ವಿಶೇಷ ವರದಿಗಳು

ಬರಕ್ಕೆ ನಲುಗಿದ ಸುಳ್ಯ : “ನೀರು ಕುಡಿಯುವ ಮನೆ”ಯಲ್ಲೂ ನೀರಿಲ್ಲ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಸುಳ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ನಲುಗಿ ಹೋಗಿದೆ. ಪೂರ್ವ ಮುಂಗಾರು ಕೊರತೆ ಹಾಗೂ ಬಿರು ಬಿಸಿಲಿನ ತಾಪಕ್ಕೆ ಜಲಾಶ್ರಯ ಗಳು ಬತ್ತಿ ಹೋಗಿದ್ದು ಎಲ್ಲೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹಿಂದೆಂದೂ ಬತ್ತದೇ ಇದ್ದ ನೀರಿನ ಮೂಲಗಳು ಬತ್ತುತ್ತಿದ್ದು ಜನತೆ ಆಕಾಶದತ್ತ ನೋಡುವಂತಾಗಿದೆ.

Advertisement
Advertisement

ಸುಳ್ಯದ ಬೂಡು ಪರಿಸರದ ಗಣೇಶ್ ಆಚಾರ್ಯ ಎಂಬವರ ಮನೆಯ ಸನಿಹ ಸುರಂಗ ಬಾವಿಯೊಂದಿದೆ. ಈ ಬಾವಿ ಕಳೆದ ಎಂಭತ್ತ್ತು ವರ್ಷಗಳಿಂದ ಪರಿಸರದ ಜನರ ದಾಹ ತೀರಿಸುತ್ತಿದೆ. ದಾರಿಹೋಕರು ಹಾಗೂ ಸುತ್ತಲಿನ ಪರಿಸರದ ಜನ ಕುಡಿಯುವ ನೀರಿಗಾಗಿ ಇದೇ ಸುರಂಗ ಬಾವಿಯನ್ನು ಆಶ್ರಯಿಸಿದ್ದರು. ಸ್ಥಳೀಯರೆಲ್ಲರಿಗೂ ನೀರನ್ನು ಪೂರೈಸುವ ಈ ಮನೆಯನ್ನು ‘ನೀರು ಕುಡಿಯುವ ಮನೆ‘ ಎಂದೇ ಕರೆಯುತ್ತಿದ್ದರು. ಗಣೇಶ್ ಆಚಾರ್ಯರ ತಂದೆ ಮಂಜುನಾಥ ಆಚಾರ್ಯ ಹಾಗೂ ಅಜ್ಜ ರಾಮಯ್ಯ ಆಚಾರ್ಯರು ಈ ಸುರಂಗ ಬಾವಿಯನ್ನು 80 ವರ್ಷಗಳ ಹಿಂದೆ ನಿರ್ಮಿಸಿದ್ದು ಈ ಬಾವಿ ಅಲ್ಲಿಂದ ಇಲ್ಲಿಯವರೆಗೆ ಹಲವರ ನೀರು ದಾಹವನ್ನು ತೀರಿಸಿದೆ. ಬಾಯಾರಿ ಬಂದವರಿಗೆ ದಣಿವಾರಿಸಿ ಕೊಳ್ಳಲು ನೀರು ನೀಡುತ್ತಿದ್ದ ಈ ಬಾವಿಯಲ್ಲಿ ಈ ಬಾರಿಯ ಬಿಸಿಲು ಹಾಗೂ ಬರದಿಂದಾಗಿ ಒಂದು ಹನಿಯೂ ನೀರು ಲಭ್ಯವಿಲ್ಲ.

ಕಟ್ಟಡ ನಿರ್ಮಾಣಕ್ಕೂ ಬಳಕೆ: ಬೂಡುವಿನಲ್ಲಿ ನಿರ್ಮಾಣಗೊಂಡ ಕೆ.ಇ.ಬಿ ಸಿಬ್ಬಂದಿಗಳ ವಸತಿ ಗೃಹದ ನಿರ್ಮಾಣಕ್ಕೂ ಈ ಬಾವಿ ನೀರನ್ನು ಬಳಸಲಾಗಿತ್ತು. ಅಲ್ಲದೇ ಸ್ಥಳೀಯ ಪರಿಸರದಲ್ಲಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗಿತ್ತು. ಯಥೇಚ್ಛವಾಗಿ ದೊರೆಯುತ್ತಿದ್ದ ನೀರು ಇದೀಗ ಬತ್ತಿರುವುದು ಸ್ಥಳೀಯ ನಿವಾಸಿಗಳಿಗೆ ಬೇಸರ ಜೊತೆಗೆ ಆಶ್ಚರ್ಯವನ್ನು ಉಂಟುಮಾಡಿದೆ.

ನೀರು ಕೇಳಿದಾಗ ಇಲ್ಲ ಎನ್ನಬಾರದು: ಬಾವಿ ತೊಡಿದ ದಿ|ರಾಮಯ್ಯ ಆಚಾರ್ಯರವರು ಮಕ್ಕಳಿಗೆ ಯಾರೂ ನೀರು ಕೇಳಿದರೂ ಇಲ್ಲ ಎನ್ನಬಾರದು ಎಂದು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರಿಗೂ ನೀರು ಇಲ್ಲ ಎಂದು ಹೇಳದೆ ಬೇಕಾದಷ್ಟು ನೀರನ್ನು ಕೊಡಲಾ
ಗಿತ್ತು. ಆದರೆ ಈಗ ಬಾವಿಯಲ್ಲಿ ನೀರು ಬತ್ತಿರುವುದರಿಂದ ನೀರು ಇಲ್ಲ ಎಂದು ಹೇಳಲು ಸಂಕಟವಾಗುತ್ತಿದೆ ಎನ್ನುತ್ತಾರೆ ಗಣೇಶ್ ಆಚಾರ್ಯ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…

10 hours ago

ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490  

14 hours ago

ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…

1 day ago

ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |

ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…

1 day ago

ಹವಾಮಾನ ವರದಿ | 27-05-2025 | ಜೂ.3 ರವರೆಗೂ ಮಳೆ | ಮೇ.28 ರಿಂದ ಮತ್ತೆ ಮಳೆ ಚುರುಕು | ಮಳೆಯ ತೀವ್ರತೆ ಕಡಿಮೆ |

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…

2 days ago

ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ..? ಯಾವುದೆಲ್ಲಾ ವಿಭಾಗಗಳು ಇವೆ..? ಮಾರುಕಟ್ಟೆ ಹೇಗೆ..?

ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…

2 days ago