ಬಳ್ಪ: ಸುಳ್ಯ ತಾಲೂಕಿನ ಬಳ್ಪ ಪರಿಸರದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಎರಡು ತಿಂಗಳ ಹಿಂದಷ್ಟೇ ಹಟ್ಟಿಯಲ್ಲಿದ್ದ ದನದ ಮೇಲೆ ಧಾಳಿ ನಡೆಸಿ ಕೊಂದಿದ್ದ ಚಿರತೆ ಇದೀಗ ಇನ್ನೊಂದು ಕರುವಿನ ಮೇಲೆ ಧಾಳಿ ನಡೆಸಿ ಕೊಂದಿದೆ. ಹೀಗಾಗಿ ಜನತೆ ಭಯಗೊಂಡಿದ್ದಾರೆ.
ಬಳ್ಪ ಪರಿಸರದ ಕಾಡಂಚಿನ ಪ್ರದೇಶ ಹಾಗೂ ಎಣ್ಣೆಮಜಲು , ಏನೆಕಲ್ಲು , ಬಾನಡ್ಕ, ತುಂಭತ್ತಾಜೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮನೆಗಳಿಂದ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇದೀಗ ದನಗಳ ಮೇಲೂ ಧಾಳಿ ನಡೆಸಲು ಆರಂಭಿಸಿದೆ. ಎರಡು ತಿಂಗಳ ಹಿಂದೆ ಎಣ್ಣೆಮಜಲಿನಲ್ಲಿ ಹಟ್ಟಿಗೇ ನುಗ್ಗಿದ್ದ ಚಿರತೆ ಇದೀಗ ಬಳ್ಪ ಪ್ರದೇಶದ ಮೂಡ್ನೂರು ಎಂಬಲ್ಲಿ ಕಾಡಿನ ಬದಿಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಕೃಷಿಕರೊಬ್ಬರ ಹೋರಿ ಕರುವಿನ ಮೇಲೆ ಚಿರತೆ ಧಾಳಿ ನಡೆಸಿ ಕೊಂದು ಹಾಕಿದೆ. ಇದೀಗ ಜನತೆಯ ಆತಂಕ ಹೆಚ್ಚಾಗಿದೆ. ತಕ್ಷಣವೇ ಚಿರತೆಯನ್ನು ಹಿಡಿದು ಜನತೆಯ ಭಯ ನಿವಾರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…
ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…
ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…
ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…
ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…