ್ಟರು.
ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಸಂಗೀತಾಸಕ್ತರ ಮನ ಸೂರೆಗೊಂಡಿತು. ವಯಲಿನ್ ನಲ್ಲಿ ವಿದ್ವಾನ್ ವೈಭವ ರಮಣಿ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಟಿ ಪುತ್ತೂರು, ಮೋರ್ಸಿಂಗ್ ನಲ್ಲಿ ವಿದ್ವಾನ್ ಹೊಸಮನೆ ಬಾಲಕೃಷ್ಣ ಭಟ್ ಪುತ್ತೂರು ಸಹಕರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel