ನಿಂತಿಕಲ್ಲು: ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧೀನದಲ್ಲಿ ಕ್ಯಾಂಪಸ್ ವಿಂಗ್ ವತಿಯಿಂದ ಇರೇಸರ್ – ಕ್ಯಾಂಪಸ್ ಮೀಟ್ ಶನಿವಾರ ನಿಂತಿಕಲ್ಲಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಉದ್ಘಾಟಿಸಿದರು. ನಂತರ ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಮೊದಲನೇ ಅವಧಿಯಲ್ಲಿ ಫಾತಿಹ ಎಂಬ ಸೂರತ್ ಅಲ್ – ಫಾತಿಹ ಪಾರಾಯಣ ಮಾಡುವುದರೊಂದಿಗೆ ಅದರ ಮಹತ್ವ ಮತ್ತು ಅರ್ಥವನ್ನು ಬಹಳ ಸವಿಸ್ತಾರವಾಗಿ ತಿಳಿಸಿದರು.
ಎರಡನೇ ಅವಧಿಯಲ್ಲಿ, ಡ್ರೀಮ್ಸ್ – ಜೀವನದ ಗುರಿ ಮತ್ತು ಉದ್ದೇಶಗಳ ಕುರಿತ ತರಬೇತಿಯನ್ನು ನಿಂತಿಕಲ್ಲು ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಎಣ್ಮೂರು ಅವರು ನಡೆಸಿದರು.
ನಂತರದ ಅವಧಿಯಲ್ಲಿ ಕ್ವಿಜ್ ರಂಝಾನ್ ಹಾಗೂ ಖುರ್’ಆನ್ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ಇವರು ನಡೆಸಿಕೊಟ್ಟರು.
ಉತ್ತಮ ತರಬೇತಿಗಳ ಮೂಲಕ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸಲ್ಲಿ ಹೊಸ ಚೈತನ್ಯವನ್ನು ಮೂಡಿಸಿ, ಇಪ್ತಾರ್ ಕೂಟದ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಕಾರ್ಯದರ್ಶಿ ರಿಯಾಝ್ ನೆಕ್ಕಿಲ ಸ್ವಾಗತಿಸಿ ರೈಟ್ ಟೀಂ ಕಾರ್ಯಕರ್ತ ಶಿಹಾಬ್ ನೆಕ್ಕಿಲ ವಂದಿಸಿದರು.
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…
ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…
ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…