Advertisement
ಸುದ್ದಿಗಳು

ಪಾಸಿಟಿವ್ ಸುದ್ದಿ | ಲಾಕ್ಡೌನ್ ನಡುವೆ ಮಾನವೀಯ ಕಾರ್ಯ | ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಮಾದರಿ ನಡೆ | ಲಾಕ್ಡೌನ್ ಅನುಷ್ಠಾನದಲ್ಲೂ- ಸೇವೆಯಲ್ಲೂ ಮಾದರಿ ಈ ಪಂಚಾಯತ್ |

Share

ಕೊರೊನಾ ಲಾಕ್ಡೌನ್ ಎಲ್ಲೆಡಬಿಗಿ ಬಂದೋ ಬಸ್ತ್. ಈ ಸಂದರ್ಭ ಅನೇಕರಿಗೆ ಅಗತ್ಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಬಡವರಿಗಂತೂ ಏನೇನೂ ಮಾಡಲು ಸಾಧ್ಯವಾಗಿಲ್ಲ. ಇಂತಹ ಬಡ ಕುಟುಂಬವೊಂದಕ್ಕೆ ನೆರವಾದ್ದು ಗುತ್ತಿಗಾರು ಗ್ರಾಪಂ ಅಧ್ಯಕ್ಷರ ನೇತೃತ್ವದ ತಂಡ. ಗುತ್ತಿಗಾರು ಕೊರೊನಾ ಕಾರ್ಯಪಡೆಯ ಸದಸ್ಯರೆಲ್ಲರ ಸಹಕಾರದಿಂದ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಈ ಕಾರ್ಯ ನೆರೆವೇರಿಸಿ ಮಾದರಿ ಎನಿಸಿದ್ದಾರೆ.


ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅಡಿಕೆ ಮರದ ತುಂಡನ್ನು  ಹೊತ್ತು ತಂದರು…. !. ಇದು  ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಾಡಿಯಲ್ಲಿನ ಸುಬ್ರಾಯ ಗೌಡ ಅವರ ಮನೆ ದುರಸ್ತಿ ಕಾರ್ಯಕ್ಕೆ. ಇವರ ಜೊತೆ  ಗ್ರಾಪಂ ಸದಸ್ಯ ರಾಕೇಶ್ ಮೆಟ್ಟಿನಡ್ಕ ಹಾಗೂ ಕೊರೊನಾ ಕಾರ್ಯಪಡೆಯ ಸದಸ್ಯರು ಸಾತ್ ನೀಡಿದ್ದಾರೆ. 3 ದಿನಗಳ ಸತತ ಕೆಲಸದಿಂದ ಬಡ ಕುಟುಂಬವೊಂದಕ್ಕೆ ಮನೆ ದುರಸ್ತಿ ಮಾಡಿಸಿದ್ದಾರೆ. ಕೊರೊನಾ ಲಾಕ್ಡೌನ್ ನಡುವೆ ಮಾದರಿ ಕೆಲಸವನ್ನು ಈ ತಂಡ  ಮಾಡಿದೆ.

 

ಗುತ್ತಿಗಾರು ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಾಡಿಯಲ್ಲಿನ ಸುಬ್ರಾಯ ಗೌಡ ಅವರದು ಬಡ ಕುಟುಂಬ. ವಯಸ್ಸಾದ ಹಿನ್ನೆಲೆಯಲ್ಲಿ  ಕೆಲಸ ಮಾಡಲು ಕಷ್ಟವಾಗಿದೆ.  ಇವರ ಪತ್ನಿ ಭಾಗೀರಥಿ ವೃದ್ದೆಯಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದ ಈ ದಂಪತಿಗಳ ಮನೆ ಶಿಥಿಲವಾಗಿತ್ತು. ಇದನ್ನು ಗಮನಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ನೇತೃತ್ವದ ತಂಡವು ಕೊರೊನಾ ಕಾರ್ಯ ಪಡೆ ಸದಸ್ಯರ ಮೂಲಕ ದುರಸ್ತಿಗೆ ಸಿದ್ಧವಾಯಿತು. ಇದಕ್ಕಾಗಿ ಬೇಕಾದ ಎಲ್ಲಾ ಸಾಮಾಗ್ರಿ ಸಿದ್ಧ ಮಾಡಿ  ಸ್ವತ: ಅಧ್ಯಕ್ಷರೇ ಮರಗಳನ್ನು  ಹೊತ್ತು ತಂದರು. ಅವರ ಜೊತೆ ಕಾರ್ಯಪಡೆ ಸದಸ್ಯರೂ ಸೇರಿಕೊಂಡರು. ಅದಾದ ಬಳಿಕ 2 ದಿನದಲ್ಲಿ  ಮನೆ ಕೆಲಸ ಪೂರ್ತಿ ಮಾಡಿ ಕೊಟ್ಟರು.

