Advertisement
ಸುದ್ದಿಗಳು

ಪ.ಜಾತಿ ಮಹಿಳೆಯ ಕೃಷಿ ಜಾಗವನ್ನು ಘನತ್ಯಾಜ್ಯ ವಿಲೇವಾರಿಗೆ ಗುರುತಿಸದಂತೆ ಮನವಿ

Share

ಸುಳ್ಯ:ಅಜ್ಜಾವರ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಪ.ಜಾತಿ ಮಹಿಳೆಯೊಬ್ಬರು ರಬ್ಬರ್ ಕೃಷಿ ಮಾಡಿಕೊಂಡು ಬಂದ ಜಾಗವನ್ನು ಇದೀಗ ಅಜ್ಜಾವರ ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿ ಮಾಡಲು ಗುರುತಿಸಿದೆ. ಗ್ರಾ.ಪಂ.ನವರು ಕೈಗೊಂಡಿರುವ ಈ ನಿರ್ಧಾರವನ್ನು ಕೈ ಬಿಟ್ಟು ಆ ಜಾಗವನ್ನು ಆ ಮಹಿಳೆಗೇ ಬಿಟ್ಟು ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಆದಿದ್ರಾವಿಡ ಸಮುದಾಯದ ಪ್ರಮುಖರಾದ ಕೆ.ಎಂ.ಬಾಬು ಜಾಲ್ಸೂರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Advertisement
Advertisement
Advertisement
Advertisement

ನೇಲ್ಯಡ್ಕದಲ್ಲಿ ಸುಶೀಲರವರು ೨ ಎಕ್ರೆ ಜಾಗದಲ್ಲಿ ೬೦೦ ರಬ್ಬರ್ ಕೃಷಿ ಮಾಡಿದ್ದು, ಅದರಲ್ಲಿ ೪೫೦ ಗಿಡಗಳು ಈಗ ಹಾಲು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದು ಸರಕಾರಿ ಜಮೀನು. ಇದನ್ನು ಅಕ್ರಮ ಸಕ್ರಮದಲ್ಲಿ ಮಾಡಿಕೊಳ್ಳಲು ಅವರು ಅರ್ಜಿಯನ್ನು ಹಾಕಿದ್ದಾರೆ.

Advertisement

ಇದೀಗ ಈ ಜಾಗವನ್ನು ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿದ್ದು ಇದರಿಂದ ಇವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಘನತ್ಯಾಜ್ಯಕ್ಕೆ ಬೇರೆ ಜಾಗ ಗುರುತಿಸುವಂತೆ ವಿನಂತಿಸಿದ ಅವರು ಇದೇ ಸರ್ವೆ ನಂಬರ್‌ನಲ್ಲಿ ಒಟ್ಟು ೭.೭೩ ಎಕ್ರೆ ಸರಕಾರಿ ಜಮೀನು ಇದೆ. ಅದರಲ್ಲಿ ೨ ಎಕ್ರೆ ಸುಶೀಲರು ಕೃಷಿ ಮಾಡಿದರೆ ಉಳಿದ ಜಾಗವೂ ಒತ್ತುವರಿಯಾಗಿದೆ. ಅದೆಲ್ಲವನ್ನು ಬಿಟ್ಟು ಇವರ ಜಾಗ ಮಾತ್ರ ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿರುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಕೆ.ಎಂ.ಬಾಬು ಹೇಳಿದರು.

ಸುಶೀಲಾ ಮಾತನಾಡಿ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಅಲ್ಲಿಸಲಾಗಿದ್ದು ಕೃಷಿ ಮಾಡಿದ ಆ ಜಾಗವನ್ನು ತನ್ನ ಹೆಸರಿಗೆ ನೀಡಬೇಕೆಂದು ವಿನಂತಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ರತ್ನಾವತಿ ಉದ್ದಂತಡ್ಕ, ವಿಶ್ವನಾಥ ಉದ್ದಂತಡ್ಕ, ಸತೀಶ್ ನೆಲ್ಯಡ್ಕ, ರವಿ ಪಿಲಿಕೋಡಿ, ಮಂಜುನಾಥ ಇದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

10 hours ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

14 hours ago

Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…

15 hours ago

ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!

ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…

15 hours ago

ಭಾವತೀರ ಯಾನ ತಂಡದ ಸಂದರ್ಶನ

https://youtu.be/uK6DXLGXQiE?si=aXESe-CGSVVHt_WS

2 days ago

ವಳಲಂಬೆ ಜಾತ್ರೆ

https://youtu.be/2vEOlELtngk?si=R4B-hMjIJ5r31QyR

2 days ago