ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ ನೂತನ ಅಧ್ಯಕ್ಷರಾಗಿ ಜೇಸೀ ದೇವರಾಜ್ ಕುದ್ಪಾಜೆಯವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಜೇಸೀ ತೀರ್ಥವರ್ಣ ಬಳ್ಳಡ್ಕ, ಜೇಸೀ ಕಾರ್ಯದರ್ಶಿಯಾಗಿ ಜೇಸೀ ಚೇತನ್ ಅಮೆಮನೆ, ಘಟಕ ಉಪಾಧ್ಯಕ್ಷರಾಗಿ ಜೇಸೀ ಅಭಿಜ್ಞಾ ಬೊಮ್ಮೆಟ್ಟಿ, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ಬಶೀರ್ ಯು.ಪಿ., ವ್ಯಕ್ತಿತ್ವ ವಿಕಸನ ಉಪಾಧ್ಯಕ್ಷರಾಗಿ ಜೇಸೀ ಶುೃತಿ ತೀರ್ಥವರ್ಣ ಬಳ್ಳಡ್ಕ, ಸಾರ್ವಜನಿಕ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ರವಿ ಬೊಮ್ಮೆಟ್ಟಿ, ಕಮ್ಯುನಿಟಿ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ದಿವ್ಯಾ ಚೇತನ್ ಅಮೆಮನೆ ಆಯ್ಕೆಯಾದರು.
ನೂತನ ಜೇಸಿರೆಟ್ ಅಧ್ಯಕ್ಷೆಯಾಗಿ ಚೈತನ್ಯ ದೇವರಾಜ್ ಕುದ್ಪಾಜೆ, ಖಜಾಂಜಿಯಾಗಿ ಜೇಸೀ ಶೋಭಾ ಅಶೋಕ್ ಚೂಂತಾರು, ಜೊತೆ ಕಾರ್ಯದರ್ಶಿಯಾಗಿ ಜೇಸೀ ದೀಕ್ಷಿತ್ ಪಾನತ್ತಿಲ, ಜೇಸೀ ಸಪ್ತಾಹ ನಿರ್ದೇಶಕರಾಗಿ ಜೇಸೀ ರಂಜಿತ್ ಕುಕ್ಕೆಟ್ಟಿ, ಯುವಜೇಸೀ ನಿರ್ದೇಶಕರಾಗಿ ಜೇಸೀ ಗುರುರಾಜ್ ಅಜ್ಜಾವರ, ಘಟಕದ ನಿರ್ದೇಶಕರಾಗಿ ಜೇಸೀ ಚಂದ್ರಶೇಖರ ಕನಕಮಜಲು, ಪಯಸ್ವಿನಿ ಘಟಕದ ಗೃಹ ಪತ್ರಿಕೆಯ ಸಂಪಾದಕರಾಗಿ ಜೇಸೀ ಮರಿಯಾಜ್ಯೋತಿ, ಕಮ್ಯುನಿಟಿ ನಿರ್ದೇಶಕರಾಗಿ ಜೇಸೀ ಯೋಗೀಶ್ ಚೂಂತಾರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷ ಜೇಸೀ ಅಬ್ದುಲ್ಲ ಎ. ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷ ಜೇಸಿಐ ಸೆನೆಟರ್ ಎಂ.ಬಿ. ಸದಾಶಿವ, ಜೇಸೀ ಜಯಪ್ರಕಾಶ್ ಕಾನತ್ತಿಲ, ಜೇಸೀ ದಿನೇಶ್ ಅಂಬೆಕಲ್ಲು, ಜೇಸೀ ಸೀತಾರಾಮ ಕೇವಳ, ಜೇಸೀ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿದ್ದರು.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…