ಸುಳ್ಯ: ಮಂಗಳೂರಿನ ಪ್ರತಿಷ್ಠಿತ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ನೀಡುವ ಟ್ಯಾಲೆಂಟ್ ಎಕ್ಸಲೆನ್ಸ್ ಅವಾರ್ಡ್ ಗೆ, ಪೈಂಬೆಚ್ಚಾಲು ಮದ್ರಸಾದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮಂಗಳೂರು ಕೇಂದ್ರವಾಗಿರಿಸಿಕೊಂಡು ಸಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಠವಾದ ಸೇವೆಯನ್ನು ನೀಡುತ್ತಿರುವ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತಿವರ್ಷವೂ ದ.ಕ.ಜಿಲ್ಲೆಯಲ್ಲಿ, ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಪ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಎಕ್ಸಲೆನ್ಸ ಅವಾರ್ಡ್ ಗೆ, ಈ ಸಲ ಪೈಂಬೆಚ್ಚಾಲು ಮದ್ರಸಾದ ಏಳನೇ ತರಗತಿಯ ತಮೀಂ ಟಿ.ಐ., ಶಂಮ್ನ ಎಂ.ಪಿ. ಹಾಗು ಫ್ಲಸ್ಟು ವಿನ ಜವೈರಿಯಾ ಟಿ.ಎ. ಈ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿ, ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಾ ಸಂಗಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.
ಐದು, ಏಳು, ಹತ್ತು ಹಾಗು ಫ್ಲಸ್ಟು ತರಗತಿಗಳಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಜಿಲ್ಲೆಯ ಸಮಾರು ಇನ್ನೂರ ಅರುವತ್ತು ವಿದ್ಯಾರ್ಥಿಗಳಲ್ಲಿ, ಆಯ್ಕೆಮಾಡಿದ ಮೂವತ್ತು ವಿದ್ಯಾರ್ಥಿಗಳಲ್ಲಿ, ಸುಳ್ಯ ತಾಲೂಕಿನಿಂದ ಆಯ್ಕೆಯಾದ ಮೂರೇ ಮೂರು ವಿದ್ಯಾರ್ಥಿಗಳು ಕೂಡ ಪೈಂಬೆಚ್ಚಾಲು ಮದ್ರಸಾದ ವಿದ್ಯಾರ್ಥಿಗಳಾಗಿದ್ದಾರೆ.
ಬಹು ಫಾರೂಖ್ ಮದನಿ ಸೆರ್ಕಳ, ಇಸ್ಮಾಯಿಲ್ ಸಖಾಫಿ ಬಿ.ಎಂ. ರವರು ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಿ ಇದಕ್ಕೆ ಅವರನ್ನು ಅರ್ಹಗೊಳಿಸಿದ್ದರು.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…