ಜೂ.28 : ಮನೆಮನೆಗಳಲ್ಲಿ ರಾಮ ಜನ್ಮೋತ್ಸವ

June 26, 2019
9:28 PM

ಬೆಂಗಳೂರು: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾಕಾರಕ್ಕಾಗಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯರು ಆರಂಭಿಸಿರುವ ಧಾರಾ ರಾಮಾಯಣದಲ್ಲಿ ಜೂ. 28ರಂದು ರಾಮಜನನ ಕುರಿತ ಪ್ರವಚನ ನಡೆಯಲಿದ್ದು, ಇದರ ಅಂಗವಾಗಿ ಶ್ರೀಮಠದ ಶಿಷ್ಯ-ಭಕ್ತರ ಮನೆಮನೆಗಳಲ್ಲಿ ಅಂದು ಶ್ರೀರಾಮ ಜನ್ಮೋತ್ಸವ ಆಚರಿಸಲು ನಿರ್ಧರಿಸಲಾಗಿದೆ.

Advertisement
Advertisement

ಶ್ರೀಗಳ ಪ್ರವಚನ ಅಂದು ಶ್ರೀರಾಮನ ಜನ್ಮಘಟ್ಟದ ಬಗ್ಗೆಯೇ ಇದ್ದು, ಇದನ್ನು ಸಂಭ್ರಮಿಸುವ ಸಲುವಾಗಿ ಶ್ರೀರಾಮನ, ಶ್ರೀಗುರುಗಳ, ಶ್ರೀಮಠದ ಶಿಷ್ಯ-ಭಕ್ತ ಅಭಿಮಾನಿಗಳು ಮನೆ ಮನೆಗಳಲ್ಲಿ ಶ್ರೀರಾಮ ಜನ್ಮೋತ್ಸವ ಆಚರಿಸಲಿದ್ದಾರೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತು ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಂಜೆ 6.45ರಿಂದ 8 ಗಂಟೆಯ ನಡುವೆ ಪ್ರತಿ ಮನೆಗಳಲ್ಲಿ ರಾಮಜಪ, ಶ್ರೀರಾಮತಾಕರ ಮಂತ್ರ ಪಠಣ, ರಾಮಭಜನೆ, ಪಾನಕ- ಪನಿವಾರ, ಪ್ರಸಾದ ವಿನಿಯೋಗ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಪ್ರಸ್ತುತಿ ಪ್ರದರ್ಶನ, ಕಾಣಿಕೆ ಸಮರ್ಪಣೆ ನಡೆಯಲಿದೆ. ಪ್ರತಿ ಮನೆಗಳಿಗೆ ಆಯಾ ಪರಿಸರದ ಸರ್ವ ಸಮಾಜದ ಬಂಧುಗಳನ್ನು ಆಮಂತ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶ್ರೀಮಠದ ಎಲ್ಲ ಶಾಖಾಮಠಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಸಾಮೂಹಿಕವಾಗಿ ಶ್ರೀರಾಮಜನ್ಮೋತ್ಸವ ಆಚರಿಸಲಾಗುತ್ತದೆ. ಶ್ರೀಗಳ ಪ್ರವಚನ ನಡೆಯುತ್ತಿರುವ ಗಿರಿನಗರ ಶ್ರೀರಾಮಾಶ್ರಮದಲ್ಲಿ ಶ್ರೀರಾಮನಿಗೆ ತೊಟ್ಟಿಲೋತ್ಸವ ಸೇರಿದಂತೆ ವೈವಿಧ್ಯಮಯವಾಗಿ ಶ್ರೀರಾಮ ಜನ್ಮೋತ್ಸವ ಆಚರಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ
May 29, 2025
7:07 AM
by: The Rural Mirror ಸುದ್ದಿಜಾಲ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಕೋವಿಡ್ ಸುದ್ದಿ  | ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ
May 26, 2025
11:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group