‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ….. ‘ಯಾಕೆ ಶಿವ ಸಾಯಲಿಲ್ಲ’?

October 21, 2019
11:00 AM

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಚಾರ್ವಾಕ’)
ಪ್ರಸಂಗ : ತ್ರಿಪುರ ಮಥನ

Advertisement

(ಸಂದರ್ಭ : ನಾರದನ ಸೂಚನೆಯಂತೆ ತ್ರಿಪುರಾಸುರರ ಹನನಕ್ಕಾಗಿ ಅವರ ಪತ್ನಿಯರ ಶೀಲವನ್ನು ಶಿಥಿಲಗೊಳಿಸಲು ನಾರಾಯಣನನು ಚಾರ್ವಾಕನಾಗುತ್ತಾನೆ)

“… ತ್ರಿಪುರರಿಗೆ ಏನಿದೆ ಸಾಮಥ್ರ್ಯ? ಬ್ರಹ್ಮನ ವರ ಮಾತ್ರ. ಆದರೆ ಅವರ ಚಿರಂಜೀವಿತಕ್ಕೆ ಕಾರಣ- ‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ. ‘ಯಾಕೆ ಶಿವ ಸಾಯಲಿಲ್ಲ’? ಶಿವದೇವರ ಅರ್ಧ ಶರೀರ ಸರ್ವಮಂಗಳೆಯಾದ ಪಾರ್ವತಿ. ಸತಿಯಾದವಳು ತನ್ನ ಮಾಂಗಲ್ಯದ ಪ್ರಭಾವದಿಂದ ಸರ್ವಮಂಗಳೆ, ಪೂರ್ಣಮಂಗಳೆಯಾಗಿರುತ್ತಾಳೆ. ಅವಳ ಮಾಂಗಲ್ಯದ ಪ್ರಭಾವ ಇದ್ದುದರಿಂದ ಗಂಡ ಸಾಯಬೇಕು ಅಂತ ಹೊರಟರೂ ಸಾಯುವುದಕ್ಕೆ ಆ ಮಂಗಳಸೂತ್ರ ಬಿಡುವುದಿಲ್ಲ. ಇದು ಪ್ರಪಂಚಕ್ಕೆ ಬಹು ದೊಡ್ಡದಾದ ಪಾಠ. ಹಾಗಾಗಿಯೇ ವಿವಾಹ ಸಂಸ್ಕಾರದಲ್ಲಿ ಗಂಡನಾದವನು ಕಾಮನನ್ನು ಸುಟ್ಟವನೂ ಆಗಿರಬೇಕು. ಕಾಮನನ್ನು ಗೆದ್ದವನೂ ಆಗಬೇಕು. ಕಾಮಜನಕನಾಗಿರಬೇಕು. ಕಾಮ ವಿರೋಧಿಯಾಗಬೇಕು. ಅಂತಹ ಗಂಡನನ್ನು ಯಾವಳು ಆರಿಸಿಕೊಳ್ಳುತ್ತಾಳೋ ಅವಳು ಪೂರ್ಣಮಂಗಳೆಯೂ, ಸರ್ವಮಂಗಳೆಯೂ ಆಗಿರುತ್ತಾಳೆ..”

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಯಾರಿಗೆ ಧೈರ್ಯ ಉಂಟು ಮಾರಾಯ್ರೆ, ‘ಈ ತುಪ್ಪದ ಭರಣಿಯನ್ನು ಒಲೆಯ ಬುಡದಲ್ಲಿ ಇಡಲು…!’
April 13, 2020
10:23 PM
by: ನಾ.ಕಾರಂತ ಪೆರಾಜೆ
ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….
November 7, 2019
2:49 PM
by: ನಾ.ಕಾರಂತ ಪೆರಾಜೆ
‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ……
October 12, 2019
2:33 PM
by: ನಾ.ಕಾರಂತ ಪೆರಾಜೆ
ಹುಟ್ಟಿದವರು ಸಾಯ್ತಾರೆ….. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ…..
September 25, 2019
11:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group