ಪುತ್ತೂರು: ಒಂದು ಲೇಖನವನ್ನು ಬರೆಯುವ ಮೊದಲು ಪೂರ್ವಗ್ರಹಪೀಡಿತ ಮನಸ್ಥಿತಿ ಇರಬಾರದು. ಲೇಖಕ ತನ್ನ ಮನಸ್ತಾಪಗಳನ್ನು ಬದಿಗಿರಿಸಿ ನೈಜತೆಯನ್ನು ಸ್ವತಂತ್ರವಾಗಿ ಬರೆಯಬೇಕು. ಆಗ ಲೇಖನ ಸತ್ಯತೆಯನ್ನು ತಿಳಿಸುವುದರೊಂದಿಗೆ ಲೇಖನದ ಮೌಲ್ಯ ವೃದ್ಧಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಬರವಣಿಗೆ ಕೌಶಲ್ಯ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಎಂದರೆ ವಿಷಯವನ್ನು ಅರಿತು ಆನಂತರ ಅದರ ಕುರಿತು ವಿಷಯವನ್ನು ಸಂಗ್ರಹಿಸಿ ಬರೆಯುವುದಲ್ಲ. ದಿನನಿತ್ಯದ ಜೀವನದ ಹಲವು ವಿಷಯಗಳು ಗುರುತಿಸಿ ಮಾಹಿತಿ ಕಲೆ ಹಾಕುವುದು ನಿಜವಾದ ಬರವಣಿಗೆ ಎಂದೆನಿಸುತ್ತದೆ. ಆಗ ಮಾತ್ರ ಯಾವ ರೀತಿ ಬರಹಗಳನ್ನು ಬೇಕಾದರು ಬರೆಯಲು ಧೈರ್ಯ ಹಾಗೂ ದೃಢವಾದ ಮಾಹಿತಿಗಳು ಲಭಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುತ್ತೂರಿನ ಅಡಿಕೆ ಪತ್ರಿಕೆಯ ಸಹಸಂಪಾದಕ ನಾ. ಕಾರಂತ ಪೆರಾಜೆ ಮಾತನಾಡಿ, ಬರವಣಿಗೆ ಒಂದು ಧ್ಯಾನ, ಅದೊಂದು ನಾವೇ ಕೈಗೆತ್ತಿಕೊಳ್ಳುವ ತಪಸ್ಸು ಇದ್ದಂತೆ. ಇದು ಕಾಲಾತೀತವಾದ ಕಾರ್ಯ. ಕಲೆ ಮತ್ತು ಬರವಣಿಗೆ ಒಂದಕ್ಕೊಂದು ಬೆಸೆದುಕೊಂಡಿದೆ. ಕಲೆಯ ಸ್ಪರ್ಶ ಬರವಣಿಗೆಗೆ ನೀಡಿದಾಗ ಅದು ಸುಂದರವಾಗಿ ಮೂಡಿಬರುತ್ತದೆ. ಇಂಟರ್ನೆಟ್ನಲ್ಲಿ ಸಿಗುವ ಮಾಹಿತಿ ಜ್ಞಾನವಲ್ಲ. ಅದನ್ನು ಹೊರತುಪಡಿಸಿ ಜೀವನಕ್ಕೆ ಹತ್ತಿರವಾಗಿರುವುದನ್ನು ಬರೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಐ.ಕ್ಯು.ಎ.ಸಿ. ಘಟಕದ ಸಂಯೋಜಕ ಡಾ. ಶ್ರೀಧರ್ ಎಚ್.ಜಿ., ಕಣ್ಣೆದುರಿಗೆ ದಿನನಿತ್ಯವು ಕಾಣುವ ಅದೆಷ್ಟೋ ವಿಚಾರಗಳು, ವಿಸ್ಮಯಗಳು ಇರುತ್ತದೆ. ಅದನ್ನು ಗಮನಿಸಿದರೆ ಮಾತ್ರ ಬರಹಗಾರನ ಬೊಗಸೆಗೆ ಅವು ಸೇರುತ್ತವೆ. ಬರವಣಿಗೆಗೆ ಶಬ್ದಕೋಶಗಳು ಎಷ್ಟಿದ್ದರೂ ಸಾಕಾಗಲಾರದು. ಆದರೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೈಗೆ ಸಿಲುಕಿ ಹಲವಾರು ಸುಂದರ ಪದಗಳು ಕಳೆದುಹೋಗುತ್ತಿವೆ. ಅದರತ್ತ ಮುಖ ಮಾಡಿದರೆ ಬರಹಗಳ ಮೌಲ್ಯ ಹೆಚ್ಚುತ್ತದೆ ಎಂದು ನುಡಿದರು.
ವಿದ್ಯಾರ್ಥಿನಿ ಪವಿತ್ರ ಪ್ರಾರ್ಥಿಸಿದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಸೀಮಾ ವಂದಿಸಿದರು. ಶಿವಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…