ಜೋಕೆ…..! ಇನ್ನು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ಕ್ಯಾಮರಾದಲ್ಲಿ ಸೆರೆಯಾಗುತ್ತೀರಿ…!, ಜೊತೆಗೆ ದಂಡವೂ ಕಟ್ಟಬೇಕಾಗುತ್ತೆ…!

June 30, 2019
8:00 AM

ಸುಳ್ಯ: ಕದ್ದು ಮುಚ್ಚಿ ತಂದು ಆ ಕಡೆ… ಈ ಕಡೆ ನೋಡಿ ಕಸವನ್ನು ರಸ್ತೆ ಬದಿಗೆ ಎಸೆದರೆ ಜೋಕೆ….! ಕಾರು, ಬೈಕ್ ಸ್ಲೋ ಮಾಡಿ ತ್ಯಾಜ್ಯದ ಕಟ್ಟವನ್ನು ಎಸೆದು ನಾವು ಈ ಊರಿನವರೇ ಅಲ್ಲ…..! ನಮಗೇನು ಗೊತ್ತಿಲಪ್ಪಾ….  ಎಂಬ ಭಾವದಿಂದ ಹೋಗುವವರೇ ಇನ್ನು ಎಚ್ಚರ…..! ನಿಮ್ಮನ್ನು ಕ್ಯಾಮರಾ ಕಣ್ಣುಗಳು ನೋಡುತ್ತಿವೆ….. ! ಇನ್ನು ಕಸ ಎಸೆದರೆ ನಿಮ್ಮ ಮುಖ, ನಿಮ್ಮ ವಾಹನದ ನಂಬರ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವುದು ಗ್ಯಾರಂಟಿ. ಅದರ ಜೊತೆಗೆ ದಂಡವೂ ಖಚಿತ.

Advertisement

ಹೌದು ಕುರುಂಜಿಗುಡ್ಡೆಯಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ತ್ಯಾಜ್ಯದ ಮೂಟೆಯನ್ನು ಹೊತ್ತು ಕುರುಂಜಿಗುಡ್ಡೆ ಕಡೆಗೆ ಬಂದರೆ ಇನ್ನು ಕ್ಯಾಮರಾ ಕಣ್ಣಲ್ಲಿ ಸಿಲುಕಿಕೊಳ್ಳಲಿದ್ದಾರೆ.
ಹೇಳಿ ಕೇಳಿ ಕುರುಂಜಿಗುಡ್ಡೆ ಒಂದು ನಿಬಿಡ ಜನವಸತಿ ಪ್ರದೇಶ. ಸುತ್ತಲೂ ಮನೆಗಳು, ವಸತಿಗೃಹಗಳು‌ ಸರಕಾರಿ ಕಚೇರಿಗಳು ಇರುವ ಸುಳ್ಯ ನಗರದ ಪ್ರಮುಖ ಮತ್ತು ಸುಂದರ ಸ್ಥಳ‌. ಆದರೆ ಇಲ್ಲಿಯ ರಸ್ತೆ ಬದಿ ಮಾತ್ರ ಯಾವಾಗಲು ಕಸದ ರಾಶಿ ತುಂಬಿರುತ್ತದೆ. ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ.
ಇದು ಪ್ರದೇಶವಿಡೀ ಹರಡಿ, ದುರ್ವಾಸನೆ ಬೀರಿ, ರಸ್ತೆ ಪೂರ್ತಿ ಕೊಳಕಾಗಿ ಪ್ರದೇಶದ ಅಂಧವನ್ನೂ ಪರಿಸರದಲ್ಲಿ ವಾಸಿಸುವವರ ಸ್ವಾಸ್ಥ್ಯವನ್ನೂ ಕೆಡಿಸುತ್ತಿತ್ತು. ಎರಡು ದಿನದ ಹಿಂದೆ ಸ್ಥಳೀಯ ನಗರ ಪಂಚಾಯತ್ ಸದಸ್ಯ ವಿನಯ  ಕುಮಾರ್ ಕಂದಡ್ಕ ಮುತುವರ್ಜಿ ವಹಿಸಿ ಸಂಪೂರ್ಣ ಸ್ವಚ್ಛ ಮಾಡಿದ್ದರು. ಆದರೆ ಎರಡೇ ಎರಡು ದಿನ ಮತ್ತೆ ಅಲ್ಲಿ ಕಸದ ರಾಶಿ ತುಂಬಿ ತುಳುಕಿತು. ಈ ಚಿತ್ರವನ್ನು ವಿನಯಕುಮಾರ್ ಸಾಮಾಜಿಕ ಜಾಲತಾಣದಲ್ಲಿಯೂ ಹರಿಯ ಬಿಟ್ಟಿದ್ದರು. ಆದರೆ ಇದ್ಯಾವುದನ್ನೂ ಕ್ಯಾರೇ ಎನ್ನದೆ ಕಸದ ರಾಶಿ ಬಂದು ಬೀಳುತ್ತಲೇ ಇತ್ತು. ಇದೀಗ ಬೇರೆ ದಾರಿಯಿಲ್ಲದೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ನಗರ ಪಂಚಾಯತ್ ಮತ್ತು ದಾನಿಗಳ ಸಹಕಾರದಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಸುತ್ತಲೂ ಕ್ಯಾಮರಾ ಕಣ್ಣು:

ಕಸ ಹಾಕುವ ಪ್ರದೇಶದಲ್ಲಿ ಕ್ಯಾಮರಾ ಕಣ್ಣು ಜಾಗೃತವಾಗಿದೆ. ಸುತ್ತಲೂ ಮೂರು ಕ್ಯಾಮರಾಗಳನ್ನು ಸಮೀಪದ ಮರ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇದರ ಕಂಟ್ರೋಲ್‌ ಯೂನಿಟ್ ಮತ್ತು ಸಿಸಿ ಟಿವಿ ಸಮೀಪದ ಹಾಸ್ಟೇಲ್ ಕಟ್ಟಡದಲ್ಲಿ ಅಳವಡಿಸಲಾಗಿದೆ.
ಕಸ ಎಸೆದವರು ಅಥವಾ ವಾಹನ ಸಂಖ್ಯೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದರೆ ಕಸ ಎಸೆದವರನನ್ನು ಸುಲಭದಲ್ಲಿ ಪತ್ತೆ ಮಾಡಬಹುದು. ಒಮ್ಮೆ ಎಚ್ಷರಿಕೆ ನೀಡಲಾಗುವುದು ಮತ್ತೆ ಪುನರಾವರ್ತನೆಯಾದರೆ ನಗರ ಪಂಚಾಯತ್ ಕಾನೂನು ರೀತಿಯ ಕ್ರ‌ಮ ಕೈಗೊಳ್ಳಲಿದೆ.

ಪೊಲೀಸ್ ಇಲಾಖೆ ಪ್ರಯೋಗ ಯಶಸ್ವಿ:

Advertisement

ಅತಿವೇಗ, ಅಜಾಗರೂಕತೆ, ಹೀಗೆ ಸುಳ್ಯ ನಗರದಲ್ಲಿ ಎರ್ರಾಬಿರಿ ಡ್ರೈವಿಂಗ್, ಅವೈಜ್ಞಾನಿಕ ಪಾರ್ಕಿಂಗ್, ಟ್ರಾಫಿಕ್ ಜಾಂ, ಹೆಚ್ಚಿದ ಅಪಘಾತ ಹೀಗೆ ಒಂದು ಕಾಲದಲ್ಲಿ ಪೊಲೀಸ್ ಇಲಾಖೆಗೆ ನಗರದ ಟ್ರಾಫಿಕ್ ಕಿರಿ ಕಿರಿ ದಿನಾ ತಲೆ ನೋವು ಉಂಟು ಮಾಡುತ್ತಿತ್ತು. ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ನಗರದ ಮೂಲೆ ಮೂಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರು. ಪೊಲೀಸ್ ಠಾಣೆಯಲ್ಲಿ ಕುಳಿತು ಇಡೀ ನಗರವನ್ನು ವೀಕ್ಷಿಸುವ ರೀತಿಯಲ್ಲಿ ಸಿಸಿ ಜಾಲವನ್ನು ಹರಡಿದರು. ಇದರಿಂದ ಟ್ರಾಫಿಕ್ ಕಾನೂನು ಉಲ್ಲಂಘನೆ ಮಾಡುವವರು ಹೆದರಿ ಹೋದರು. ಕ್ರಮೇಣ ಟ್ರಾಫಿಕ್ ಕಾನೂನು ಉಲ್ಲಂಘನೆ, ಅಪಘಾತಕ್ಕೆ ಕಡಿವಾಣ ಬಿತ್ತು‌. ಹಲವು ಪ್ರಕರಣಗಳ ಪತ್ತೆಗೂ ಈ ಸಿಸಿ ಕ್ಯಾಮರಾ ಇಲಾಖೆಗೆ ಸಾಥ್ ನೀಡಿದ ಉದಾಹರಣೆಗಳೂ ಇದೆ.

ತ್ಯಾಜ್ಯ ಪಾಯಿಂಟ್ ಗಳು ಇನ್ನೂ ಇವೆ:

ಕುರುಂಜಿಗುಡ್ಡೆ ಮಾತ್ರ ಅಲ್ಲ ಅಂಬೆಟಡ್ಕ, ಗಾಂಧಿನಗರ, ಆಲೆಟ್ಟಿ ರಸ್ತೆ, ಪ್ರಭು ಗ್ರೌಂಡ್, ಅರಂಬೂರು, ಬಸ್ ನಿಲ್ದಾಣದ ಹಿಂಬಾಗ ಹೀಗೆ ತ್ಯಾಜ್ಯ ಸುರಿದು ನಗರದ ಅಂದ ಕೆಡಿಸುವ ತ್ಯಾಜ್ಯ ಪಾಯಿಂಟ್ ಗಳು ಹತ್ತು ಹಲವಿದೆ. ಇಲ್ಲೆಲ್ಲ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಇನ್ನು ಎಲ್ಲಿ ಕಸ ಎಸೆದರೂ ಸಿಕ್ಕಿ ಬೀಳುವುದು ಖಚಿತ. ಇದರ ಜೊತೆಗೆ ಅಂತಹ ಮಂದಿಯ ಮೇಲೆ ದಂಡವೂ ವಿಧಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಮನೆಯ ಕಸವನ್ನು ಎಲ್ಲೆಲ್ಲೋ ಎಸೆದು ಇಡೀ ನಾಡನ್ನೇ ದುರ್ನಾತ ಬೀರುವಂತೆ ಮಾಡುವವರು, ಸ್ವಚ್ಛತೆಯ ಕಲ್ಪನೆಗೆ ಎಳ್ಳುನೀರು ಬಿಡುವವರು ಆದಷ್ಟು ಬೇಗ ಸಿಕ್ಕಿ ಬೀಳಲಿ.. ಇದೇ ಸುಳ್ಯ ಜನತೆಯ ಆಶಯ.

 

ಜಿಲ್ಲೆಗೆ ಮಾದರಿ :

