(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಚಾರ್ವಾಕ’)
ಪ್ರಸಂಗ : ತ್ರಿಪುರ ಮಥನ
(ಸಂದರ್ಭ : ನಾರದನ ಸೂಚನೆಯಂತೆ ತ್ರಿಪುರಾಸುರರ ಹನನಕ್ಕಾಗಿ ಅವರ ಪತ್ನಿಯರ ಶೀಲವನ್ನು ಶಿಥಿಲಗೊಳಿಸಲು ನಾರಾಯಣನನು ಚಾರ್ವಾಕನಾಗುತ್ತಾನೆ)
“… ತ್ರಿಪುರರಿಗೆ ಏನಿದೆ ಸಾಮಥ್ರ್ಯ? ಬ್ರಹ್ಮನ ವರ ಮಾತ್ರ. ಆದರೆ ಅವರ ಚಿರಂಜೀವಿತಕ್ಕೆ ಕಾರಣ- ‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ. ‘ಯಾಕೆ ಶಿವ ಸಾಯಲಿಲ್ಲ’? ಶಿವದೇವರ ಅರ್ಧ ಶರೀರ ಸರ್ವಮಂಗಳೆಯಾದ ಪಾರ್ವತಿ. ಸತಿಯಾದವಳು ತನ್ನ ಮಾಂಗಲ್ಯದ ಪ್ರಭಾವದಿಂದ ಸರ್ವಮಂಗಳೆ, ಪೂರ್ಣಮಂಗಳೆಯಾಗಿರುತ್ತಾಳೆ. ಅವಳ ಮಾಂಗಲ್ಯದ ಪ್ರಭಾವ ಇದ್ದುದರಿಂದ ಗಂಡ ಸಾಯಬೇಕು ಅಂತ ಹೊರಟರೂ ಸಾಯುವುದಕ್ಕೆ ಆ ಮಂಗಳಸೂತ್ರ ಬಿಡುವುದಿಲ್ಲ. ಇದು ಪ್ರಪಂಚಕ್ಕೆ ಬಹು ದೊಡ್ಡದಾದ ಪಾಠ. ಹಾಗಾಗಿಯೇ ವಿವಾಹ ಸಂಸ್ಕಾರದಲ್ಲಿ ಗಂಡನಾದವನು ಕಾಮನನ್ನು ಸುಟ್ಟವನೂ ಆಗಿರಬೇಕು. ಕಾಮನನ್ನು ಗೆದ್ದವನೂ ಆಗಬೇಕು. ಕಾಮಜನಕನಾಗಿರಬೇಕು. ಕಾಮ ವಿರೋಧಿಯಾಗಬೇಕು. ಅಂತಹ ಗಂಡನನ್ನು ಯಾವಳು ಆರಿಸಿಕೊಳ್ಳುತ್ತಾಳೋ ಅವಳು ಪೂರ್ಣಮಂಗಳೆಯೂ, ಸರ್ವಮಂಗಳೆಯೂ ಆಗಿರುತ್ತಾಳೆ..”
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…