Advertisement
ಯಕ್ಷಗಾನ : ಮಾತು-ಮಸೆತ

‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ….. ‘ಯಾಕೆ ಶಿವ ಸಾಯಲಿಲ್ಲ’?

Share

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಚಾರ್ವಾಕ’)
ಪ್ರಸಂಗ : ತ್ರಿಪುರ ಮಥನ

(ಸಂದರ್ಭ : ನಾರದನ ಸೂಚನೆಯಂತೆ ತ್ರಿಪುರಾಸುರರ ಹನನಕ್ಕಾಗಿ ಅವರ ಪತ್ನಿಯರ ಶೀಲವನ್ನು ಶಿಥಿಲಗೊಳಿಸಲು ನಾರಾಯಣನನು ಚಾರ್ವಾಕನಾಗುತ್ತಾನೆ)

“… ತ್ರಿಪುರರಿಗೆ ಏನಿದೆ ಸಾಮಥ್ರ್ಯ? ಬ್ರಹ್ಮನ ವರ ಮಾತ್ರ. ಆದರೆ ಅವರ ಚಿರಂಜೀವಿತಕ್ಕೆ ಕಾರಣ- ‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ. ‘ಯಾಕೆ ಶಿವ ಸಾಯಲಿಲ್ಲ’? ಶಿವದೇವರ ಅರ್ಧ ಶರೀರ ಸರ್ವಮಂಗಳೆಯಾದ ಪಾರ್ವತಿ. ಸತಿಯಾದವಳು ತನ್ನ ಮಾಂಗಲ್ಯದ ಪ್ರಭಾವದಿಂದ ಸರ್ವಮಂಗಳೆ, ಪೂರ್ಣಮಂಗಳೆಯಾಗಿರುತ್ತಾಳೆ. ಅವಳ ಮಾಂಗಲ್ಯದ ಪ್ರಭಾವ ಇದ್ದುದರಿಂದ ಗಂಡ ಸಾಯಬೇಕು ಅಂತ ಹೊರಟರೂ ಸಾಯುವುದಕ್ಕೆ ಆ ಮಂಗಳಸೂತ್ರ ಬಿಡುವುದಿಲ್ಲ. ಇದು ಪ್ರಪಂಚಕ್ಕೆ ಬಹು ದೊಡ್ಡದಾದ ಪಾಠ. ಹಾಗಾಗಿಯೇ ವಿವಾಹ ಸಂಸ್ಕಾರದಲ್ಲಿ ಗಂಡನಾದವನು ಕಾಮನನ್ನು ಸುಟ್ಟವನೂ ಆಗಿರಬೇಕು. ಕಾಮನನ್ನು ಗೆದ್ದವನೂ ಆಗಬೇಕು. ಕಾಮಜನಕನಾಗಿರಬೇಕು. ಕಾಮ ವಿರೋಧಿಯಾಗಬೇಕು. ಅಂತಹ ಗಂಡನನ್ನು ಯಾವಳು ಆರಿಸಿಕೊಳ್ಳುತ್ತಾಳೋ ಅವಳು ಪೂರ್ಣಮಂಗಳೆಯೂ, ಸರ್ವಮಂಗಳೆಯೂ ಆಗಿರುತ್ತಾಳೆ..”

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

2 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

3 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

5 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

8 hours ago