Advertisement
MIRROR FOCUS

ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯಲು ಆರಂಭ……

Share

ಮಳೆಗಾಲ ದೂರವಾಗುತ್ತಿದೆಯಾ ? ಹವಾಮಾನ ಇಲಾಖೆಯ ವರದಿ ಹಾಗೂ ಮಳೆ ಬಿದ್ದ ಲೆಕ್ಕದ ಬಗ್ಗೆ ಬಾಳಿಲದ  ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…..


ಹವಾಮಾನ ಇಲಾಖೆಯ ಪ್ರಕಾರ ನಿನ್ನೆಯಿಂದ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತದ ಹಿಂತೆಗೆತ ಆರಂಭವಾಗಿದೆ.

1961 ರ ಬಳಿಕ ಅತ್ಯಂತ ವಿಳಂಬವಾಗಿ ಹಿಂದೆ ಸರಿಯುತ್ತಿದೆ. ಇಲಾಖೆಯ ಪ್ರಕಟಣೆ ಪ್ರಕಾರ ನಿನ್ನೆ ಉತ್ತರ ರಾಜಸ್ಥಾನ,ಪಂಜಾಬ್ ಹಾಗೂ ಹರ್ಯಾಣದ ಕೆಲವು ಭಾಗಗಳಿಂದ ಮುಂಗಾರು ಮಳೆ ಹಿಂದೆ ಸರಿದಿದೆ. ಸಾಮಾನ್ಯವಾಗಿ ಜೂನ್ 1 ಭಾರತಕ್ಕೆ ಕಾಲಿಡುವ ನೈರುತ್ಯ ಮುಂಗಾರು ಸೆ.1 ರಿಂದ ಆರಂಭಿಸಿ ಸೆ.30 ರ ವೇಳೆಗಾಗುವಾಗ ಇಡೀ ದೇಶದಿಂದ ಹಿಂದೆ ಸರಿಯುವುದು ವಾಡಿಕೆ. ಈ ಬಾರಿ ತಡವಾಗಿ ಜೂನ್ 8 ರಂದು ಕೇರಳಕ್ಕೆ ಪ್ರವೇಶಿಸಿದ ನೈರುತ್ಯ ಮುಂಗಾರು ಇದೀಗ ಅತ್ಯಂತ ತಡವಾಗಿ ಹಿಂದೆ ಸರಿಯುತ್ತಿದೆ. ಈ ವರ್ಷದ ಆರಂಭದಲ್ಲಿ ಮುಂಗಾರು ಮಳೆಯ ಕೊರತೆ ಇರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲ ಮುನ್ಸೂಚನೆಗಳನ್ನು ಸುಳ್ಳಾಗಿಸಿ ದೇಶದಾದ್ಯಂತ ಶೇ.10 ರ ಅಧಿಕ ಮಳೆ ದಾಖಲಾಯಿತು.!

ಮಳೆಯೊಂದಿಗೆ ಮಾತುಕತೆ:

ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ
ಮಹಾ/ಮಳೆ ನಕ್ಷತ್ರ ಹಸ್ತಾ ( ಸೆ.27 – ಅ.10) ಅವಧಿಯಲ್ಲಿ ದಾಖಲಾದ ಮಳೆ = 166 ಮಿ.ಮೀ.( ಕಳೆದ ವರ್ಷ 148 ಮಿ.ಮೀ.)
ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 189
2001 – 2019 = 143
1976 – 2019 = 169
ಗರಿಷ್ಟ 1999 ರಲ್ಲಿ ದಾಖಲಾದ 445
ಕನಿಷ್ಟ 2005 ರಲ್ಲಿ ದಾಖಲಾದ 024

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

3 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

7 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago