ಸುಳ್ಯ: ನದಿಗಳು ಜೀವಜಾಲವನ್ನು ಪೋಷಿಸುತ್ತವೆ ಮತ್ತು ಬದುಕಿಸುತ್ತವೆ. ಆದುದರಿಂದ ನದಿಯನ್ನು ಮಾಲಿನ್ಯಗೊಳಿಸುವುದು ದೇಶದ್ರೋಹಕ್ಕೆ ಸಮಾನವಾದ ಅಪರಾಧ. ನದಿ ಮಲಿನಗೊಳಿಸುವವರನ್ನು ಪತ್ತೆಮಾಡಿ ಉಗ್ರಶಿಕ್ಷೆ ನೀಡಬೇಕು ಮತ್ತು ಅತಿ ಹೆಚ್ಚು ದಂಡ ವಸೂಲಿ ಮಾಡಬೇಕು ಎಂದು ಅರ್ಥಶಾಸ್ತ್ರಜ್ಞ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಅವರು ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ಪೆರಾಜೆಯಲ್ಲಿ ಏರ್ಪಡಿಸಿದ ‘ನದಿ ಮಾಲಿನ್ಯ ತಡೆಗಟ್ಟುವುದು ಹೇಗೆ’ ಎಂಬ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು. 1974ರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ ಹಾಗೂ 1984ರ ಪರಿಸರ ಸಂರಕ್ಷಣಾ ಕಾಯಿದೆಯ ಪ್ರಕಾರ ಜಲಮಾಲಿನ್ಯ ಉಗ್ರ ಶಿಕಾರ್ಹ ಅಪರಾಧ. ಸುಳ್ಯದ ಜೀವನದಿ ಪಯಸ್ವಿನಿ ಮಾಲಿನ್ಯದಿಂದಾಗಿ ಮೃತನದಿಯಾಗುವುದರಲ್ಲಿದೆ. ತಮ್ಮ ಕಣ್ಣೆದುರಲ್ಲೇ ಸಂಭವಿಸುತ್ತಿರುವ ಈ ಘೋರ ದುರಂತದ ಬಗ್ಗೆ ಜನನಾಯಕರು ಮತ್ತು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿರುವುದು ಅಕ್ಷಮ್ಯ. ಇನ್ನು ಮುಂದಾದರೂ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಮುಂದಿನ ಪೀಳಿಗೆಗೆ ಪಯಸ್ವಿನಿಯನ್ನು ನಿರ್ಮಲವಾಗಿಸಿ ಕೊಡುಗೆ ನೀಡುವಂತಾಗಲಿ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಸ್ವಾಭಿಮಾನಿ ಬಳಗದ ಅಧ್ಯಕ್ಷ ಮಹಮ್ಮದ್ ಕುಕ್ಕಪಳ್ಳಿ ಮಾತನಾಡಿ ನಮ್ಮ ಸಾಮಾಜಿಕರಿಗೆ ಪರಿಸರ ಮಾಲಿನ್ಯದ ಪರಿವೆಯೇ ಇಲ್ಲ. ನಾವು ಮುಂದಿನ ಪೀಳಿಗೆಗೆ ಎಂತಹ ಬರಡು ಭೂಮಿಯನ್ನು ಬಿಟ್ಟು ಹೋಗುತ್ತಿದ್ದೇವೆ ಎಂದರೆ ಮನುಕುಲದ ಅಂತ್ಯ ಸಮೀಪಿಸಿತೇನೋ ಎಂಬ ಭೀತಿ ಮೂಡುತ್ತಿದೆ ಎಂದರು.
ಉನೈಸ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ಆಲಿ ಪೆರಾಜೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುರೇಶ ಪೆರಮುಂಡ ಉಪಸ್ಥಿತರಿದ್ದರು. ಅಶೋಕ ಪೀಚೆಮನೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸೀತಾರಾಮ ಕದಿಕಡ್ಕ ಪ್ರಾರ್ಥನೆ ಮಾಡಿದರು. ಶರೀಫ್ ಪೆರಾಜೆ ವಂದಿಸಿದರು.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…