ಮಳೆಗಾಲ ದೂರವಾಗುತ್ತಿದೆಯಾ ? ಹವಾಮಾನ ಇಲಾಖೆಯ ವರದಿ ಹಾಗೂ ಮಳೆ ಬಿದ್ದ ಲೆಕ್ಕದ ಬಗ್ಗೆ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…..
ಹವಾಮಾನ ಇಲಾಖೆಯ ಪ್ರಕಾರ ನಿನ್ನೆಯಿಂದ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತದ ಹಿಂತೆಗೆತ ಆರಂಭವಾಗಿದೆ.
1961 ರ ಬಳಿಕ ಅತ್ಯಂತ ವಿಳಂಬವಾಗಿ ಹಿಂದೆ ಸರಿಯುತ್ತಿದೆ. ಇಲಾಖೆಯ ಪ್ರಕಟಣೆ ಪ್ರಕಾರ ನಿನ್ನೆ ಉತ್ತರ ರಾಜಸ್ಥಾನ,ಪಂಜಾಬ್ ಹಾಗೂ ಹರ್ಯಾಣದ ಕೆಲವು ಭಾಗಗಳಿಂದ ಮುಂಗಾರು ಮಳೆ ಹಿಂದೆ ಸರಿದಿದೆ. ಸಾಮಾನ್ಯವಾಗಿ ಜೂನ್ 1 ಭಾರತಕ್ಕೆ ಕಾಲಿಡುವ ನೈರುತ್ಯ ಮುಂಗಾರು ಸೆ.1 ರಿಂದ ಆರಂಭಿಸಿ ಸೆ.30 ರ ವೇಳೆಗಾಗುವಾಗ ಇಡೀ ದೇಶದಿಂದ ಹಿಂದೆ ಸರಿಯುವುದು ವಾಡಿಕೆ. ಈ ಬಾರಿ ತಡವಾಗಿ ಜೂನ್ 8 ರಂದು ಕೇರಳಕ್ಕೆ ಪ್ರವೇಶಿಸಿದ ನೈರುತ್ಯ ಮುಂಗಾರು ಇದೀಗ ಅತ್ಯಂತ ತಡವಾಗಿ ಹಿಂದೆ ಸರಿಯುತ್ತಿದೆ. ಈ ವರ್ಷದ ಆರಂಭದಲ್ಲಿ ಮುಂಗಾರು ಮಳೆಯ ಕೊರತೆ ಇರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲ ಮುನ್ಸೂಚನೆಗಳನ್ನು ಸುಳ್ಳಾಗಿಸಿ ದೇಶದಾದ್ಯಂತ ಶೇ.10 ರ ಅಧಿಕ ಮಳೆ ದಾಖಲಾಯಿತು.!
ಮಳೆಯೊಂದಿಗೆ ಮಾತುಕತೆ:
ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ
ಮಹಾ/ಮಳೆ ನಕ್ಷತ್ರ ಹಸ್ತಾ ( ಸೆ.27 – ಅ.10) ಅವಧಿಯಲ್ಲಿ ದಾಖಲಾದ ಮಳೆ = 166 ಮಿ.ಮೀ.( ಕಳೆದ ವರ್ಷ 148 ಮಿ.ಮೀ.)
ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 189
2001 – 2019 = 143
1976 – 2019 = 169
ಗರಿಷ್ಟ 1999 ರಲ್ಲಿ ದಾಖಲಾದ 445
ಕನಿಷ್ಟ 2005 ರಲ್ಲಿ ದಾಖಲಾದ 024
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ…
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…