Advertisement
ಸುದ್ದಿಗಳು

ಜಯನಗರ ಹಿಂದು ರುದ್ರ ಭೂಮಿಯ ಪರಿಸರದಲ್ಲಿ ಶ್ರಮದಾನ

Share

ಸುಳ್ಯ: ಜಯನಗರ ವಿಕ್ರಮ ಯುವಕ ಮಂಡಲ ಹಾಗೂ ನಗರ ಪಂಚಾಯತ್ ಸುಳ್ಯ ಇದರ ಆಶ್ರಯದಲ್ಲಿ ಜಯನಗರ ಹಿಂದು ರುದ್ರ ಭೂಮಿಯ ಪರಿಸರದಲ್ಲಿ ಶ್ರಮ ದಾನ ಕಾರ್ಯಕ್ರಮ ಭಾನುವಾರ ನಡೆಯಿತು.

ಪರಿಸರದಲ್ಲಿ ಕಾಡುಗಿಡಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ,ಗಿಡ ಬಳ್ಳಿಗಳಿಂದ ರುದ್ರ ಭೂಮಿಗೆ ಸಾಗುವ ದಾರಿಯಲ್ಲಿ ಆವರಿಸಿಕೊಂಡಿದೆ.ಸುಳ್ಯ ನ.ಪಂ ವತಿಯಿಂದ ದೀಪಗಳು ,ದಾರಿ ದೀಪಗಳು ಅಳವಡಿಸಲಾಗಿದ್ದರೂ ಇದೀಗ ಅದು ಯಾವುದು ಈಗ ಕೆಲಸಕ್ಕೆ ಬಾರದೆ ಪರಿಸರ ಕತ್ತಲುಮಯವಾಗಿದೆ.ಸ್ಥಳೀಯರ ಪ್ರಕಾರ ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಒಂದು ಮೃತ ದೇಹವನ್ನು ಶವಸಂಸ್ಕಾರಕ್ಕೆ ತಂದಿದ್ದು ಸ್ಥಳದಲ್ಲಿ ದೀಪದ ಬೆಳಕಿನ ಸೌಲಭ್ಯಗಳು ಇಲ್ಲದ ಕಾರಣದಿಂದಾಗಿ ಮೃತ ಶರೀರವನ್ನು ಬೇರೆ ಕಡೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಸ್ಥಳೀಯ ಸಂಘಸಂಸ್ಥೆಗಳು ಶ್ರಮದಾನದ ಮೂಲಕ ಪರಿಹಾರಕ್ಕೆ ಮುಂದಾದರು. ಸಂಬಂಧಿಸಿದ ಇಲಾಖೆಗಳು ಸ್ಪಂದಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದೆ ಬರಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ವಿಕ್ರಮ ಯುವಕ ಮಂಡಲ .ರಿ.ಜಯನಗರ ಸಂಘದಿಂದ ಈ ಪರಿಸರದಲ್ಲಿ ಶ್ರಮದಾನ ನಡೆಸಿ ಸಹಕಾರ ನೀಡಲಾಗುತ್ತಿದೆ.
ಶ್ರಮದಾನ ಮಾತ್ರ ಸಾಲದು ,ಮೂಲಭೂತ ಸೌಲಭ್ಯಗಳಾದ ದಾರಿ ದೀಪ,ಹೈಮಾಕ್ಸ್ ದೀಪಗಳ ದುರಸ್ತಿ ಕಾರ್ಯ ಕೂಡಲೆ ನಡೆಯಬೇಕಾಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

ಶ್ರಮದಾನದ ಸಂದರ್ಭ  ನ.ಪಂ ಸ್ಥಳೀಯ ಸದಸ್ಯೆ ಶಿಲ್ಪಾ ಸುದೇವ,ವಿಕ್ರಮ ಯುವಕ ಮಂಡಲ ಅದ್ಯಕ್ಷ ಪ್ರಸನ್ನ ಎಂ ಆರ್,ಮಾಜಿ ಅದ್ಯಕ್ಷರುಗಳಾದ ಪ್ರವೀಣ್ ಕುಮಾರ್,ಸುರೇಂದ್ರ ಕಾಮತ್,ಸುಧೇವ ಜಯನಗರ,ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು  ಭಾಗವಹಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

6 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

15 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

22 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

22 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

1 day ago