ತಡವಾಗಿ ಬಂದ ಮುಂಗಾರು : ಇಂದಿನಿಂದ “ಮುಂಗಾರು ಮಳೆ” ಯ ವೈಭವ ಶುರುವಂತೆ…!

June 21, 2019
10:00 AM

ಸುಳ್ಯ: ನಿಜವಾದ ಮಳೆಗಾಲ ಇಂದಿನಿಂದ ಶುರುವಾಗುತ್ತದೆ..!. ಹೀಗೆ ಹೇಳಿದಾಗಲೇ ಅನೇಕರು ಈ ಬಾರಿ ಸಂಶಯ ಪಡುತ್ತಾರೆ. ಈ ವರ್ಷ ಮಳೆಗಾಲದ, ಹವಾಮಾನದ ಎಲ್ಲಾ ನಿರೀಕ್ಷೆಗಳೂ ಶೇ.100 ಸರಿಯಾಗಿಲ್ಲ. ಕಾರಣ ಹವಾಮಾನದಲ್ಲಿನ ದಿಢೀರ್ ಏರುಪೇರು.

Advertisement

ಹವಾಮಾನದ ಬದಲಾವಣೆಯ ವೀಕ್ಷಣೆ, ಮಳೆ ಲೆಕ್ಕ, ವಾತಾವರಣ ಬದಲಾವಣೆಯ ವೀಕ್ಷಣೆ ಬಹಳ ಕುತೂಹಲವಾಗಿರುತ್ತದೆ.  ಮಳೆಗಾಲವು ನಿರೀಕ್ಷೆಯಂತೆ ಜೂ.7 ರಂದು ಕೇರಳ ತಲಪಿ ಕರಾವಳಿ ಮೂಲಕ ಜೂ.10 ಕ್ಕೆ ರಾಜ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ತೀರಾ ವಿಳಂಬವಾಗಿಯೂ ಸರಿಯಾಗಿ ಮಳೆಗಾಲ ಆರಂಭವಾಗಿಲ್ಲ. ಕಾರಣ ನೈರುತ್ಯ ಮುಂಗಾರು ಆರಂಭವಾದ ಹೊತ್ತಿನಲ್ಲೇ ವಾಯು ಚಂಡಮಾರುತ ಆರಂಭವಾಯಿತು. ಮುಂಗಾರು ಬಲಕಳೆದುಕೊಂಡಿತು.

ಇದೀಗ ಮಳೆಗಾಲ ತನ್ನ ಮೂಲಸ್ವರೂಪ ಪಡೆದುಕೊಂಡಿದೆ. ಒಂದೆರಡು ಮಳೆ ಜೋರಾಗುತ್ತದೆ. ಮಂಗಳೂರು ಕಾಸರಗೋಡು ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ.
ನಾಳೆಯಿಂದ  24 ರವರೆಗೆ ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಇಡೀ ದ. ಕ. ಹಾಗೂ ಉಡುಪಿ ಭಾಗಗಳಲ್ಲೂ ಹೆಚ್ಚಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಚಿತ್ರ ಸೂಚಿಸುತ್ತದೆ.

Advertisement

ಈ ಬಾರಿ ಮಳೆಯ ಮುನ್ಸೂಚನೆ ಆಗಾಗ ತಪ್ಪಾಗಿದೆ. ಇದುವರೆಗೆ ಹೀಗೆ ಆಗುತ್ತಿರಲಿಲ್ಲ. ಹವಾಮಾನ ಇಲಾಖೆಯ ಉಪಗ್ರಹ ಆಧಾರಿತ ಚಿತ್ರ ಬಹುತೇಕ ಸರಿಯಾಗಿರುತ್ತಿತ್ತು ಎಂದು  ಹೇಳುತ್ತಾರೆ ಸಾಯಿಶೇಖರ್ ಕರಿಕಳ. ಇದೀಗ ಮಳೆಗಾಲ ಇಂದಿನಿಂದ ಶುರುವಾಗುತ್ತದೆ ಎಂದು ಉಪಗ್ರಹ ಚಿತ್ರ ಹೇಳುತ್ತದೆ ಎಂದು ಅವರು ಹೇಳುತ್ತಾರೆ.