Advertisement

ಹಲವು ಬಾರಿ ಸ್ವಚ್ಛತೆ, ಹಲವು ಬಾರಿ ಸ್ವಚ್ಛತಾ ಜಾಗೃತಿ ಬಳಿಕವೂ ಮತ್ತೆ ಮತ್ತೆ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವ ಜನರು ಇಡೀ ಜಿಲ್ಲೆಯ ಕೆಲವು ಕಡೆ ಇದ್ದಾರೆ. ಇಲ್ಲೆಲ್ಲಾ ಕಡೆ ಇದೇ ಮಾದರಿ ಸಿಸಿ ಕ್ಯಾಮಾರ ಅಳವಡಿಕೆ ಮಾಡಿ ತ್ಯಾಜ್ಯ ಎಸೆಯುವವರ ಪತ್ತೆ ಮಾಡಿ ದಂಡ ಹಾಕುವ ಪ್ರಯೋಗ ನಡೆದರೆ ಸ್ವಚ್ಛತೆಗೆ ಕೊಂಚ ಬಲ ಸಿಗಬಹುದು. ಪುತ್ತೂರು ತಾಲೂಕಿನ ಕೆಲವು ಕಡೆ ತ್ಯಾಜ್ಯ ಮತ್ತೆ ಮತ್ತೆ ಎಸೆಯುವುದು  ಕಂಡಿದೆ.  ಬೆದ್ರಾಳದಲ್ಲೂ ತ್ಯಾಜ್ಯ ಎಸೆಯುವವರ ವಿರುದ್ಧ ಸಿಸಿ ಕ್ಯಾಮಾರ ಅಸ್ತ್ರ ಬಿಟ್ಟ ಬಳಿಕ ಕಡಿಮೆಯಾಗಿತ್ತು.  ಹರಿಕೆ ಹೇಳುತ್ತೇವೆ ಎಂದು ಸ್ಥಳೀಯರು ಬ್ಯಾನರ್ ಹಾಕಿದರೂ ತ್ಯಾಜ್ಯ ಎಸೆದು ಹೋಗುತ್ತಿದ್ದ ಮಂದಿ ಸಿಸಿ ಕ್ಯಾಮಾರಾಕ್ಕೆ ಹೆದರಿ ಕಸದ ತೊಟ್ಟಿಗೇ ಈಗ ಕಸ ಕಸೆಯುತ್ತಾರೆ.

 ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ಕಾಪಾಡುವುದು ನಗರ ಪಂಚಾಯತ್ ನ ಕೆಲಸ ಹೌದು, ಜೊತೆಗೆ ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಮರೆಯಬಾರದು. ಸ್ವಚ್ಛ ನಗರವನ್ನು ರೂಪಿಸಲು ನಗರ ಪಂಚಾಯತ್ ಪಣ ತೊಟ್ಟಿದೆ, ಅದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ಅದು ಸಾಧ್ಯ  – ವಿನಯಕುಮಾರ್ ಕಂದಡ್ಕ , ನ.ಪಂ.ಸದಸ್ಯ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

ಪ್ರಮುಖ ಸುದ್ದಿ

MIRROR FOCUS

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ

Editorial pick

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |
July 12, 2025
1:52 PM
by: ಸಾಯಿಶೇಖರ್ ಕರಿಕಳ
ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ
July 12, 2025
11:32 AM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ
July 12, 2025
7:56 AM
by: ದ ರೂರಲ್ ಮಿರರ್.ಕಾಂ
ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಮಂಗಳದ ದೃಷ್ಟಿ | ಈ ರಾಶಿಗಳಿಗೆ ಆಕ್ರಮಣಕಾರಿ ತೀರ್ಮಾನಗಳಿಂದ ಲಾಭ..!
July 12, 2025
7:01 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

ವಿಶೇಷ ವರದಿ

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಕೃಷಿ ಅರಣ್ಯೀಕರಣ ಉತ್ತೇಜನಕ್ಕೆ ಕ್ರಮ | ಕೃಷಿ ಭೂಮಿಯಲ್ಲಿರುವ ಮರ ಕಡಿಯಲು ನಿಯಮಾವಳಿ |
June 30, 2025
6:13 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನ
June 27, 2025
8:40 PM
by: ದ ರೂರಲ್ ಮಿರರ್.ಕಾಂ

OPINION

ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?
June 26, 2025
6:31 AM
by: ರಮೇಶ್‌ ದೇಲಂಪಾಡಿ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?
June 19, 2025
6:38 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group