ಮಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈಗಿನ ಪ್ರಕಾರ ಕರ್ನಾಟಕ ಹಾಗೂ ಕೇರಳ ಕರಾವಳಿ ಪ್ರದೇಶದಲ್ಲಿ ಮೇ.15 ಹಾಗೂ 16 ರಂದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಉಪಗ್ರಹ ಆಧಾರಿತ ಚಿತ್ರದ ವೀಕ್ಷಣೆಯ ಬಳಿಕ ಕೃಷಿಕ ಸಾಯಿಶೇಖರ್ ಅವರು ಹೇಳುವ ಪ್ರಕಾರ ಬುಧವಾರ ಬೆಳಗಿನವರೆಗಿನ ಹವಾಮಾನದ ಮುನ್ಸೂಚನೆಯಂತೆ ಮಂಗಳವಾರ ಸಂಜೆ ಮಂಗಳೂರು, ಪುತ್ತೂರು, ವಿಟ್ಲ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಹಾಗೂ ಕಾಸರಗೋಡು ಇಡೀ ಜಿಲ್ಲೆಯಾದ್ಯಂತ ಮಳೆ ಸಾಧ್ಯತೆ ಇದೆ. ಕೇರಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel