Advertisement
ಕೃಷಿ

ಪುತ್ತೂರಿನಲ್ಲಿ ನಡೆಯಲಿದೆ ಹಣ್ಣು ಮೇಳ : ಲೈವ್ ಡೆಮೋಕ್ಕೆ ಸಿದ್ಧವಾಗುತ್ತಿದೆ ಪುತ್ತೂರಿನ ನೆಲ…

Share

ಪುತ್ತೂರು: ಮೇ ತಿಂಗಳ ಅಂತ್ಯದಲ್ಲಿ ಪುತ್ತೂರಿನ ಸುದಾನ ಶಾಲೆಯ ವಠಾರದಲ್ಲಿ  ಹಣ್ಣು ಮೇಳ ನಡೆಯಲಿದೆ. ತೋಟಗಾರಿಕಾ ಮೇಳ ಇದಾಗಿರುವುದರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭ ಕರಾವಳಿ ಜಿಲ್ಲೆಯಲ್ಲಿ  ಬೆಳೆಯುಬಹುದಾದ ಹಣ್ಣುಗಳು ಹಾಗೂ ತರಕಾರಿಗಳ ಲೈವ್ ಡೆಮೋ ನಡೆಯಲಿದೆ. ಇದಕ್ಕಾಗಿ ಗಿಡಗಳ ನಾಟಿ ಮಾಡುವ ಕೆಲಸ ಆರಂಭಗೊಂಡಿದೆ.  ಇದರ ಜೊತೆಗೆ ಮೇಳದ ಮೂಲಕ ಯುವಕರಿಗೆ ನೂತನ ಕೃಷಿಯ ಬಗ್ಗೆ ಸಂದೇಶ ನೀಡುವ ಕೆಲಸದ ಕಡೆಗೆ ಗಮನಹರಿಸಲಾಗಿದೆ.

ನವತೇಜ ಟ್ರಸ್ಟ್ ಪುತ್ತೂರು ಹಾಗೂ ಜೆಸಿಐ ಪುತ್ತೂರು ಇವರ ಸಹಭಾಗಿತ್ವದಲ್ಲಿ, Indian Institute of Horticulture (IIHR) ಸಹಕಾರದಲ್ಲಿ ಮೂರು ದಿನಗಳ “ಪುತ್ತೂರು ಹಣ್ಣು ಮೇಳ-2020” ತೋಟಗಾರಿಕಾ ಮೇಳ ಮೇ.23 ,24 ಹಾಗೂ 25 ರಂದು ಸುದಾನ ಶಾಲೆ ಪುತ್ತೂರಿನಲ್ಲಿ ನಡೆಯಲಿದೆ. ಮೇಳದಲ್ಲಿ ಹಣ್ಣುಗಳ ಪ್ರಾತ್ಯಕ್ಷಿಕೆ, ಚರ್ಚೆಗಳು, ವ್ಯವಹಾರ ಮಳಿಗೆಗಳು ಹಾಗೂ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಕರ್ನಾಟಕ ಸರಕಾರ, ತೋಟಗಾರಿಕಾ ಇಲಾಖೆ, ಸರ್ಕಾರಿಯೇತರ ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳು, ರೈತರು, ಹಾಗೂ ಉದ್ಯಮಿಗಳ ಸಹಭಾಗಿತ್ವದಲ್ಲಿ  ಕಾರ್ಯಕ್ರಮ ನಡೆಯಲಿದೆ.

ಮೇಳದ ಮುಖ್ಯ ಉದ್ದೇಶ ಹೀಗಿದೆ….

  • ರೈತರು, ವಿಜ್ಞಾನಿಗಳು, ಸರಕಾರ ಹಾಗೂ ಸಮಾಜವನ್ನು ಒಂದೇ ಸೂರಿನಡಿಯಲ್ಲಿ ತರುವುದು.

  •  ವಿವಿಧ ಹಣ್ಣು ಕೃಷಿಗಳ ಬಗ್ಗೆ ಅರಿವು, ತಿಳುವಳಿಕೆ, ಉತ್ತೇಜನ ಹಾಗೂ ಉದ್ಯಮಶೀಲತೆ

  • ವಿವಿಧ ದೇಶೀಯ, ಸ್ಥಳೀಯ ಹಣ್ಣುಗಳು, ಸಾಂಪ್ರದಾಯಿಕ ವಾಣಿಜ್ಯ ಬೆಳೆಗಳು, ಭವಿಷ್ಯದ ಹಣ್ಣುಗಳ ಬೆಳೆಗಳು, ಮೌಲ್ಯವರ್ಧನೆಗೆ ಅವಕಾಶಗಳು ಮತ್ತು ಹಣ್ಣುಗಳ ಸಂಸ್ಕರಣೆಗಳ ಚಿಂತನೆ

  • ಉಷ್ಣ ವಲಯದ ಹಣ್ಣುಗಳು, ಉತ್ತರದ ಗೋವದಿಂದ ದಕ್ಷಿಣದ ಕಣ್ಣೂರು, ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ಬೆಳೆಯುವ ಹಣ್ಣುಗಳ ಸುಸ್ಥಿರ ತೋಟಗಾರಿಕೆಯನ್ನು ಉತ್ತೇಜನಗೊಳಿಸುವುದು.

  • ಕಾರ್ಯಕ್ರಮದ ಮೂಲಕ ಯುವ ಕೃಷಿಕರಿಗೆ ಉತ್ತೇಜನ ನೀಡುವುದು

  • ಮಾರುಕಟ್ಟೆ ಬಗ್ಗೆ ಕೃಷಿಕರಿಗೆ ಅರಿವು ಮೂಡಿಸುವುದು

 

ಪುತ್ತೂರಿನಲ್ಲಿ  ಈ ಬಾರಿ ತೋಟಗಾರಿಕಾ ಮೇಳವನ್ನು ವಿಶೇಷವಾಗಿ  ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಪುತ್ತೂರು ಜೇಸಿಐ ಸಂಪೂರ್ಣ ಸಹಕಾರ ನೀಡುತ್ತಿದೆ. ಇದರ ಜೊತೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಸಹಕಾರದೊಂದಿಗೆ  ಸುದಾನ ಶಾಲೆ, ವಿವಿಧ ಇಲಾಖೆಗಳು ಸಹಭಾಗಿತ್ವ ನೀಡಲಿದೆ. ಕಾರ್ಯಕ್ರಮದ ಮೂಲಕ ಕೃಷಿಕರು ಹಾಗೂ ಗ್ರಾಹಕರಿಗೆ ನೇರ ಸಂಪರ್ಕ ಒದಗಿಸುವುದರ ಜೊತೆಗೆ ಯುವಕೃಷಿಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.  – ಅನಂತ ಪ್ರಸಾದ್ ನೈತಡ್ಕ, ಅಧ್ಯಕ್ಷ , ನವತೇಜ ಟ್ರಸ್ಟ್ , ಪುತ್ತೂರು

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

2 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

14 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

15 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

22 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago