Advertisement
ನಿಧನ‌ ಸುದ್ದಿಗಳು

ಪತ್ರಕರ್ತ ಚಂದ್ರೇಶ್ ಗೋರಡ್ಕ ಇನ್ನಿಲ್ಲ

Share

 

ಸುಳ್ಯ: ಸುಳ್ಯದ ಹಿರಿಯ ಪತ್ರಕರ್ತ, ಪಯಸ್ವಿನಿ ಪತ್ರಿಕೆಯ ಸಂಪಾದಕರಾಗಿದ್ದ ಚಂದ್ರೇಶ್ ಗೋರಡ್ಕ (48) ನಿಧನರಾಗಿದ್ದಾರೆ. ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಗ್ಗಿನ ಜಾವ 2.30 ಕ್ಕೆ ಕೊನೆಯುಸಿರೆಳೆದರು. ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾದ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಸುಮಾರು 3 ವಾರಗಳ ಕಾಲ ಚಿಕಿತ್ಸೆ ಪಡೆದರೂ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಅಲ್ಲಿಂದ ಕರೆ ತಂದು ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಳೇಜಿನಲ್ಲಿ ತೀವ್ರ ನಿಘಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು, ಮೂವರು ಸಹೋದರರು, ಓರ್ವ ಸಹೋದರಿಯ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಎರಡೂವರೆ ದಶಕದ ಪತ್ರಿಕಾ ಸೇವೆ:ಸುಮಾರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ದುಡಿದ ಚಂದ್ರೇಶ್ ಗೋರಡ್ಕ ಸುಳ್ಯದಲ್ಲಿ ಚಿರಪರಿಚಿತರಾಗಿದ್ದಾರು.
ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿ ಸುಮಾರು ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಸುದ್ದಿ ಬಿಡುಗಡೆಯಲ್ಲಿ ಪತ್ರಕರ್ತರಾಗಿದ್ದರು. ಬಳಿಕ ಮಿತ್ರ ಅಬ್ದುಲ್ ಸತ್ತಾರ್ ಗೋರಡ್ಕ ಅವರೊಂದಿಗೆ ಸೇರಿ ಪಯಸ್ವಿನಿ ಪತ್ರಿಕೆಯನ್ನು ಆರಂಭಿಸಿದ್ದರು. ಪಯಸ್ವಿನಿಯಲ್ಲಿ ಪ್ರಕಾಶಕರಾಗಿ ಸಂಪಾದಕರಾಗಿ ದುಡಿದಿದ್ದರು. ‘ಕರಾವಳಿ ಅಲೆ’ಪತ್ರಿಕೆಯ ಸುಳ್ಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಸುಳ್ಯದಲ್ಲಿದ್ದ ಶ್ರೀ ಚಾನೆಲ್ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದರು. ‘ನಮ್ಮ ಸುಳ್ಯ’ ಪತ್ರಿಕೆಯ ಸಂಪಾದಕರಾಗಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಪತ್ರಿಕಾ ವೃತ್ತಿಯಿಂದ ದೂರವಾಗಿ ಬೇರೆ ವೃತ್ತಿಯಲ್ಲಿ ತೊಡಗಿ ಕೊಂಡಿದ್ದರು. ಕಾರ್ಯನಿರತ ಪತ್ರಕರ್ತರ ಸದಸ್ಯರಾಗಿದ್ದ ಅವರು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರ ಪತ್ರಿಕಾ ಸೇವೆಯನ್ನು ಗುರುತಿಸಿ ಕಳೆದ ಜುಲೈ ತಿಂಗಳಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

“ಅನ್ನವೇ ಪರಮಾತ್ಮ” ಸಂದೇಶದೊಂದಿಗೆ ಗೋಕರ್ಣದಲ್ಲಿ ಈ ಬಾರಿ ರಾಘವೇಶ್ವರ ಶ್ರೀಗಳಿಂದ ‘ಅನ್ನಬ್ರಹ್ಮ ಚಾತುರ್ಮಾಸ್ಯ’

ಗೋಕರ್ಣದಲ್ಲಿ ನಡೆಯಲಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮೂಲಕ ಆಹಾರದ ಮಹತ್ವ ಹಾಗೂ ಅನ್ನ ವ್ಯರ್ಥ…

12 hours ago

ತಿರಸ್ಕೃತ ಮಾವು, ತೆಂಗಿನಿಂದಲೂ ಕೋಟಿ ಮೌಲ್ಯದ ಉದ್ಯಮ – ‘ಜೀರೋ ವೇಸ್ಟ್’ ಮಾದರಿ ರೈತರಿಗೆ ಹೊಸ ಆಶಾಕಿರಣ

ಮಾರುಕಟ್ಟೆಯಲ್ಲಿ ತಿರಸ್ಕೃತವಾಗುವ ಗ್ರೇಡ್-ಬಿ ಮಾವು ಮತ್ತು ತೆಂಗುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ರೈತರಿಗೆ…

12 hours ago

ಮಹಾರಾಷ್ಟ್ರದಲ್ಲಿ50 ಕ್ಕೂ ಹೆಚ್ಚು ಅಡಿಕೆ ಲಾರಿಗಳಿಗೆ ತಡೆ – ವ್ಯಾಪಾರಿಗಳಿಗೆ ಸಂಕಷ್ಟ- ಶಿವಮೊಗ್ಗ ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ರಾಜ್ಯದ ಅಡಿಕೆ ವ್ಯಾಪಾರಿಗಳಿಗೆ ಹೊಸ ಸಂಕಷ್ಟ ತಂದೊಡ್ಡಿದೆ.…

21 hours ago

ಮುಂಗಾರು ದುರ್ಬಲ – ದೇಶದಲ್ಲಿ 40% ಮಳೆ ಕೊರತೆ, ಕರಾವಳಿ ಕರ್ನಾಟಕಕ್ಕೆ ಜೂನ್ 25ರ ಬಳಿಕ ಮಳೆ ನಿರೀಕ್ಷೆ

ದೇಶದಲ್ಲಿ ಮುಂಗಾರು ಚಟುವಟಿಕೆ ದುರ್ಬಲವಾಗಿದ್ದು, ಜೂನ್ 18ರವರೆಗೆ ಮಳೆ ಕೊರತೆ ಶೇ.40ಕ್ಕೆ ಏರಿಕೆಯಾಗಿದೆ.…

22 hours ago

ಇ-ವೇ ಬಿಲ್ ಹಾಗೂ ಸಾರಿಗೆ ದಾಖಲೆಗಳ ಕೊರತೆ – 33.6 ಟನ್ ಅಡಿಕೆ ಜಪ್ತಿ ಕ್ರಮವನ್ನು ಎತ್ತಿಹಿಡಿದ ನ್ಯಾಯಾಲಯ

ಇ-ವೇ ಬಿಲ್ ಮತ್ತು ಸಾರಿಗೆ ದಾಖಲೆಗಳ ಕೊರತೆಯಿಂದ ₹2.22 ಕೋಟಿ ಮೌಲ್ಯದ 33.6…

22 hours ago