ನಿಂತಿಕಲ್ಲು: ನಿಂತಿಕಲ್ಲಿನ ಶ್ರೀ ವನದುರ್ಗಾ ದೇವಿ ಸಾನಿಧ್ಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.25 ಮತ್ತು 26ರಂದು ನಡೆಯಲಿದೆ. ಶ್ರೀ ಸಾನಿಧ್ಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಿತಿಯು ಇತ್ತೀಚೆಗೆ ರಚಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನೆರವೇರಿತು.ಸಮಿತಿಯ ಅಧ್ಯಕ್ಷರಾಗಿ ವಸಂತ ನಡುಬೈಲು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕಟ್ಟಬೀಡು ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರೂಪರಾಜ್ ರೈ ಹಾಗೂ ಸಂಚಾಲಕರಾಗಿ ಅನೂಪ್ ಕುಮಾರ್ ಆಳ್ವ ಕಟ್ಟಬೀಡು ಆಯ್ಕೆಯಾಗಿದ್ದಾರೆ.
ಉಳಿದಂತೆ ಗಿರಿಧರ ರೈ ಪಜಂಬಿಲ, ದಯಾನಂದ ಗೌಡ ನಡ್ಕ ನಿಂತಿಕಲ್ಲು(ಉಪಾಧ್ಯಕ್ಷರು), ಯೋಗಾನಂದ ಉಳೋಡಿ(ಕಾರ್ಯದರ್ಶಿ), ಭಾಗೀರಥಿ ಮುರುಳ್ಯ(ಕೋಶಾಧಿಕಾರಿ), ಶ್ರೀನಾಥ್ ರೈ ಬಾಳಿಲ, ರಾಜಶೇಖರನ್ ಕೆ.ಕೆ, ಎಚ್.ವಸಂತ, ಪ್ರವೀಣ್ ಜಾಲ್ತಾರು, ಪುಷ್ಪಾವತಿ ಬಾಳಿಲ, ಕುಸುಮಾವತಿ ಕೆ.ಜಿ(ಸದಸ್ಯರು) ನೇಮಕಗೊಂಡರು. ಪ್ರಸನ್ನ.ಕೆ ಗುಂಡಿಮಜಲು(ಸ್ವಾಗತ), ಉಮೇಶ್ ರೈ ಮರುವಂಜ(ಆಮಂತ್ರಣ), ನಾರಾಯಣ ರೈ ಮರುವಂಜ(ಆರ್ಥಿಕ), ಸಚಿನ್ ಅರೆಂಬಿ(ಮಾಧ್ಯಮ ಮತ್ತು ಪ್ರಚಾರ), ದಿನೇಶ್ ಪಜಿಂಬಿಲ(ಆಹಾರ), ಕಾರ್ತಿಕ್ ರೈ ಕಲ್ಲೇರಿ(ಅಲಂಕಾರ), ದೇವಿಪ್ರಸಾದ್ ಎಣ್ಮೂರು(ವಾಹನ) ವಿವಿಧ ಸಮಿತಿಗಳ ಸಂಚಾಲಕರಾಗಿ ನೇಮಕಗೊಂಡರು.ವಿವಿಧ ಸಮಿತಿಗಳ ಸದಸ್ಯರನ್ನಾಗಿ ಎಣ್ಮೂರು, ಬಾಳಿಲ, ಮುಪ್ಪೇರ್ಯ, ಮುರುಳ್ಯ, ಎಡಮಮಗಲ, ಕಲ್ಮಡ್ಕ ಗ್ರಾಮಗಳ 152 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…