( ಇಂಟರ್ನೆಟ್ ಚಿತ್ರ )
ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದೆ. ಹೀಗಾಗಿ ಲಾಕ್ಡೌನ್ ನಿಯಮ ಪಾಲಿಸಿ ಎಂದು ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳಿಗೆ ಮನವಿ ಮಾಡಿದೆ. ಈ ನಡುವೆ ಭಾರತದಲ್ಲಿ ಕೊರೊನಾ ಹಾಟ್ಸ್ಪಾಟ್ಗಳೆಂದು ಗುರುತಿಸಿಕೊಳ್ಳದ ಪ್ರದೇಶಗಳಲ್ಲಿ , ಕೊರೊನಾ ನೆಗೆಟಿವ್ ಪ್ರಕರಣಗಳು ಇರುವ ಕಡೆ ಕೊಂಚ ಬದಲಾವಣೆ ತಂದಿದೆ. ಉಳಿದ ಕಡೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಇರಲಿ ಎಂದೂ ಹೇಳಿದೆ.
ಬ್ಯಾಂಕೇತರ ಸಂಸ್ಥೆಗಳು, ಸಣ್ಣ ಹಣಕಾಸು ವ್ಯವಹಾರಗಳ ಸಂಸ್ಥೆಗಳು, ಆಯುಷ್, ಕಾರ್ಮಿಕ ವರ್ಗ, ರೈತರು ಮೊದಲಾದವರಿಗೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಈ ವಿನಾಯಿತಿ ನೀಡಲಾಗಿದೆ. ಹಣಕಾಸು ವಲಯ, ಆರೋಗ್ಯ ಸೇವೆ, ವಾಣಿಜ್ಯ ಉದ್ಯಮ, ಸ್ವ ಉದ್ಯೋಗ, ಸಂಚಾರ ವ್ಯವಸ್ಥೆ, ಜನ ಸಂಚಾರ, ಕೃಷಿ, ಸಣ್ಣ ಕೈಗಾರಿಕೆ, ಸಾಮಾಜಿಕ ಸೇವೆ ಮೊದಲಾದ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಈ ಆದೇಶ ಹೊರಡಿಸಿದೆ.ಗ್ರಾಮೀಣ ಪ್ರದೇಶದಲ್ಲಿ ಆಹಾರ ಸಂಸ್ಕರಣೆ, ರಸ್ತೆ ಕೆಲಸಗಳು, ನೀರಾವರಿ, ನಿರ್ಮಾಣ ಕಾರ್ಯ ಮೊದಲಾದವುಗಳಿಗೆ ಅವಕಾಶ ನೀಡಲಾಗಿದೆ.
ಮತ್ತೊಂದೆಡೆ ಕೇರಳ ಸರಕಾರ ಲಾಕ್ಡೌನ್ನು ಸಡಿಲಗೊಳಿಸಿದ್ದು, ಸ್ಥಳೀಯ ನೌಕರರು, ಕ್ಷೌರಿಕರು, ರೆಸ್ಟೋರೆಂಟ್ ಗಳು, ಬುಕ್ ಸ್ಟೋರ್’ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಅಲ್ಲದೆ, ಆರೆಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಬಸ್ ಸಂಚಾರಗಳನ್ನು ಆರಂಭಿಸಿದೆ.
ಈಗಿನಂತೆ ಜೂನ್ 29 ಹಾಗೂ 30 ರಂದು ಮಳೆಯ ಪ್ರಮಾಣ ಕಡಿಮೆಯಿರುವ ಸಾಧ್ಯತೆಗಳಿದ್ದು,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…