ಪೈಂಬೆಚ್ಚಾಲು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್, ಇದರ ಸ್ಥಾಪಕ ದಿನವಾದ ಸೆಪ್ಟೆಂಬರ್ ಹತ್ತೊಂಬತ್ತು ರಂದು, ಪೈಂಬೆಚ್ಚಾಲು ಎಸ್ಸೆಸ್ಸೆಫ್ ಶಾಖಾ ವತಿಯಿಂದ ಧ್ವಜ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಘಟನೆಯ ಅಧ್ಯಕ್ಷರಾದ ಕೆ.ಎಂ.ಆಸಿಫ್ ರವರ ಅಧ್ಯಕ್ಷತೆಯಲ್ಲಿ, ಖತೀಬ್ ಉಸ್ತಾದ್ ಅಬ್ದುಲ್ ನಾಸಿರ್ ಸುಖೈಫಿ ಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾಅತ್ ಅಧ್ಯಕ್ಷರಾದ ಟಿ.ಎಂ. ಅಬ್ದುಲ್ ಕಾದರ್ ರವರು ಧ್ವಜಾರೋಹಣ ಗೈದರು. ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ಯಂ.ಇಸ್ಮಾಯಿಲ್ ಸಖಾಫಿ ಯವರು ಸಂದೇಶ ಭಾಷಣಮಾಡಿದರು.
ಸಮಾರಂಭದಲ್ಲಿ ಫಾರೂಖ್ ಮದನಿ ಸೆರ್ಕಳ, ಎಸ್ ವೈಎಸ್ ನಾಯಕರಾದ ಪಿ.ಬಿ. ಮೂಸ ಹಾಜಿ, ಎಂ.ಪಿ.ಇಬ್ರಾಹಿಂ, ಪಿ.ಎಂ. ಇಬ್ರಾಹಿಂ, ಸಿ.ಎಚ್.ಉಸ್ಮಾನ್, ಪಿ.ಎಂ. ರಫೀಖ್, ಟಿ.ಎಂ.ಸೂಫಿ ಎಸ್ಸೆಸ್ಸೆಫ್ ನಾಯಕರಾದ ಕೆ.ಎಂ.ಹಸೈನಾರ್, ಸಿದ್ದೀಖ್ ಸಖಾಫಿ ಹಾಗು ಎಸ್ಸೆಸ್ಸೆಫ್, ಎಸ್ ವೈಎಸ್ ಕಾರ್ಯಕರ್ತರೂ ಉಪಸ್ಥಿತರಿದ್ದರು. ಪಿ.ಎ.ಸಿದ್ದೀಖ್ ಹಿಮಮಿ ಸಖಾಫಿ ಸ್ವಾಗತಿಸಿ, ಧನ್ಯವಾದವಿತ್ತರು.
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…
ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…
ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…
2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…