ಛೆ…… ಕಾಡಾನೆ ಸತ್ತಿತಲ್ಲ ಮಾರಾಯ್ರೆ…….

May 29, 2019
6:41 PM

ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ನಂತರ ಚಿಕಿತ್ಸೆ ನಡೆಯಿತು. ದಿನವೂ ಜನ ನೋಡಿ ಬಂದರು. ಬೈನೆ ಹಾಕಿದರು. ಬದುಕಿಸುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆ ಆಗಾಗ ನೋಡಿತು. ಆದರೆ  ಮತ್ತೆ ಮತ್ತೆ ಕಾಡಾನೆಗಳ ಕಾದಾಟದಲ್ಲಿ  ಗಾಯಗೊಂಡಿತು. ಕೊನೆಗೆ ಬುಧವಾರ ಕೊನೆಯುಸಿರೆಳೆಯಿತು. ಕಾಡಾನೆ ಬಾಳುಗೋಡಿನ ಕೃಷಿಕರಿಗೆ ನಿತ್ಯವೂ ಕಾಟ ಕೊಡುತ್ತಿದ್ದರೂ ಜನ ಹೇಳುವ ಮಾತು,  ಛೇ… ಆನೆ ಸತ್ತಿತಲ್ಲ ಮಾರಾಯ್ರೆ ಎಂದು ಬೇಸರಿಸುತ್ತಾರೆ.

Advertisement

 

 

ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು  ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆಯ ಸಿಬಂದಿಗಳ  ಗಮನಕ್ಕೆ ಬಂದು ಪರಿಶೀಲನೆ ಮಾಡಿದಾಗ  ಆನೆಯ ಮುಂಭಾಗದ ಕಾಲಿಗೆ ಏಟಾಗಿರುವುದು  ಗಮನಕ್ಕೆ ಬಂದಿದೆ. ನೋವಿನಿಂದ ಬಳಲುತ್ತಿರುವ ಆನೆಯು ನೋವು ತಡೆಯಲಾರದೆ ಘೀಳಿಡುತ್ತಿತ್ತು. ಹತ್ತಿರಕ್ಕೆ ತೆರಳಿದರೆ ಮರವನ್ನು ಅಲ್ಲಾಡಿಸಿ ಗದರಿಸುತ್ತಿತ್ತು.  ಸೊಂಡಿಲಿನಿಂದ ಸೊಪ್ಪು ಕಲ್ಲುಗಳನ್ನು ಎಸೆಯುತ್ತಿತ್ತು. ನಂತರ ಅರಿವಳಿಕೆ ನೀಡಿ ಚಿಕಿತ್ಸೆ ನೀಡಲಾಯಿತು.

 

 

ಆ ಬಳಿಕ ಕೊಂಚ ಸುಧಾರಣೆ ಕಂಡಿತು. ಆದರೆ ಮತ್ತೆ ಕಾಡಾನೆಗಳು ನಡುವೆ ಕಾದಾಟ ನಡೆಯಿತು. ಹೀಗಾಗಿ ಮತ್ತೆ ಆನೆ ಗಾಯಗೊಂಡು ಊರಿನ ಹತ್ತಿರ ಬರತೊಡಗಿತು. ಜನರ ಪ್ರೀತಿ ಹೆಚ್ಚಾಯಿತು. ಬೈನೆ ಸೇರಿದಂತೆ ಆಹಾರ ಕೊಡಲು ಆರಂಭಿಸಿದರು. ಬಳಿಕ ಹಾಗೆಯೇ ಆರೋಗ್ಯಗೊಂಡು ಕಾಡಿನ ಕಡೆಗೆ ಹೆಜ್ಜೆ ಹಾಕಿತು. ಮತ್ತೆ ಕಾಡಾನಗೆಳ ನಡುವೆ ಕಾದಾಟವಾಯಿತು. ಈಚೆಗೆ ಕೆಲವು ದಿನಗಳಿಂದ ಕಾಡಿನ ಕಡೆಗೆ ಯಾರೂ ಹೋಗಿರಲಿಲ್ಲ. ಬುಧವಾರ ಆನೆ ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂತು. ಊರ ಮಂದಿ ವಿಷಾದ ವ್ಯಕ್ತಪಡಿಸುತ್ತಾರೆ.

 

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ
May 8, 2025
8:46 PM
by: The Rural Mirror ಸುದ್ದಿಜಾಲ
ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ
May 8, 2025
8:32 PM
by: The Rural Mirror ಸುದ್ದಿಜಾಲ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group