ಸುಳ್ಯ:/ದುಬೈ” ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್.ದುಬೈಸೌತ್ ಝೋನ್ ಸಮೀತಿ ವತಿಯಿಂದ ನೂತನ ವಾಗಿ ಆಯ್ಕೆ ಗೊಂಡ ಯುನಿಟ್, ಸೆಕ್ಟರ್ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ”ಬೋಟ್ ಎನ್ ಚಾಟ್”ಎಂಬ ಶಿರ್ಷಿಕೆ ಶುಕ್ರವಾರ ದುಬೈ ಅಬ್ರದಲ್ಲಿ ಹಡಗು ಯಾತ್ರೆಯೊಂದಿಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ ವಹಿಸಿದ್ದರು.ರಾಷ್ಟ್ರೀಯ ಶಿಕ್ಷಣ ವಿಭಾಗ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಜಾಮಿಯಃ ಸಅದಿಯ್ಯಃಅರಬಿಯ್ಯಃ ದುಬೈ ಸೆಂಟರ್ ಮುದರ್ರಿಸ್ ಮುನೀರ್ ಬಾಖವಿ ತುರ್ತ್ತಿ ಸಂಘಟನಾ ತರಗತಿ ನಡೆಸಿ ಕೊಟ್ಟರು.
ಯುನಿಟ್ , ಸೆಕ್ಟರ್ ನಿಂದ ಬಂದಂತಹ ನಾಯಕರಲ್ಲಿ ಆಯ್ದ ಪ್ರತಿನಿಧಿಗಳು ತಮ್ಮ,ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬರ್ ದುಬೈ,ಸತ್ವ, ಅಲ್ ಕೂಝ್,ಜಬಲ್ ಅಲಿ ಸೆಕ್ಟರ್ ನಾಯಕರು ಮತ್ತು ಸೆಕ್ಟರ್ ವ್ಯಾಪ್ತಿಯ ಸುಮಾರು 17 ಯುನಿಟ್ ನ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಲ್ಮಾನ್ ಸಖಾಫಿ ಸ್ವಾಗತಿಸಿ, ರಫೀಕ್ ಜೆಪ್ಪು ವಂದಿಸಿದರು.ಶರೀಫ್ ಹೋಸ್ಮಾರ್ ಕಾರ್ಯ ಕ್ರಮ ನಿರೂಪಿಸಿದರು.
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…