ಮಂಗಳೂರು: ಇತಿಹಾಸದಲ್ಲಿ ಅತ್ಯಂತಕ್ರೂರಿ, ಮತಾಂಧ, ಅಸಹಿಷ್ಣು, ಕನ್ನಡ ವಿರೋಧಿಯಾಗಿ ಕಾಣಿಸಿಕೊಂಡಿರುವ ಟಿಪ್ಪು ಸುಲ್ತಾನನನ್ನು ಅನಗತ್ಯವಾಗಿ ವೈಭವೀಕರಿಸಿ ಇತಿಹಾಸವನ್ನು ತಿರುಚಿ ಜನರಿಗೆ ತಿಳಿಸುವ ಮತ್ತು ಈ ಮೂಲಕ ಮಕ್ಕಳಿಗೆ ನಕಲಿ ಇತಿಹಾಸವನ್ನು ಕಲಿಸುವ ಪ್ರಯತ್ನ ನಡೆದಿತ್ತು. ಈಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂತಹ ಸುಳ್ಳು ಮತ್ತು ತಿರುಚಿದ ಟಿಪ್ಪುವಿನ ಇತಿಹಾಸವನ್ನು ಶಾಲಾಪಠ್ಯಕ್ರಮದಿಂದ ತೆಗೆದು ಹಾಕುವ ನಿರ್ಣಯ ತೆಗೆದುಕೊಂಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಣಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಬೆಂಬಲಿಸುತ್ತದೆ ಎಂದು ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ. ಇದರ ಜೊತೆಗೆ ಮೈಸೂರು ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನುಬದಲಾಯಿಸಿ, ಕೃಷ್ಣರಾಜ ಒಡೆಯರ್ ಹೆಸರನ್ನುಇಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel