Advertisement
ಯಕ್ಷಗಾನ : ಮಾತು-ಮಸೆತ

ನಾವಾರು? ಎಂಬುದನ್ನು ತಿಳಿಯದೇ ಇದ್ದರೆ ನಮ್ಮ ವ್ಯಕ್ತಿತ್ವಕ್ಕಾಗಲೀ, ಅಸ್ತಿತ್ವಕ್ಕಾಗಲೀ ಅರ್ಥವಿಲ್ಲ

Share

ಶೇಣಿ ಗೋಪಾಲಕೃಷ್ಣ ಭಟ್ಟರ ‘ವಿಷ್ಣು’
ಪ್ರಸಂಗ : ಶ್ರೀ ದೇವಿಮಹಾತ್ಮ್ಯೆ

(ಸಂದರ್ಭ : ತ್ರಿಮೂರ್ತಿಗಳಿಗೆ ಆದಿಮಾಯೆಯು ಗುಣ, ಕರ್ತವ್ಯ, ನೆಲೆಗಳನ್ನು ಅನುಗ್ರಹಿಸುವ ಸಂದರ್ಭ)

ನಾಮರೂಪಾತ್ಮಕವಾಗಿ ಯಾವುದು ಕಣ್ಣಿಗೆ ಗೋಚರಿಸುತ್ತದೋ, ಅದು ಸ್ವಯಂಭೂ ಆಗಲಾರದು. ತನ್ನಿಂದ ತಾನೆ ಹುಟ್ಟಿಕೊಂಡದ್ದು ಅಲ್ಲದಿದ್ದ ಮೇಲೆ ಇದನ್ನು ಕಾಣೋಣ ಅಂತ ಅಂಗೀಕರಿಸಿದರೆ ಇದಕ್ಕೊಂದು ಕಾರ್ಯವನ್ನು ಗುರುತಿಸಲೇಬೇಕು. ನನ್ನ ಜತೆಗೆ ನನ್ನ ಹಾಗೆ ಇನ್ನಿಬ್ಬರು ಇದ್ದಾರೆ. ನಾವೇನು? ನಾವಾರು? ಎಂಬುದನ್ನು ತಿಳಿಯದೇ ಇದ್ದರೆ ನಮ್ಮ ವ್ಯಕ್ತಿತ್ವಕ್ಕಾಗಲೀ, ಅಸ್ತಿತ್ವಕ್ಕಾಗಲೀ ಅರ್ಥವಿಲ್ಲ ಎಂದಾಗುತ್ತದೆ. ಏನೇ ಆದರೂ ಇದರ ಕುರಿತಾಗಿ ನಾನಂತೂ ಅಜ್ಞನಿದ್ದೇನೆ. ಬಹುಶಃ ಇವರೂ ಹಾಗೆನೇ ಇರಬೇಕು. ಪರಸ್ಪರರು ಮುಖವನ್ನು ಮುಖದಿಂದ ದರ್ಶಿಸುತ್ತಾರೆಯೇ ಹೊರತು ಮುಖದಲ್ಲಿದ್ದ ಶಬ್ದರೂಪವಾದ ಬಾಯಿ ತೆರೆಯುವುದಿಲ್ಲ.

ಯಾವಾಗ ನಮಗೆ ಒಂದು ಕಾರಣ ಗೊತ್ತಾಗುವುದಿಲ್ಲವೋ ಅಲ್ಲಿ ನಾವು ‘ಅವಿದ್ಯಾ’ ಎಂಬ ಸ್ಥಾನವನ್ನು ಗುರುತಿಸಬೇಕಾಗುತ್ತದೆ. ಯಾವಾಗ, ಎಲ್ಲಿ, ಯಾರು ಹೇಳಿದರು ಎಂಬುದು ಪ್ರಜ್ಞೆಗೆ ಬರುವುದಿಲ್ಲವಾದರೂ ಅನಾದಿ, ಅವಿದ್ಯಾ ಎಂಬ ಸ್ಫುರಣವಾಗುತ್ತಿದೆ. ಹಾಗಾದರೆ ಅವಿದ್ಯಾ ಎಂಬುದು ಅನಾದಿ ಎನಿಸುತ್ತದೆ. ಆದರೆ ಬರೇ ಅವಿದ್ಯಾ ಅಲ್ಲ. ವಿದ್ಯೆಯೂ ಅನಾದಿಯೇ. ಹಾಗಾದರೆ ವಿದ್ಯಾ, ಅವಿದ್ಯಾ ಇದು ಎರಡೂ ಬೇರೆ ಬೇರೆಯಲ್ಲ. ಒಂದೇ ಆಗಿರಬೇಕು ಎಂಬ ಸ್ಫುರಣವಾಗುತ್ತಾ ಇದೆ.

ಯಾವುದು ‘ಇದಮಿತ್ಥಂ’ ಎಂದು ಹೇಳುವುದಕ್ಕೆ ಬರುವುದಿಲ್ಲವೋ ಅದಕ್ಕೆ ನಾವು ನಮ್ಮ ಭಾಷೆಯಲ್ಲಿ ಸದ್ಯ ‘ಮಾಯಾ’ ಎಂದು ಹೆಸರಿಸೋಣ. ಈ ಮಾಯೆಯನ್ನು ಪಿತೃಸ್ಥಾನದಲ್ಲಿ ನಿಲ್ಲಿಸುವುದಕ್ಕಾಗುವುದಿಲ್ಲ. ಪಿತೃಸ್ಥಾನ ಇದ್ದರೆ ಆಮೇಲೆ ಗುರುತಿಸೋಣ. ತಾಯಿ ಯಾರೆಂದು ತಿಳಿಯದೆ ತಂದೆ ಯಾರು ಎಂದು ಊಹಿಸುವುದಾದರೂ ಹೇಗೆ? ಅಥವಾ ನಮ್ಮ ಊಹೆ ಕೆಲವೊಂದು ಸಲ ಸುಳ್ಳಾಗಿಯೂ ಹೋದೀತು. ಆದರೆ ಸತ್ಯ ಗೊತ್ತಾಗುವುದು ತಾಯಿಗೆ ತಾನೆ. ಆದ ಕಾರಣ ಅವಿದ್ಯಾ, ವಿದ್ಯಾ, ಮಾಯೆ ಈ ಮೂರನ್ನು ಒಂದೇ ಕಡೆಗೆ ಕ್ರೋಢೀಕರಿಸಿ ಅದನ್ನೇ ‘ತಾಯಿ’ ಅಂತ ಕರೆಯೋಣ.

(ಮುಂದೆ ವಾದ, ಸಂವಾದ ನಡೆದು ಬ್ರಹ್ಮ, ವಿಷ್ಣು ಪರಸ್ಪರ ಉದರದೊಳಗೆ ಪ್ರವೇಶಿಸಿ ‘ಯಾರು ಶ್ರೇಷ್ಠ’ ಎಂದು ನಿರ್ಧರಿಸಲು ಬ್ರಹ್ಮನ ಉದರವನ್ನು ಪ್ರವೇಶಿಸಿದಾಗ)

ಬ್ರಹ್ಮನ ಒಳಮೈಯನ್ನೆಲ್ಲ ಸಂಶೋಧಿಸಿದೆ. ಇದರಲ್ಲಿ ಸ್ಥೂಲವಾದಂತಹ ದ್ರವ್ಯಗಳು ಮಾತ್ರ ಇವೆ. ಇದಕ್ಕೆ ಸರ್ವೇಸಾಮಾನ್ಯವಾಗಿ ‘ಹಿರಣ್ಯ’ ಎಂತ ಹೆಸರಿಸುತ್ತೇವೆ. ಈ ಸತ್ಯ ವಸ್ತುವೆಂಬುದು ಹಿರಣ್ಯಮಯವಾದ ಪಾತ್ರದಿಂದ ಮುಚ್ಚಲ್ಪಟ್ಟಿದೆ. ಈ ಮುಚ್ಚಲ್ಪಟ್ಟ ಪಾತ್ರದಿಂದ ಅನೇಕ ‘ಪಾತ್ರಗಳು’ ಈ ಪ್ರಪಂಚದಲ್ಲಿ ಸೃಷ್ಟಿಯಾಗುತ್ತವೆ. ಇವೆಲ್ಲಾ ಅನಾದಿಗಳಲ್ಲ, ಅನಂತಗಳಲ್ಲ. ಇದಕ್ಕೆಲ್ಲಾ ‘ಅರ್ಥ’ಗಳೆಂದು ಹೆಸರು. ಇವನಲ್ಲಿ ಐಶ್ವರ್ಯವಿದೆ. ಇದು ಪ್ರಪಂಚ ಸೃಷ್ಟಿಗೆ ಬೇಕಾಗುತ್ತದೆ. ಯಾವಾಗ ಈ ಐಶ್ವರ್ಯ ನಾಶವಾಗುತ್ತದೆಯೋ ಆವಾಗ ‘ಕೇವಲತ್ವಂ’ ಸಿದ್ಧಿಸುತ್ತದೆ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಂಡಮಾನಿಗೆ ಮುಂಗಾರು ಶೀಘ್ರ ಪ್ರವೇಶ ಸಾಧ್ಯತೆ : ಕೇರಳಕ್ಕೆ ಮುಂಗಾರು ಬೇಗನೆ ಆಗಮನದ ಸೂಚನೆ

ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…

21 hours ago

ಹವಾಮಾನ ವರದಿ | 14-05-2026 | ಮೇ 20-25 ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…

21 hours ago

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

2 days ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

3 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

3 days ago