ಸುಳ್ಯ: ಹವಾಮಾನ ಆಧಾರಿತ ಬೆಳೆ ವಿಮೆ ಫಸಲ್ ಭೀಮಾ ಯೋಜನೆಯ ಪರಿಹಾರ ಮೊತ್ತವನ್ನು ರೈತರಿಗೆ ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ ಪ್ರಸನ್ನ ಎಣ್ಮೂರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಣಿಜ್ಯ ಬ್ಯಾಂಕ್ ಗಳ ಮೂಲಕ ಫಸಲ್ ಭೀಮಾ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಮೊತ್ತ ಬಂದಿದೆ. ಆದರೆ ಸಹಕಾರಿ ಸಂಘಗಳ ಮೂಲಕ ವಿಮೆ ಪಾವತಿಸಿದವರಿಗೆ ಬಂದಿಲ್ಲ. ಫಸಲ್ ಭೀಮಾ ವಿಮಾ ಯೋಜನೆ ಪಡೆಯಲು ಕೃಷಿಕರ ಆಯ್ಕೆಗೆ ಬಿಡಬೇಕು. ಅವರಿಗೆ ಆಸಕ್ತಿ ಇರುವ ಬ್ಯಾಂಕ್ ಗಳ ಮೂಲಕ ಪಡೆಯುವಂತಾಗಬೇಕು. ಸಹಕಾರಿ ಸಂಘಗಳು ಒತ್ತಾಯ ಪೂರ್ವಕವಾಗಿ ಫಸಲ್ ಭೀಮಾ ಪ್ರೀಮಿಯಂ ಸಂಗ್ರಹಿಸುವುದು ಸರಿಯಲ್ಲ. ಅಲ್ಲದೆ ಏಕರೂಪ ಹವಾಮಾನ ಆಧಾರಿತ ಡಾಟಾ ಸಿಗದೇ ಇರುವುದು ಕೂಡ ಸಮಸ್ಯೆ ಉಂಟಾಗುತಿದೆ. ಸರಿಯಾಗಿ ಹವಾಮಾನ ವರದಿ ಲಭ್ಯವಾಗಿರುವ ಪ್ರದೇಶದ ಕೃಷಿಕರಿಗೆ ಪರಿಹಾರ ಮೊತ್ತ ದೊರೆತಿದೆ. ಯೋಜನೆಯ ಷರತ್ತು ಪ್ರಕಾರ ಸುಳ್ಯ ತಾಲೂಕಿನ ಹವಾಮಾನ ವೈಪರೀತ್ಯದ ಕಾರಣ ಎಲ್ಲಾ ಕೃಷಿಕರಿಗೂ ಫಸಲ್ ಭೀಮಾ ಹಣ ದೊರೆಯುವ ಅರ್ಹತೆ ಇದೆ. ಆದರೆ ಸರಿಯಾದ ಹವಾಮಾನ ಡಾಟಾ ಅಪ್ ಲೋಡ್ ಆಗದೆ ಇರುವುದು ಕೂಡ ಯೋಜನೆಯ ಸೌಲಭ್ಯ ದೊರೆಯಲು ತಡೆಯಾಗುವ ಸಾಧ್ಯತೆ ಇದೆ ಎಂದರು. ಫಸಲ್ ಭೀಮಾ ಮೊತ್ತ ಕೃಷಿಕರಿಗೆ ದೊರೆಯುವ ತನಕ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುದರ್ಶನ ಪಾತಿಕಲ್ಲು, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…