ಸುಳ್ಯ: ಹವಾಮಾನ ಆಧಾರಿತ ಬೆಳೆ ವಿಮೆ ಫಸಲ್ ಭೀಮಾ ಯೋಜನೆಯ ಪರಿಹಾರ ಮೊತ್ತವನ್ನು ರೈತರಿಗೆ ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ ಪ್ರಸನ್ನ ಎಣ್ಮೂರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಣಿಜ್ಯ ಬ್ಯಾಂಕ್ ಗಳ ಮೂಲಕ ಫಸಲ್ ಭೀಮಾ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಮೊತ್ತ ಬಂದಿದೆ. ಆದರೆ ಸಹಕಾರಿ ಸಂಘಗಳ ಮೂಲಕ ವಿಮೆ ಪಾವತಿಸಿದವರಿಗೆ ಬಂದಿಲ್ಲ. ಫಸಲ್ ಭೀಮಾ ವಿಮಾ ಯೋಜನೆ ಪಡೆಯಲು ಕೃಷಿಕರ ಆಯ್ಕೆಗೆ ಬಿಡಬೇಕು. ಅವರಿಗೆ ಆಸಕ್ತಿ ಇರುವ ಬ್ಯಾಂಕ್ ಗಳ ಮೂಲಕ ಪಡೆಯುವಂತಾಗಬೇಕು. ಸಹಕಾರಿ ಸಂಘಗಳು ಒತ್ತಾಯ ಪೂರ್ವಕವಾಗಿ ಫಸಲ್ ಭೀಮಾ ಪ್ರೀಮಿಯಂ ಸಂಗ್ರಹಿಸುವುದು ಸರಿಯಲ್ಲ. ಅಲ್ಲದೆ ಏಕರೂಪ ಹವಾಮಾನ ಆಧಾರಿತ ಡಾಟಾ ಸಿಗದೇ ಇರುವುದು ಕೂಡ ಸಮಸ್ಯೆ ಉಂಟಾಗುತಿದೆ. ಸರಿಯಾಗಿ ಹವಾಮಾನ ವರದಿ ಲಭ್ಯವಾಗಿರುವ ಪ್ರದೇಶದ ಕೃಷಿಕರಿಗೆ ಪರಿಹಾರ ಮೊತ್ತ ದೊರೆತಿದೆ. ಯೋಜನೆಯ ಷರತ್ತು ಪ್ರಕಾರ ಸುಳ್ಯ ತಾಲೂಕಿನ ಹವಾಮಾನ ವೈಪರೀತ್ಯದ ಕಾರಣ ಎಲ್ಲಾ ಕೃಷಿಕರಿಗೂ ಫಸಲ್ ಭೀಮಾ ಹಣ ದೊರೆಯುವ ಅರ್ಹತೆ ಇದೆ. ಆದರೆ ಸರಿಯಾದ ಹವಾಮಾನ ಡಾಟಾ ಅಪ್ ಲೋಡ್ ಆಗದೆ ಇರುವುದು ಕೂಡ ಯೋಜನೆಯ ಸೌಲಭ್ಯ ದೊರೆಯಲು ತಡೆಯಾಗುವ ಸಾಧ್ಯತೆ ಇದೆ ಎಂದರು. ಫಸಲ್ ಭೀಮಾ ಮೊತ್ತ ಕೃಷಿಕರಿಗೆ ದೊರೆಯುವ ತನಕ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುದರ್ಶನ ಪಾತಿಕಲ್ಲು, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…