Advertisement
ಯಕ್ಷಗಾನ : ಮಾತು-ಮಸೆತ

ನನ್ನನ್ನೇ ನಾನು ವಿಕ್ರಯಿಸಿಕೊಳ್ಳುವಾಗ ನನಗಿಷ್ಟು ಮೌಲ್ಯ ಅಂತ ಹೇಳಕೂಡದು…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ

(ವಾಗ್ದಾನದಂತೆ ವಿಶ್ವಾಮಿತ್ರ ಮಹರ್ಷಿಗೆ ಸಲ್ಲಬೇಕಾದ ಹೊನ್ನನ್ನು ಪಾವತಿಸಲು ತೊಂದರೆಯಾದಾಗ, ಕೊನೆಗೆ ತನ್ನನ್ನು ತಾನು ‘ವೀರಬಾಹುಕ’ನಿಗೆ ಮಾರುವ ಸಂದರ್ಭ)

“ಮಹನೀಯ…. ಸ್ಮಶಾನದ ಕಾವಲುಗಾರ ನೀನು. ಒಬ್ಬ ಮನಷ್ಯನು ಹುಟ್ಟಿ ಸಾಯುವಲ್ಲಿಯ ವರೆಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಅನುಭವಿಸಿಕೊಳ್ಳಬೇಕು ಎಂಬ ಹಿರಿಯರ ಮಾತು ಮಿಕ್ಕವರಿಗೆ ಸಿಕ್ಕಲಿಲ್ಲವೋ, ದಕ್ಕಲಿಲ್ಲವೋ, ಆದರೆ ನನಗೆ ಮಾತ್ರ ಸಿಕ್ಕಿದೆ. ಅದನ್ನು ದಕ್ಕಿಸಿಕೊಳ್ಳುವ ಯತ್ನದಲ್ಲಿ ನಾನಿದ್ದೇನೆ. ಸುಡುಗಾಡಿನಲ್ಲಿ ನಾವು ಕಲಿಯಬೇಕಾದ ಅಂಶ ಬೇಕಾದಷ್ಟಿದೆ. ಬದುಕಿದ್ದರೆ ತಾನೆ ‘ನಾನು’, ‘ನನ್ನದು’.. ಆಮೇಲೆ ಅದಕ್ಕೆ ಸಂಬಂಧಿಸಿದಂತಹ ಇತರ ವಿಭಕ್ತಿಗಳ ಸಂಬಂಧ. ಹೇಳಿಕೇಳಿ ನಮ್ಮ ಪೌರಾಣಿಕರು ಭಾವುಕತೆಯಲ್ಲಿ ಸತ್ಯಸ್ವರೂಪನಾದ ಶಿವನ ಆಸ್ಥಾನವೇ ‘ಸ್ಮಶಾನ’ ಅಂತ ಕಲ್ಪಿಸಿದರು. ಎಲ್ಲಿ ಭೌತಿಕವಾದುದೆಲ್ಲಾ ಸ್ಥೂಲವಾಗಿ ಸುಟ್ಟು ಬೂದಿಯಾಗುತ್ತಾ ಇದೆಯೋ ಆ ಸ್ಥಾನವೇ ಶಿವನ ಸ್ಥಾನ ಎಂಬುದಕ್ಕೊಂದು ಸಂಕೇತ.

ಆಯುಷ್ಯದಲ್ಲಿ ಬಹುಭಾಗವನ್ನು ನಾನು ಸಾಗಿ ಬಂದಿದ್ದೇನೆ. ಆದ್ದರಿಂದ ನಿನ್ನ ಆಣತಿಯಂತೆ, ಕಾವಲುಗಾರನಾಗಿದ್ದು ಹೆಣ ಸುಡಬೇಕಾದರೆ ಒಂದು ಹಣದಂತೆ ದೊರಕಿಸು. ನಿನ್ನ ಋಣದಿಂದ ಮುಕ್ತವಾಗುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ಆದರೆ ಒಂದಿದೆ, ‘ನನ್ನನ್ನೇ ನಾನು ವಿಕ್ರಯಿಸಿಕೊಳ್ಳುವಾಗ ನನಗಿಷ್ಟು ಮೌಲ್ಯ ಅಂತ ಹೇಳಕೂಡದು’. ಯಾವನೂ ತನ್ನ ಬಗ್ಗೆ ಮೌಲ್ಯವನ್ನು ಕಲ್ಪಿಸಿಕೊಳ್ಳಕೂಡದು. ನಮ್ಮ ಬಗ್ಗೆ ನಾವೇ ಮೌಲ್ಯವನ್ನು ಕಲ್ಪಿಸುತ್ತೇವೆಂದಾದರೆ ಸ್ವಾಭಾವಿಕವಾಗಿ ಮಿಕ್ಕವರಿಗೆ ನಾವು ಕಲ್ಪಿಸುವ ಮೌಲ್ಯಕ್ಕಿಂತ ಸ್ವಲ್ಪ ಅಧಿಕವೇ ಆದ ‘ಸ್ವಾರ್ಥ’ ಆಗಿ ಬಿಡುತ್ತದೆ. ಮನುಷ್ಯ ಸಹಜವದು.

ಆದರೆ ನಾನು ನಿನ್ನ ಭೋಗಕ್ಕಾಗಿಯೋ, ಸುಖಕ್ಕಾಗಿಯೋ ವಿಕ್ರಯಿಸಿಕೊಳ್ಳುತ್ತಾ ಇಲ್ಲ. ಪರಮ ಋಷಿ, ಬ್ರಹ್ಮರ್ಷಿ, ನನ್ನ ಪಿತೃಗಳನ್ನು ಉದ್ಧಾರ ಮಾಡಿದ ನನ್ನ ಆತ್ಯಂತಿಕ ಆಚಾರ್ಯಸ್ಥಾನದಲ್ಲಿದ್ದ ವಿಶ್ವಾಮಿತ್ರರು. ಮೊದಲ ವಾಗ್ದಾನದಂತೆ ಅವರ ಋಣದಿಂದ ನಾನು ಮುಕ್ತನಾಗಬೇಕಾದರೆ ಆನೆಯ ಮೇಲೆ ಕಟ್ಟಾಳುವಾದ ಒಬ್ಬನು ನಿಂತು ಕೈಯಲ್ಲಿ ಹಿಡಿದ ಕವಡೆಯನ್ನು ಎತ್ರರಕ್ಕೆ ಹಾರಿಸಿದರೆ ಅದು ಎಷ್ಟು ಔನ್ನತ್ಯವನ್ನು ತೋರಿಸುತ್ತದೋ ಅಷ್ಟು ಎತ್ತರದ ಹೊನ್ನ ರಾಶಿಯನ್ನು ಕೊಡಬೇಕಾಗುತ್ತದೆ. ನಾನು ಹೊನ್ನನ್ನು ಕೊಟ್ಟ ಬಳಿಕ ‘ನಾನು ಸಾಲ ನಿವೃತ್ತಿ ಹೊಂದಿದ್ದೇನೆ’ ಅಂತ ಅವರು ಹೇಳಿದರೆ ಸಾಕು. ಯಾಕೆಂದರೆ ನಿನ್ನ ಉದ್ಯೋಗ ಅಥವಾ ನಿನ್ನದ್ದಾದ ವ್ಯಕ್ತಿತ್ವ ಉಪಯೋಗಿಸಿ, ಕೌಶಿಕರಲ್ಲಿ ನೀನು ಮೌಲ್ಯವನ್ನು ಕಡಿಮೆ ಮಾಡಿಸಿಕೊಳ್ಳುತ್ತಿ ಅಂತಾದರೆ ಅದು ನಿನಗಿದ್ದ ಲಾಭ. ನಾನು ಆ ಲಾಭದಲ್ಲಿ ಕೈ ನೀಡಲಾರೆ…”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

2 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

21 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

2 days ago