ಬೆಳ್ಳಾರೆ: ಜನಾನುರಾಗಿ ವೈದ್ಯರಾಗಿದ್ದ ಬಾಳಿಲದ ಡಾ|ಪಿ ಜಿ ಎಸ್ ಪ್ರಕಾಶ್(59) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಬಾಳಿಲದಲ್ಲಿ ಕ್ಲಿನಿಕ್ ಹೊಂದಿದ್ದ ಡಾ|ಪಿ ಜಿ ಎಸ್ ಪ್ರಕಾಶ್ ಗ್ರಾಮೀಣ ಭಾಗದ ಜನಾನುರಾಗಿ ವೈದ್ಯರಾಗಿದ್ದರು. ಕಡಿಮೆ ದರದಲ್ಲಿ ಔಷಧಿ ಹಾಗೂ ನಿಖರ ಚಿಕಿತ್ಸೆ ಮೂಲಕ ಹೆಸರುವಾಸಿಯಾಗಿ ಬೆಳ್ಳಾರೆ ಸಹಿತ ವಿವಿದೆಡೆಯಿಂದ ರೋಗಿಗಳು ಆಗಮಿಸುತ್ತಿದ್ದರು. ಇದೀಗ ಡಾ|ಪಿ ಜಿ ಎಸ್ ಪ್ರಕಾಶ್ ನಿಧನರಾಗಿರುವುದು ಗ್ರಾಮೀಣ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ.
ಬುಧವಾರ ರಾತ್ರಿಯೂ ಕ್ಲಿನಿಕ್ ಗೆ ಆಗಮಿಸಿದ ರೋಗಿಗಳಿಗೆ ಔಷಧಿ ನೀಡಿದ್ದರು. ಬಳಿಕ ಮನೆಯ ಗೇಟ್ ಹಾಗೂ ಕ್ಲಿನಿಕ್ ಬಾಗಿಲು ಹಾಕಲು ತೆರಳಿದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ವಿಷಯ ತಿಳಿದ ತಕ್ಷಣವೇ ಮನೆಯವರು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗೆ ಮೃತಪಟ್ಟಿದ್ದರು.
ವಯನಾಡಿನ ಕಲ್ಲಾಡಿ ಸುರಂಗ ಕಾಮಗಾರಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಓರ್ವ ಮೃತಪಟ್ಟಿದ್ದು, ಏಳು…
ವಯನಾಡಿನ ಮೆಪ್ಪಾಡಿ ಸಮೀಪ ಸುರಂಗ ಯೋಜನಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವರು ಸಿಲುಕಿರುವ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದ್ದು, ಜುಲೈ 11ರಿಂದ ರಾಜ್ಯಾದ್ಯಂತ ಮಳೆಯ…
ತೂಗುಸೇತುವೆಗಳ ಮೂಲಕ ಸಾವಿರಾರು ಗ್ರಾಮಗಳ ಬದುಕನ್ನು ಜೋಡಿಸಿದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ಗೆ…
ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಕಡಿಮೆ ವೆಚ್ಚದ ತೂಗುಸೇತುವೆಗಳ…
ಗೋ ಆಧಾರಿತ ಆರ್ಥಿಕ ವ್ಯವಸ್ಥೆ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂದು…