ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ನಂತರ ಚಿಕಿತ್ಸೆ ನಡೆಯಿತು. ದಿನವೂ ಜನ ನೋಡಿ ಬಂದರು. ಬೈನೆ ಹಾಕಿದರು. ಬದುಕಿಸುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆ ಆಗಾಗ ನೋಡಿತು. ಆದರೆ ಮತ್ತೆ ಮತ್ತೆ ಕಾಡಾನೆಗಳ ಕಾದಾಟದಲ್ಲಿ ಗಾಯಗೊಂಡಿತು. ಕೊನೆಗೆ ಬುಧವಾರ ಕೊನೆಯುಸಿರೆಳೆಯಿತು. ಕಾಡಾನೆ ಬಾಳುಗೋಡಿನ ಕೃಷಿಕರಿಗೆ ನಿತ್ಯವೂ ಕಾಟ ಕೊಡುತ್ತಿದ್ದರೂ ಜನ ಹೇಳುವ ಮಾತು, ಛೇ… ಆನೆ ಸತ್ತಿತಲ್ಲ ಮಾರಾಯ್ರೆ ಎಂದು ಬೇಸರಿಸುತ್ತಾರೆ.
ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆಯ ಸಿಬಂದಿಗಳ ಗಮನಕ್ಕೆ ಬಂದು ಪರಿಶೀಲನೆ ಮಾಡಿದಾಗ ಆನೆಯ ಮುಂಭಾಗದ ಕಾಲಿಗೆ ಏಟಾಗಿರುವುದು ಗಮನಕ್ಕೆ ಬಂದಿದೆ. ನೋವಿನಿಂದ ಬಳಲುತ್ತಿರುವ ಆನೆಯು ನೋವು ತಡೆಯಲಾರದೆ ಘೀಳಿಡುತ್ತಿತ್ತು. ಹತ್ತಿರಕ್ಕೆ ತೆರಳಿದರೆ ಮರವನ್ನು ಅಲ್ಲಾಡಿಸಿ ಗದರಿಸುತ್ತಿತ್ತು. ಸೊಂಡಿಲಿನಿಂದ ಸೊಪ್ಪು ಕಲ್ಲುಗಳನ್ನು ಎಸೆಯುತ್ತಿತ್ತು. ನಂತರ ಅರಿವಳಿಕೆ ನೀಡಿ ಚಿಕಿತ್ಸೆ ನೀಡಲಾಯಿತು.
ಆ ಬಳಿಕ ಕೊಂಚ ಸುಧಾರಣೆ ಕಂಡಿತು. ಆದರೆ ಮತ್ತೆ ಕಾಡಾನೆಗಳು ನಡುವೆ ಕಾದಾಟ ನಡೆಯಿತು. ಹೀಗಾಗಿ ಮತ್ತೆ ಆನೆ ಗಾಯಗೊಂಡು ಊರಿನ ಹತ್ತಿರ ಬರತೊಡಗಿತು. ಜನರ ಪ್ರೀತಿ ಹೆಚ್ಚಾಯಿತು. ಬೈನೆ ಸೇರಿದಂತೆ ಆಹಾರ ಕೊಡಲು ಆರಂಭಿಸಿದರು. ಬಳಿಕ ಹಾಗೆಯೇ ಆರೋಗ್ಯಗೊಂಡು ಕಾಡಿನ ಕಡೆಗೆ ಹೆಜ್ಜೆ ಹಾಕಿತು. ಮತ್ತೆ ಕಾಡಾನಗೆಳ ನಡುವೆ ಕಾದಾಟವಾಯಿತು. ಈಚೆಗೆ ಕೆಲವು ದಿನಗಳಿಂದ ಕಾಡಿನ ಕಡೆಗೆ ಯಾರೂ ಹೋಗಿರಲಿಲ್ಲ. ಬುಧವಾರ ಆನೆ ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂತು. ಊರ ಮಂದಿ ವಿಷಾದ ವ್ಯಕ್ತಪಡಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು, ಬೆಳ್ಳಾರೆ, ಪಂಜ ಸೇರಿದಂತೆ ಹಲವೆಡೆ…
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಮೋಡದ…
ಕರ್ನಾಟಕದ ವಿವಿಧ ಭಾಗಗಳಲ್ಲಿ ಫೆಬ್ರುವರಿ 25ರ ಬೆಳಿಗ್ಗೆ 8 ಗಂಟೆವರೆಗೆ ತುಂತುರು ಮಳೆ,…
ಕಡಬ ತಾಲೂಕಿನ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ…
ಟೆಟಾನಸ್ ಮತ್ತು ಡಿಫ್ತೀರಿಯಾ ಲಸಿಕೆ ಬಿಡುಗಡೆ ವೇಳೆ ಭಾರತ ಲಸಿಕೆ ತಯಾರಿಕೆಯಲ್ಲಿ ಜಾಗತಿಕ…
ಮುಂದಿನ ವರ್ಷದಿಂದ ಕರ್ನಾಟಕದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯಿಸಲಾಗುವುದು…