ಪಂಜ: ಮೂರು ದಿನಗಳ ಹಿಂದೆ ಪಾಲ ದಾಟುತ್ತಿದ್ದಾಗ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಕುದ್ವ ಶೇಷಪ್ಪ ಗೌಡ ಅವರ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ.
ಔಷಧಿ ತರಲೆಂದು ಪಂಜಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವರು ಬಂದಿರಲಿಲ್ಲ. ಬಳಿಕ ಮನೆಯವರು ಹುಡುಕಾಡಿದಾಗ ಪಾಲದ ಬಳಿ ಚಪ್ಪಲು ಹಾಗೂ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಪಂಜದಿಂದ ಬರುತ್ತಿದ್ದಾಗ ಪಾಲ ಜಾರಿ ಹೊಳಗೆ ಬಿದ್ದಿದ್ದ ಶೇಪಪ್ಪ ಗೌಡರು ಬಿದ್ದಿದ್ದರು ಎಂದು ಶಂಕಿಸಲಾಗಿತ್ತು. ಬಳಿಕ ಹೊಳೆಯಲ್ಲಿ ಎರಡು ದಿನಗಳ ಕಾಲ ಹುಡುಕಾಡ ನಡೆಸಲಾಗಿತ್ತು. ಎನ್ ಡಿ ಆರ್ ಎಫ್ ತಂಡ ಕೂಡಾ ಆಗಮಿಸಿ ಹೊಳೆಯಲ್ಲಿ, ನದಿಯಲ್ಲಿ ಹುಡುಕಾಟ ನಡೆಸಿತ್ತು. ಇದೀಗ ಶುಕ್ರವಾರ ಸಂಜೆ ಪಂಜದ ಪಲ್ಲೋಡಿ ಬಳಿ ಮೃತದೇಹ ಪತ್ತೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel