ಮಂಗಳೂರು: ಪ್ರಾಮಾಣಿಕತೆ ಎನ್ನುವುದು ಮನುಷ್ಯನ ಹುಟ್ಟಿನಲ್ಲೇ ಬರಬೇಕಾದ ಗುಣ. ಈಚೆಗೆ ಪ್ರಾಮಾಣಿಕತೆಯೂ ಸುದ್ದಿಯಾಗುತ್ತದೆ. ಆದರೆ ಇದು ಹಾಗಲ್ಲ, ಲಾಕ್ಡೌನ್ ನಡುವೆ, ಎಲ್ಲಾ ಒತ್ತಡದ ನಡುವೆ ತನ್ನ ಅಟೋದಲ್ಲಿ ಪ್ರಯಾಣಿಸಿದ ಪ್ರಯಾಣಿಕನ ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಪ್ರಾಮಾಣಿಕ ಸೇವೆ. ಇದು ನಡೆದದ್ದು ಮೂಡಬಿದರೆಯಲ್ಲಿ.
ವ್ಯಕ್ತಿಯೋರ್ವರು ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಮನೆಗೆ ಹೋಗುವ ತುರಾತುರಿಯಲ್ಲಿ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು, ಇದನ್ನು ನಂತರ ಗಮನಿಸಿದ ಚಾಲಕ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ. ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿ ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರು. ಈ ಔಷಧಿಗಳು ಜೀವರಕ್ಷಕ ಔಷಧಿಯಾಗಿದ್ದು ಲಾಕ್ಡೌನ್ ನಡುವೆ ಪರಿಶ್ರಮದಿಂದ ರೋಗಿಯು ಖರೀದಿ ಮಾಡಿ ಅವಸರದಲ್ಲಿ ಮನೆಗೆ ಹೋಗುವ ಸಂದರ್ಭ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಯೂಸುಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯರ ಮೊಬೈಲಿಗೆ(ಡಾ.ಪದ್ಮನಾಭ ಕಾಮತ್) ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯವನ್ನು ತಿಳಿದ ಕೂಡಲೇ ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿ ಅವರು ತಕ್ಷಣ ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ಎರಡೂ ಪಂಗಡದವರಿಗೆ ತಿಳಿಸಿರುತ್ತಾರೆ . ಅಟೋ ಚಾಲಕ ಯೂಸುಫ್ ಅವರು ರೋಗಿಯ ಮೊಬೈಲ್ ನಂಬರ್ ಪಡೆದುಕೊಂಡು ಅವರ ವಿಳಾಸಕ್ಕೆ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ.
ಎಲ್ ನಿನೋ ಆತಂಕದ ನಡುವೆಯೂ ಭಾರತದಲ್ಲಿ 2026ರ ಖಾರಿಫ್ ಬಿತ್ತನೆ 1,000 ಲಕ್ಷ…
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು–ಮೋಡದೊಂದಿಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ…
ತುಮಕೂರು ಕೈಗಾರಿಕಾ ನೋಡ್ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…
ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…