Advertisement

 

ಇನ್ನೊಂದು ಶಾಕಿಂಗ್ ಅಂಶವೆಂದರೆ 1972 ರ ನಂತರ ಅತ್ಯಂತ ವಿಳಂಬವಾಗಿ ಮಳೆ ಬಂದ ವರ್ಷ 2019..!. ಈ ದಾಖಲೆಯನ್ನು  ಬಾಳಿಲದ ಪಿಜಿಎಸ್ ಎನ್ ಪ್ರಸಾದ್ ಹೇಳುತ್ತಾರೆ. ಅವರೇ ಹೇಳುವ ಹಾಗೆ,

 

ನನ್ನ ತಂದೆಯವರ ಡೈರಿಯಲ್ಲಿ ಕಂಡುಬಂದಂತೆ 1972 ರ ಬಳಿಕ (1972 ಜೂನ್ 20) ನಮ್ಮಲ್ಲಿ ಅತ್ಯಂತ ತಡವಾಗಿ (19/06/2019) ಮುಂಗಾರು ಮಳೆ ಆರಂಭವಾದ ವರ್ಷವಿದು. ಅಂದು ಜೂನ್ 20… ಈ ಬಾರಿ 19 ಜೂನ್…!. ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು ಎಂದು ಪ್ರಸಾದ್ ಹೇಳುತ್ತಾರೆ.

Advertisement

 

ಪ್ರಸಾದ್ ಅವರ ಮಳೆ ಲೆಕ್ಕದ ಪ್ರಕಾರ

ವಾಡಿಕೆಗಿಂತ ( ಜೂನ್ 6 ) ತಡವಾಗಿ ಮಳೆಗಾಲ ಆರಂಭವಾದ ವರ್ಷಗಳು… ಹಾಗೂ ಆಯಾ ವರ್ಷ ವಾರ್ಷಿಕವಾಗಿ ಸುರಿದ ಒಟ್ಟು ಮಳೆ ಹೀಗಿದೆ

15/06/1979…. …3579 ಮಿ.ಮೀ
16/06/1983……..5119 ಮಿ.ಮೀ
11/06/1995……..4037 ಮಿ.ಮೀ
10/06/1996……..4562 ಮಿ.ಮೀ
12/06/1997……..4769 ಮಿ.ಮೀ
08/06/1998……..5443 ಮಿ.ಮೀ
10/06/2003……..4046 ಮಿ.ಮೀ
08/06/2005……..4253 ಮಿ.ಮೀ
12/06/2007……..4868 ಮಿ.ಮೀ
08/06/2012……..4314 ಮಿ.ಮೀ
09/06/2014……. 4450 ಮಿ.ಮೀ.
19/06/2019……..????

ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು. ಹವಾಮಾನ ಇಲಾಖೆಯನ್ನೇ ಗೊಂದಲಕ್ಕೀಡು ಮಾಡಿದ ನೈರುತ್ಯ ಮುಂಗಾರು ಮಾರುತ ಈಗ ಸ್ವಲ್ಪ ಮಟ್ಟಿನ ವೇಗ ಪಡಕೊಂಡಂತಿದೆ. ಮುಂದಿನ ಬೆಳವಣಿಗೆ ಏನು ಗೊತ್ತಿಲ್ಲ…!

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೆ.ಎಸ್.ಆರ್.ಟಿ.ಸಿ ಅಪ್ರೆಂಟಿಸ್ ತರಬೇತಿ : ಅರ್ಜಿ ಆಹ್ವಾನ
August 5, 2025
10:54 PM
by: The Rural Mirror ಸುದ್ದಿಜಾಲ
ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಗದಗ | ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
July 19, 2025
8:56 PM
by: ದ ರೂರಲ್ ಮಿರರ್.ಕಾಂ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group