ಬಳ್ಪ: ಬಳ್ಪ ಗ್ರಾಮದ ಆಲ್ಕಬೆ ಬೈಲಿನಲ್ಲಿ ಚಿರತೆಯೊಂದು ಕೃಷಿಕನಿಗೆ ದಾಳಿ ಮಾಡಿದ ಬಳಿಕ “ಆಪರೇಶನ್ ಚೀತಾ” ನಡೆಯಿತು. ಗುರುವಾರ ಮಧ್ಯಾಹ್ನದ ಹೊತ್ತಿಗೆ ಆಲ್ಕಬೆ ಬೈಲಿನ ಕಾಯಾರ ಬಾಲಕೃಷ್ಣ ಎಂಬವರಿಗೆ ತೋಟದಲ್ಲಿ ಹುಲ್ಲಿಗೆ ಹೋದಾಗ ದಾಳಿ ನಡೆಸಿತ್ತು. ತಕ್ಷಣವೇ ಗಾಯಾಳು ಕೃಷಿಕರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ನಡೆಸಿದರು.
ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯೊಬ್ಬರ ಮೇಲೂ ಚಿರತೆ ದಾಳಿ ನಡೆಸಿದೆ. ಚಿರತೆ ಹಿಡಿಯುವ ಕಾರ್ಯಾಚರಣೆ ರಾತ್ರಿಯವರೆಗೆ ನಡೆದು “ಆಪರೇಶನ್ ಚೀತಾ” ಸದ್ಯಕ್ಕೆ ನಿಲ್ಲಿಸಿ ಬೋನು ಇರಿಸಿ ಇಲಾಖಾ ಅಧಿಕಾರಿಗಳು ಹಿಂತಿರುಗಿದ್ದು ನಾಳೆ ಮತ್ತೆ ಕಾರ್ಯಾಚರಣೆ ನಡೆಯಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel