ಬಳ್ಪ: ಸುಳ್ಯ ತಾಲೂಕಿನ ಬಳ್ಪ ಪರಿಸರದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಎರಡು ತಿಂಗಳ ಹಿಂದಷ್ಟೇ ಹಟ್ಟಿಯಲ್ಲಿದ್ದ ದನದ ಮೇಲೆ ಧಾಳಿ ನಡೆಸಿ ಕೊಂದಿದ್ದ ಚಿರತೆ ಇದೀಗ ಇನ್ನೊಂದು ಕರುವಿನ ಮೇಲೆ ಧಾಳಿ ನಡೆಸಿ ಕೊಂದಿದೆ. ಹೀಗಾಗಿ ಜನತೆ ಭಯಗೊಂಡಿದ್ದಾರೆ.
ಬಳ್ಪ ಪರಿಸರದ ಕಾಡಂಚಿನ ಪ್ರದೇಶ ಹಾಗೂ ಎಣ್ಣೆಮಜಲು , ಏನೆಕಲ್ಲು , ಬಾನಡ್ಕ, ತುಂಭತ್ತಾಜೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮನೆಗಳಿಂದ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇದೀಗ ದನಗಳ ಮೇಲೂ ಧಾಳಿ ನಡೆಸಲು ಆರಂಭಿಸಿದೆ. ಎರಡು ತಿಂಗಳ ಹಿಂದೆ ಎಣ್ಣೆಮಜಲಿನಲ್ಲಿ ಹಟ್ಟಿಗೇ ನುಗ್ಗಿದ್ದ ಚಿರತೆ ಇದೀಗ ಬಳ್ಪ ಪ್ರದೇಶದ ಮೂಡ್ನೂರು ಎಂಬಲ್ಲಿ ಕಾಡಿನ ಬದಿಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಕೃಷಿಕರೊಬ್ಬರ ಹೋರಿ ಕರುವಿನ ಮೇಲೆ ಚಿರತೆ ಧಾಳಿ ನಡೆಸಿ ಕೊಂದು ಹಾಕಿದೆ. ಇದೀಗ ಜನತೆಯ ಆತಂಕ ಹೆಚ್ಚಾಗಿದೆ. ತಕ್ಷಣವೇ ಚಿರತೆಯನ್ನು ಹಿಡಿದು ಜನತೆಯ ಭಯ ನಿವಾರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ, ಒಡಿಶಾ ಕರಾವಳಿಯಲ್ಲಿ ಇದ್ದು, ಆಗಸ್ಟ್ 20,21ರಂದು ಗುಜರಾತ್…
ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…
ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…