Advertisement
ಮಾಹಿತಿ

ಪುತ್ತೂರಿನ ಚಿನ್ನದ ಪೇಟೆಗೆ ಮೆರುಗು ನೀಡಿದ ಮುಳಿಯ ಚಿನ್ನೋತ್ಸವ

Share

ಪುತ್ತೂರು: ಚಿನ್ನದ ಪೇಟೆ ಎಂದೇ ಪ್ರಸಿದ್ಧವಾಗಿರುವ ಪುತ್ತೂರಿನ ಕೋರ್ಟ್ ರಸ್ತೆಗೆ ಈಗ ಚಿನ್ನದ ಮೆರುಗು ಬಂದಿದೆ. ಇದೀಗ ಚಿನ್ನಾಭರಣಗಳ ವಿವಿಧ ಮಾರಾಟ ಯೋಜನೆಯಿಂದಾಗಿ ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಅವರ ಚಿನ್ನೋತ್ಸವದಿಂದ ಮತ್ತಷ್ಟು ಮೆರುಗು ಪಡೆದಿದೆ.

ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಮಳಿಗೆಯು  ಪುತ್ತೂರಿನಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಹಾಗೂ ಬೆಂಗಳೂರುಗಳಲ್ಲಿ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ.

ಚಿನ್ನೋತ್ಸವ :
ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಮುಳಿಯ ಚಿನ್ನೋತ್ಸವ ಆಯೋಜಿಸಿದೆ. ಬೆಳ್ತಂಗಡಿಯಲ್ಲಿ ಏಪ್ರಿಲ್ 6 ರಿಂದ ಮೇ 10 ರವರೆಗೆ ಪುತ್ತೂರಿನಲ್ಲಿ ಏಪ್ರಿಲ್ 10 ರಿಂದ ಮೇ 10 ರವರೆಗೆ ಮುಳಿಯ ಚಿನ್ನೋತ್ಸವ ನಡೆಯುತ್ತಿದೆ. ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮುಳಿಯ ಚಿನ್ನೋತ್ಸವದ ಪ್ರಧಾನ ಆಕರ್ಷಣೆಯಾಗಿದೆ.

 

 

ಚಿನ್ನೋತ್ಸವದಲ್ಲಿ ಏನಿದೆ?:
ಹೊಸತನ ಮತ್ತು ನವೀನತೆಯೊಂದಿಗೆ ಹೊಂಬಣ್ಣದ ಜನಪ್ರಿಯ ಚಿನ್ನಾಭರಣಗಳು. ಇಷ್ಟೊಂದು ಉತ್ತಮ ಚಿನ್ನಾಭರಣಗಳು, ಇಷ್ಟೊಂದು ಉತ್ತಮ ಬೆಳೆಗೆ ಮುಳಿಯದಲ್ಲಿ ಮಾತ್ರ ಎಂದು ಸಂಸ್ಥೆ ಗ್ರಾಹಕರಿಗೆ ಭರವಸೆ ನೀಡಿದೆ. ಚಿನ್ನೋತ್ಸವದ ಸಂದರ್ಭದಲ್ಲಿ ಶೋರೂಂಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ದಿನ ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗಿದೆ. ವಜ್ರಾಭರಣಗಳ ಅನನ್ಯ ಸಂಗ್ರಹ ಮುಳಿಯ ಮಳಿಗೆಗಳಲ್ಲಿದೆ. 24 ತಾಸುಗಳೊಳಗೆ ಗ್ರಾಹಕರ ಆಯ್ಕೆಯ ಚಿನ್ನಾಭರಣಗಳನ್ನು ಸಂಸ್ಥೆ ಸಿದ್ಧಪಡಿಸಿ ಕೊಡುತ್ತದೆ.

ವಿನ್ಯಾಸ ಶ್ರೇಣಿಗಳು:
ಪಾರಂಪರಿಕ ಆಭರಣಗಳು, ದೇವಾಲಯ ವಿನ್ಯಾಸ, ಮಾಣಿಕ್ಯ ಮತ್ತು ಪಚ್ಚೆ, ಜನಪ್ರಿಯ ಚಿನ್ನಾಭರಣ, ಸಮಕಾಲಿನ ಚಿನ್ನಾಭರಣ, ಕುಂದನ್ ವಿನ್ಯಾಸ, ಮುತ್ತು, ರತ್ನ ಬಳೆಗಳು, ಲೈಟ್ ವೈಟ್ ಆಭರಣಗಳು, ವಜ್ರಾಭರಣಗಳು, ಕಿವಿಯೋಲೆ, ಉಂಗುರ, ಬೆಳ್ಳಿ, ದೈವಾಭರಣ ಹಾಗೂ ಇತರ ಆಭರಣಗಳು ಲಭ್ಯ. ಚಿನ್ನಾಭರಣಗಳ ಅಪೂರ್ವ ಸಂಗ್ರಹವನ್ನು ಪುತ್ತೂರು ಮತ್ತು ಬೆಳ್ತಂಗಡಿ ಜ್ಯುವೆಲ್ಸ್‍ನೊಂದಿಗೆ ಸಂಭ್ರಮಿಸಿ ಚಿನ್ನ ಕೊಳ್ಳುವ ಅಪೂರ್ವ ಅನುಭವಕ್ಕೆ ಬನ್ನಿ ಮುಳಿಯಕ್ಕೆ ಎಂದು ಸಂಸ್ಥೆಯು ಗ್ರಾಹಕರನ್ನು ಆಮಂತ್ರಿಸುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

10 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

10 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

19 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

20 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

20 hours ago