ಪೈಂಬೆಚ್ಚಾಲು: ಎರಡು ದಿನಗಳಲ್ಲಿ ಬಹಳ ವಿಜ್ರಂಬಣೆಯಿಂದ ನಡೆಯುವ ಐದನೇ ಅಜ್ಮೀರ್ ಆಂಡ್ ನೇರ್ಚೆ ಹಾಗೂ ದ್ವಿದಿನ ಮೆಹ್ಫಿಲೇ ನಸ್ವೀಹ ಕಾರ್ಯಕ್ರಮಕ್ಕೆ, ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ, ಗೌರವಾಧ್ಯಕ್ಷರಾದ ಪಿ.ಎಂ.ಮೂಸ ಹಾಜಿಯವರು ಧ್ವಜಹಾರೋಹಣದ ಮೂಲಕ ಇಂದು ಬೆಳಿಗ್ಗೆ ಚಾಲನೆ ನೀಡಿದರು.
ಖತೀಬ್ ಉಸ್ತಾದರು ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಫಾರೂಖ್ ಮದನಿ ಉಸ್ತಾದ್ ಸೆರ್ಕಳ, ಜಮಾಅತ್ ನಾಯಕರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಂ.ಪಿ.ಇಬ್ರಾಹಿಂ, ಕೆ.ಎಚ್.ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು. ಮಾರ್ಚ್ 3 ಹಾಗು 4 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಇಂದು ರಾತ್ರಿ ಪ್ರಖ್ಯಾತ ಕೆ.ಸಿ.ಎ.ಕುಟ್ಟಿ ಕೊಡುವಳ್ಳಿ ಹಾಗು ಸಂಘಡಿಗರಿಂದ ಕಥಾ ಪ್ರಸಂಗ ನಡೆಯಲಿದೆ. ಸೂಫಿವರ್ಯರಾದ ವಾಲೆಮಂಡೋವು ಉಸ್ತಾದ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಮಾ.4ರಂದು ನಡೆಯುವ ಗ್ರಾಂಡ್ ಅಜ್ಮೀರ್ ಆಂಡ್ ನೆರ್ಚೆಯಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೂರಿಕ್ಕುಝಿ ತಙಳ್, ಸಯ್ಯಿದ್ ಸಾಲಿಂ ಬುಖಾರಿ ತಙಳ್, ಸಯ್ಯಿದ್ ಜಿಫ್ರಿ ತಙಳ್ , ಖ್ಯಾತ ಭಾಷಣಗಾರ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ಮೊದಲಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಬಿ.ಎಂ.ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…
2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…