ಬೆಂಗಳೂರು : ಈ ಬಾರಿ ಜೂ.6 ರಂದು ಮುಂಗಾರು ಮಳೆ ಕೇರಳಕ್ಕೆ ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸದ್ಯಕ್ಕೆ ಅರಬ್ಬೀ ಸಮುದ್ರದ ದಕ್ಷಿಣದ ಭಾಗ ಮತ್ತು ಬಂಗಾಳ ಕೊಲ್ಲಿಯ ಆಗ್ನೇಯ, ನೈರುತ್ಯ ಭಾಗಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಾರ್ಮೋಡಗಳು ಆವರಿಸಿಕೊಳ್ಳುತ್ತಿದೆ. ಹೀಗಾಗಿ ಜೂ.6 ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗುವ ಸೂಚನೆ ಇದೆ.
ಅದಾದ 24 ಗಂಟೆಯಲ್ಲಿ ಕರಾವಳಿ ಮೂಲಕ ಕರ್ನಾಟವನ್ನೂ ಮಳೆ ಪ್ರವೇಶಿಸಲಿದೆ. ಈ ಪ್ರಕಾರ ಜೂ.7 ಅಥವಾ 8 ರಂದು ಕರಾವಳಿ ಜಿಲ್ಲೆ ಪ್ರವೇಶಿಸಿ ಜೂ.9 ರ ನಂತರ ರಾಜ್ಯದ ವಿವಿದೆಡೆ ಮಳೆಯಾಗಬಹುದು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel