ಸುಳ್ಯ: ಸುಳ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ನಲುಗಿ ಹೋಗಿದೆ. ಪೂರ್ವ ಮುಂಗಾರು ಕೊರತೆ ಹಾಗೂ ಬಿರು ಬಿಸಿಲಿನ ತಾಪಕ್ಕೆ ಜಲಾಶ್ರಯ ಗಳು ಬತ್ತಿ ಹೋಗಿದ್ದು ಎಲ್ಲೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹಿಂದೆಂದೂ ಬತ್ತದೇ ಇದ್ದ ನೀರಿನ ಮೂಲಗಳು ಬತ್ತುತ್ತಿದ್ದು ಜನತೆ ಆಕಾಶದತ್ತ ನೋಡುವಂತಾಗಿದೆ.
ಸುಳ್ಯದ ಬೂಡು ಪರಿಸರದ ಗಣೇಶ್ ಆಚಾರ್ಯ ಎಂಬವರ ಮನೆಯ ಸನಿಹ ಸುರಂಗ ಬಾವಿಯೊಂದಿದೆ. ಈ ಬಾವಿ ಕಳೆದ ಎಂಭತ್ತ್ತು ವರ್ಷಗಳಿಂದ ಪರಿಸರದ ಜನರ ದಾಹ ತೀರಿಸುತ್ತಿದೆ. ದಾರಿಹೋಕರು ಹಾಗೂ ಸುತ್ತಲಿನ ಪರಿಸರದ ಜನ ಕುಡಿಯುವ ನೀರಿಗಾಗಿ ಇದೇ ಸುರಂಗ ಬಾವಿಯನ್ನು ಆಶ್ರಯಿಸಿದ್ದರು. ಸ್ಥಳೀಯರೆಲ್ಲರಿಗೂ ನೀರನ್ನು ಪೂರೈಸುವ ಈ ಮನೆಯನ್ನು ‘ನೀರು ಕುಡಿಯುವ ಮನೆ‘ ಎಂದೇ ಕರೆಯುತ್ತಿದ್ದರು. ಗಣೇಶ್ ಆಚಾರ್ಯರ ತಂದೆ ಮಂಜುನಾಥ ಆಚಾರ್ಯ ಹಾಗೂ ಅಜ್ಜ ರಾಮಯ್ಯ ಆಚಾರ್ಯರು ಈ ಸುರಂಗ ಬಾವಿಯನ್ನು 80 ವರ್ಷಗಳ ಹಿಂದೆ ನಿರ್ಮಿಸಿದ್ದು ಈ ಬಾವಿ ಅಲ್ಲಿಂದ ಇಲ್ಲಿಯವರೆಗೆ ಹಲವರ ನೀರು ದಾಹವನ್ನು ತೀರಿಸಿದೆ. ಬಾಯಾರಿ ಬಂದವರಿಗೆ ದಣಿವಾರಿಸಿ ಕೊಳ್ಳಲು ನೀರು ನೀಡುತ್ತಿದ್ದ ಈ ಬಾವಿಯಲ್ಲಿ ಈ ಬಾರಿಯ ಬಿಸಿಲು ಹಾಗೂ ಬರದಿಂದಾಗಿ ಒಂದು ಹನಿಯೂ ನೀರು ಲಭ್ಯವಿಲ್ಲ.
ಕಟ್ಟಡ ನಿರ್ಮಾಣಕ್ಕೂ ಬಳಕೆ: ಬೂಡುವಿನಲ್ಲಿ ನಿರ್ಮಾಣಗೊಂಡ ಕೆ.ಇ.ಬಿ ಸಿಬ್ಬಂದಿಗಳ ವಸತಿ ಗೃಹದ ನಿರ್ಮಾಣಕ್ಕೂ ಈ ಬಾವಿ ನೀರನ್ನು ಬಳಸಲಾಗಿತ್ತು. ಅಲ್ಲದೇ ಸ್ಥಳೀಯ ಪರಿಸರದಲ್ಲಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗಿತ್ತು. ಯಥೇಚ್ಛವಾಗಿ ದೊರೆಯುತ್ತಿದ್ದ ನೀರು ಇದೀಗ ಬತ್ತಿರುವುದು ಸ್ಥಳೀಯ ನಿವಾಸಿಗಳಿಗೆ ಬೇಸರ ಜೊತೆಗೆ ಆಶ್ಚರ್ಯವನ್ನು ಉಂಟುಮಾಡಿದೆ.
ನೀರು ಕೇಳಿದಾಗ ಇಲ್ಲ ಎನ್ನಬಾರದು: ಬಾವಿ ತೊಡಿದ ದಿ|ರಾಮಯ್ಯ ಆಚಾರ್ಯರವರು ಮಕ್ಕಳಿಗೆ ಯಾರೂ ನೀರು ಕೇಳಿದರೂ ಇಲ್ಲ ಎನ್ನಬಾರದು ಎಂದು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರಿಗೂ ನೀರು ಇಲ್ಲ ಎಂದು ಹೇಳದೆ ಬೇಕಾದಷ್ಟು ನೀರನ್ನು ಕೊಡಲಾ
ಗಿತ್ತು. ಆದರೆ ಈಗ ಬಾವಿಯಲ್ಲಿ ನೀರು ಬತ್ತಿರುವುದರಿಂದ ನೀರು ಇಲ್ಲ ಎಂದು ಹೇಳಲು ಸಂಕಟವಾಗುತ್ತಿದೆ ಎನ್ನುತ್ತಾರೆ ಗಣೇಶ್ ಆಚಾರ್ಯ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…