Advertisement
The Rural Mirror ಫಾಲೋಅಪ್

ಜಲಪ್ರಳಯದಿಂದ ನಾಶವಾದ ಕೃಷಿಗೆ ಜೀವ ತುಂಬುವುದು ಹೇಗೆ ?

Share

ಸಂಪಾಜೆ : ಒಂದು ಕಡೆ ಜಲಪ್ರಳಯದಿಂದ ಮನೆ , ಜೀವ ನಾಶ. ಇನ್ನೊಂದು ಕಡೆ ಸಂಪೂರ್ಣ ಕೃಷಿ  ನಾಶ. ಈ ಸಂದಿಗ್ಧ ಸ್ಥಿತಿಗೆ ವರ್ಷ ಹತ್ತಿರವಾಯಿತು.  ಇಂದಿಗೂ ಇಲ್ಲಿ  ಕೃಷಿ ವ್ಯವಸ್ಥೆ ಸುಧಾರಣೆ ಆಗಿಲ್ಲ. 32 ಕ್ವಿಂಟಾಲ್ ಅಡಿಕೆ  ಬರುತ್ತಿದ್ದ ವ್ಯಕ್ತಿಗೆ ಈಗ 2 ಕ್ವಿಂಟಾಲ್ ಅಡಿಕೆ..!.  ಹೀಗಾಗಿ ಇಲ್ಲಿ ಬದುಕು ಮಾತ್ರವಲ್ಲ ಕೃಷಿ ಬದುಕೂ ಈಗ ಕನಸಾಗಿದೆ ಎನ್ನುತ್ತಾರೆ ಜನ. ಈ ಬಾರಿಯ ಮಳೆ ಹೇಗೋ ಎಂಬ ಭಯ ಈಗ ಇವರನ್ನು ಕಾಡುತ್ತಿದೆ.

 

ಕೃಷಿ ಆದಾಯವನ್ನೇ ನಂಬಿ ಬದುಕುತ್ತಿದ್ದ ಸಣ್ಣ ಸಣ್ಣ ಕುಟುಂಬಗಳು ಅದು. ಅದೇ ಆದಾಯವೇ ಅವರ ಬದುಕಿಗೆ ಆಧಾರವಾಗಿತ್ತು.  ಕೃಷಿಯನ್ನೇ ನಂಬಿ ಬದುಕು ಕಟ್ಟಿ ಕೊಂಡವರು ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಭಾಗದ ಜನರು. ಕೃಷಿ ಅಂದರೆ  ಸ್ವಾವಲಂಬನೆಯ ಬದುಕು ಅವರದು. ಕಳೆದ ಬಾರಿ ಉಂಟಾದ ಜಲಪ್ರಳಯ ಮತ್ತು ಭೂಕುಸಿತ ಇವರ ಕೃಷಿ ಬದುಕನ್ನು ಆಪೋಷನ ತೆಗೆದುಕೊಂಡಿದೆ,  ಅದರ ಜೊತೆಗೆ ಸ್ವಾವಲಂಬನೆಯ ಬದುಕನ್ನೂ ಕುಗ್ಗಿಸಿದೆ. ಇದನ್ನು ಎರಡನೇ ಮೊಣ್ಣಂಗೇರಿಯ ಜಯರಾಮ ಹೀಗೆ ಹೇಳುತ್ತಾರೆ…

ಬೆಟ್ಟಗಳು ಸಂಪೂರ್ಣ ಕುಸಿದು ಬಂದ ಕಾರಣ ಹೆಕ್ಟೇರ್ ಗಟ್ಟಲೆ ಅಡಕೆ, ಕಾಫಿ ತೋಟಗಳು ನಾಶವಾಗಿದೆ. ತಿಂಗಳುಗಟ್ಟಲೆ ಕೆಸರು ನೀರು, ಮಣ್ಣು ತುಂಬಿ ತೋಟಗಳು ನಾಮಾಶೇಷವಾಗಿದೆ. ವಿಪರೀತ ಮಳೆಯೋ, ಪ್ರಕೃತಿಯ ವೈಪರೀತ್ಯವೋ ಎಂಬಂತೆ ಇದ್ದ ಅಡಿಕೆ ಮರಗಳಲ್ಲಿ ಅಡಿಕೆ ಇಲ್ಲ. ಹಿಂಗಾರ ಅರಳಿದರೂ ಅಡಿಕೆ ಉಳಿಯಲಿಲ್ಲ. ಅಡಿಕೆ ಮರಗಳು ಸಾಯಲು ಸಿದ್ಧವಾಗಿದೆ. ಅನ್ನದ ಬಟ್ಟಲು ತುಂಬುತ್ತಿದ್ದ ಭತ್ತ ಬೇಸಾಯವೂ ಇಲ್ಲದಂತಾಗಿದೆ. ಇಡೀ ವರ್ಷ ಊಟ ಮಾಡಲು ಸಾಕಾಗುತ್ತಿದ್ದ ಭತ್ತ ಕೃಷಿ ಮಳೆಗೆ ಕೊಚ್ಚಿಹೋದ ಕಾರಣ ಅಕ್ಕಿಯಲ್ಲಿ ಸ್ವಾವಲಂಬನೆ ಪಡೆದಿದ್ದ ಕುಟುಂಬಗಳು ಇಂದು ಪೇಟೆಯಿಂದ ಅಕ್ಕಿ ತರುವ ಸ್ಥಿತಿ ಉಂಟಾಗಿದೆ. ಇನ್ನು 32 ಕ್ವಿಂಟಾಲ್ ಅಡಿಕೆ ದೊರೆಯುತ್ತಿದ್ದ ಎರಡನೇ ಮೊಣ್ಣಂಗೇರಿಯ ಜಯರಾಮ ಅವರಿಗೆ ಈ ವರ್ಷ ಸಿಕ್ಕಿದ್ದು ಕೇವಲ 2 ಕ್ವಿಂಟಾಲ್ ಅಡಕೆ ಮಾತ್ರ. ಕುಸಿದ ಗುಡ್ಡದೊಂದಿಗೆ ಕೊಚ್ಚಿ ಹೋದ ಇವರ ತೋಟ ಇದ್ದಲ್ಲಿ ಈಗ ಕಾಣುವುದು ಪಾತಾಳದಂತೆ ಕಾಣುವ ಪ್ರಪಾತಗಳು ಮಾತ್ರ. ಮಳೆಗಾಲದಲ್ಲಿ ಜಲಸಾಗರವೇ ಹರಿದರೂ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಜಲಕ್ಷಾಮ ಎದುರಾಗಿತ್ತು ಎಂಬುದು ಇನ್ನೊಂದು ವಿಚಿತ್ರ.

ಹಿಂದೆಲ್ಲಾ ತೋಟದ ಪಕ್ಕವೇ ಹರಿಯುತ್ತಿದ್ದ ನೀರು ಈಗ ಕಾಣದಾಗಿದೆ. ಹಿಂದೆ ತೋಟ ಕೆಳಭಾಗದಲ್ಲಿತ್ತು ನೀರು ಮೇಲೆ ಹರಿಯುತ್ತಿತ್ತು, ಇಂದು ನೀರು ಕೆಳಭಾಗದಲ್ಲಿ ಹರಿದರೆ ತೋಟ ಮೇಲ್ಭಾಗಕ್ಕೆ ಬಂದಿದೆ. ಅಷ್ಟು ಪ್ರಪಾತ ಸೃಷ್ಠಿಯಾಗಿದೆ. ಹೀಗಾಗಿ ಆಸುಪಾಸು ಯಥೇಚ್ಛವಾಗಿದ್ದ ನೀರು ಈಗ ಕಾಣದಾಗಿದೆ. ಮನೆಗೆ ಸ್ವಾವಲಂಬನೆಯ ವಿದ್ಯುತ್ ಇದ್ದ ಜಯರಾಮ ಅವರಿಗೆ ಈಗ ಒಂದು ವರ್ಷದಿಂದ ವಿದ್ಯುತ್ ಇಲ್ಲವಾಗಿದೆ. ಈ ಎಲ್ಲಗಳ ನಡುವೆಯೂ ಅವರು ಬದುಕು ಸಾಗಿಸುತ್ತಿದ್ದಾರೆ. ಇದ್ದುದರಲ್ಲೇ ಖುಷಿ ಪಡುತ್ತಾರೆ. ಕೃಷಿ ಅಭಿವೃದ್ಧಿಗೆ ಇನ್ನೂ ಹೊರಟಿಲ್ಲ. ತರಕಾರಿಯಂತಹ ಕೃಷಿ ಮಾಡಿದರೆ ಬಳ್ಳಿಗಳು ಯಥೇಚ್ಛ ಬರುತ್ತದೆ ಕಾಯಿಕಟ್ಟುವುದು  ದೂರವಾಗುತ್ತದೆ. ಬೆಂಡೆಯಂತಹ ತರಕಾರಿ ಆಗುತ್ತದೆ.

 

 

ಜಲಪ್ರಳಯವು ಜೋಡುಪಾಲ, ಮೊಣ್ಣಂಗೇರಿ ಭಾಗದ ಜನರ ಬದುಕು, ಮನೆ ಮಾತ್ರವಲ್ಲ ಕೃಷಿ ಭೂಮಿಯನ್ನು ನಾಶವಾಗುವಂತೆ ಮಾಡಿದೆ. ಮತ್ತೆ ಕೃಷಿ ಮಾಡಲು ಈ ಮಳೆಗಾಲ ಕಳೆಯಲು ಕಾಯುತ್ತಿದ್ದಾರೆ. ತರಕಾರಿಯಂತಹ ಕೃಷಿ ಮಾಡಿ ಸ್ವಾವಲಂಬನೆಯ ಹಾದಿಯಲ್ಲಿದ್ದಾರೆ. ಈ ಬಾರಿಯ ಮಳೆಗಾಲ ಹೇಗೆ ಎಂಬ ಭಯ ಇಲ್ಲಿಯವರನ್ನು ಕಾಡುತ್ತಿದೆ. ಮೊನ್ನೆ ಸುರಿದ ಮಳೆಗೆ ಭಯಗೊಂಡಿದ್ದಾರೆ, ಇದನ್ನು ಮೊಣ್ಣಂಗೇರಿಯ ಜಯರಾಮ ಹೀಗೆ ಹೇಳುತ್ತಾರೆ,

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

5 hours ago

ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ…

5 hours ago

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’

ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…

13 hours ago

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

22 hours ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

1 day ago

ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ

ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…

1 day ago