ಸುಳ್ಯ: ಕರ್ನಾಟಕ ಸರಕಾರ ಹೊರತಂದ ಪ್ರಥಮ ಯಕ್ಷಗಾನ ಪಠ್ಯ ಪುಸ್ತಕದ ಪರಿಚಯ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ ಫೆ.23 ರಂದು ಸಂಜೆ 6.00 ಕ್ಕೆ ಸುಳ್ಯ ಹಳೆಗೇಟಿನ ರಂಗಮನೆಯಲ್ಲಿ ನಡೆಯಲಿದೆ.
ರಂಗಮನೆಯ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಠ್ಯಪುಸ್ತಕ ಸಮಿತಿಯ ಸದಸ್ಯ ಪ್ರಕಾಶ್ ಮೂಡಿತ್ತಾಯ ಪುಸ್ತಕ ಪರಿಚಯ ಮಾಡಲಿದ್ದಾರೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಅಂಗವಾಗಿ ಗುರು ಕುಮಾರ ಸುಬ್ರಮಣ್ಯ ಅವರ ನಿರ್ದೇಶನದಲ್ಲಿ ಕೇಂದ್ರದ ಹಿಮ್ಮೇಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಚಂಡೆವಾದನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಲಕ್ಷ್ಮೀಶ ರೈ ಕಳಂಜ ಇವರ ನಿರ್ದೇಶನದಲ್ಲಿ ಪಂಚವಟಿ- ಖರಾಸುರ ವಧೆ ಯಕ್ಷಗಾನ ಪ್ರಸಂಗ ನಡೆಯಲಿದೆ. ಭಾಗವತಿಕೆಯಲ್ಲಿ ರಾಮಚಂದ್ರ ಅರ್ಭಿತ್ತಾಯ, ಹಿಮ್ಮೇಳನದಲ್ಲಿ ಕುಮಾರ ಸುಬ್ರಮಣ್ಯ, ಕೇಶವ ದೀಕ್ಷಿತ್ ಭಾಗವಹಿಸಲಿದ್ದಾರೆ. ಕಲಾವಿದರಾಗಿ ಕೃತಸ್ವರ ದೀಪ್ತ, ಮನುಜ ನೇಹಿಗ, ಮನ್ವಿತ್ ಪಡ್ಡಂಬೈಲ್, ಸೃಜನಾದಿತ್ಯ ಶೀಲ, ಧ್ಯಾನ್ ವಿಜಯ್, ಸುಮೇಧಾ ಕುಕ್ಕುಜಡ್ಕ, ಗೌತಮ್ ಪೇರಾಲು, ಜಿತೇಶ್ ಮತ್ತು ಶಿಶಿರ ಸೋಮಯಾಗಿ ಭಾಗವಹಿಸಲಿದ್ದಾರೆ.
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…
ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…
ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…