 

ಈ ಕುಟುಂಬಕ್ಕೆ ಊಟಕ್ಕೆ ಬೇಕಾದ ಕಿಟ್ ವ್ಯವಸ್ಥೆ ಮಾಡಲಾಗಿತ್ತು, ಪಡಿತರ ವ್ಯವಸ್ಥೆಗೆ ಈ ತಂಡವು ಬೇಕಾದ ಸಿದ್ಧತೆ ಮಾಡಿ ವಿದ್ಯುತ್ ಸಂಪರ್ಕಕ್ಕೂ ವ್ಯವಸ್ಥೆ ಮಾಡುವ ಮೂಲಕ ಗ್ರಾಮ ಪಂಚಾಯತ್ ಮಾನವೀಯ ಕೆಲಸವನ್ನು ಮಾಡಿದೆ. ಕೊರೊನಾ ನಡುವೆ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ನೇತೃತ್ವದ ತಂಡದ ಪಾಸಿಟಿವ್ ಕಾರ್ಯಕ್ಕೆ ಹಾಗೂ ಕಾರ್ಯಪಡೆಯ ಸದಸ್ಯರ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಗುತ್ತಿಗಾರು ಗ್ರಾಮ ಪಂಚಾಯತ್ ಕೊರೊನಾ ವೈರಸ್ ವಿರುದ್ಧ ವಿವಿಧ ರೀತಿಯ ಜಾಗೃತಿ ಕಾರ್ಯದ ಮೂಲಕವೂ ರಾಜ್ಯದ ಗಮನ ಸೆಳೆದಿತ್ತು. ಉನ್ನತ ಅಧಿಕಾರಿಗಳು ಪಂಚಾಯತ್ ಕಾರ್ಯವನ್ನು ಗಮನಿಸಿದ್ದರು. ಗ್ರಾಪಂ ಅಧ್ಯಕ್ಷ , ಪಿಡಿಒ ಹಾಗೂ ಕಾರ್ಯಪಡೆ ಸದಸ್ಯರು ಕೊರೊನಾ ಲಾಕ್ಡೌನ್ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಅಳವಡಿಕೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರು. ಅದಲ್ಲದೆ ಈಚೆಗೆ ಲಾಕ್ಡೌನ್ ಸಡಿಲಿಕೆ ಬಳಿಕವೂ ವರ್ತಕರ ಮನವೊಲಿಸಿ  ಮಧ್ಯಾಹ್ನದವರೆಗೆ ಮಾತ್ರವೇ ಅಂಗಡಿ ತೆರೆದು ಲಾಕ್ಡೌನ್ ಮುಂದುವರಿಸಲು ಹೆಜ್ಜೆ ಇರಿಸಿದ ಮೊದಲ ಪಂಚಾಯತ್ ಎಂದೂ ಜಿಲ್ಲೆಯಲ್ಲಿ  ಗಮನ ಸೆಳೆದಿತ್ತು. ಇದೀಗ ಮಾನವೀಯ ಕಾರ್ಯದ ಮೂಲಕ ಗುತ್ತಿಗಾರು ಗ್ರಾಮ ಪಂಚಾಯತ್ ಮತ್ತೆ ಗಮನಸೆಳೆದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

5 hours ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

5 hours ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

23 hours ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago