Advertisement
ಸುದ್ದಿಗಳು

ಪಾಸಿಟಿವ್ ನ್ಯೂಸ್ | ಮಾಸ್ಕ್ ತಯಾರಿಸಿ ಉಚಿತವಾಗಿ ಹಂಚಿದ ಮಹಿಳೆ | ಸಮಾಜ ಸೇವೆ ಹೀಗೂ ಮಾಡಬಹುದು |

Share

ಸುಳ್ಯ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮಗಳ ಕಡೆಗೆ ಸರಕಾರ ಎಚ್ಚರಿಸಿತು. ಸಾರ್ವಜನಿಕರು ಕಡ್ಡಾಯವಾಗಿ ಮುಖವಸ್ತ್ರ ( ಮಾ್ಸ್ಕ್ ) ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿತು.

ಈ ಸಂದರ್ಭ ಎಲ್ಲೆಡೆ ಮಾಸ್ಕ್ ಗೆ ಬೇಡಿಕೆ ವ್ಯಕ್ತವಾಯಿತು. ಈ ಸಂದರ್ಭ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೇ, ಅಗತ್ಯ ಸೇವೆ ಮಾಡುವ ಮಂದಿಗೇ ಮಾಸ್ಕ್ ಕೊರತೆ ಉಂಟಾಯಿತು. ಅನೇಕರು ಮಾಸ್ಕ್ ಇಲ್ಲ, ಮಾಸ್ಕ್ ಬಂದಿತೇ ಎಂದು ಟೀಕೆ ಮಾಡಿದರು, ಪ್ರಶ್ನೆ ಮಾಡಿದರು. ಆದರೆ ಇಲ್ಲೊಬ್ಬ ಮಹಿಳೆ ಈ   ಇದ್ಯಾವುದೂ ಕೇಳದೆ, ತನಗೆ ಸಾಧ್ಯವಾದಷ್ಟು, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯಲ್ಲೇ ಮಾಸ್ಕ್ ಮಾಡಿದರು. ತಾವೇ ಸ್ವತ: ಹೊಲಿದರು. ಉಚಿತವಾಗಿ ಹಂಚಿದರು.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಸೀತಾಲಕ್ಷ್ಮಿ ಅವರು ಮಾಸ್ಕ್ ತಯಾರಿಸಿದ ಉಚಿತವಾಗಿ ಹಂಚಿದ ಮಹಿಳೆ. ಬಿಳಿ ಹತ್ತಿ ವಸ್ತ್ರಗಳಿಂದ ತಯಾರಿಸಿದ ಸುಮಾರು 50 ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಈಗಾಗಲೇ ಉಚಿತವಾಗಿ ವಿತರಿಸಿದ್ದು ತುರ್ತು ಅವಶ್ಯಕತೆ ಇರುವವರಿಗೆ ಇನ್ನಷ್ಟು ವಿತರಿಸಲು ಸಿದ್ಧರಿದ್ದಾರೆ. ಅವರ ಮನೆಯಲ್ಲಿದೆ. ಈಗ ಹತ್ತಿಯ ಬಟ್ಟೆಯ ಕೊರತೆ ಅವರಲ್ಲಿದೆ. ಬಟ್ಟೆ ತಂದು ಕೊಟ್ಟರೆ ಇನ್ನಷ್ಟು ಮಾಸ್ಕ್ ಮಾಡಿ ವಿತರಣೆ ಮಾಡಬಲ್ಲೆ ಎನ್ನುತ್ತಾರೆ. ಸಮಾಜ ಸೇವೆ ಎನ್ನುವುದು  ಹೀಗೂ ಮಾಡಬಹುದು ಎನ್ನುವುದಕ್ಕೆ ಸೀತಾಲಕ್ಷ್ಮಿ ಅವರು ಸಾಕ್ಷಿಯಾಗಿದ್ದಾರೆ.

ಅವರ ಸಂಪರ್ಕ ಸಂಖ್ಯೆ : 9902846475

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

23 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

2 days ago