(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಚಾರ್ವಾಕ’)
ಪ್ರಸಂಗ : ತ್ರಿಪುರ ಮಥನ
(ಸಂದರ್ಭ : ನಾರದನ ಸೂಚನೆಯಂತೆ ತ್ರಿಪುರಾಸುರರ ಹನನಕ್ಕಾಗಿ ಅವರ ಪತ್ನಿಯರ ಶೀಲವನ್ನು ಶಿಥಿಲಗೊಳಿಸಲು ನಾರಾಯಣನನು ಚಾರ್ವಾಕನಾಗುತ್ತಾನೆ)
“… ತ್ರಿಪುರರಿಗೆ ಏನಿದೆ ಸಾಮಥ್ರ್ಯ? ಬ್ರಹ್ಮನ ವರ ಮಾತ್ರ. ಆದರೆ ಅವರ ಚಿರಂಜೀವಿತಕ್ಕೆ ಕಾರಣ- ‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ. ‘ಯಾಕೆ ಶಿವ ಸಾಯಲಿಲ್ಲ’? ಶಿವದೇವರ ಅರ್ಧ ಶರೀರ ಸರ್ವಮಂಗಳೆಯಾದ ಪಾರ್ವತಿ. ಸತಿಯಾದವಳು ತನ್ನ ಮಾಂಗಲ್ಯದ ಪ್ರಭಾವದಿಂದ ಸರ್ವಮಂಗಳೆ, ಪೂರ್ಣಮಂಗಳೆಯಾಗಿರುತ್ತಾಳೆ. ಅವಳ ಮಾಂಗಲ್ಯದ ಪ್ರಭಾವ ಇದ್ದುದರಿಂದ ಗಂಡ ಸಾಯಬೇಕು ಅಂತ ಹೊರಟರೂ ಸಾಯುವುದಕ್ಕೆ ಆ ಮಂಗಳಸೂತ್ರ ಬಿಡುವುದಿಲ್ಲ. ಇದು ಪ್ರಪಂಚಕ್ಕೆ ಬಹು ದೊಡ್ಡದಾದ ಪಾಠ. ಹಾಗಾಗಿಯೇ ವಿವಾಹ ಸಂಸ್ಕಾರದಲ್ಲಿ ಗಂಡನಾದವನು ಕಾಮನನ್ನು ಸುಟ್ಟವನೂ ಆಗಿರಬೇಕು. ಕಾಮನನ್ನು ಗೆದ್ದವನೂ ಆಗಬೇಕು. ಕಾಮಜನಕನಾಗಿರಬೇಕು. ಕಾಮ ವಿರೋಧಿಯಾಗಬೇಕು. ಅಂತಹ ಗಂಡನನ್ನು ಯಾವಳು ಆರಿಸಿಕೊಳ್ಳುತ್ತಾಳೋ ಅವಳು ಪೂರ್ಣಮಂಗಳೆಯೂ, ಸರ್ವಮಂಗಳೆಯೂ ಆಗಿರುತ್ತಾಳೆ..”
ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…
ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…
ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…
ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…