ಬಳ್ಪ: ಬಳ್ಪ ಗ್ರಾಮದ ಶ್ರೀ ಕುಮನಪಾಳ್ಯ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಸಲುವಾಗಿ ದೈವಸ್ಥಾನದ ಮಹಾಸಭೆ ಇತ್ತೀಚೆಗೆ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ದೈವಸ್ಥಾನದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಬಳಿಕ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶ್ರೀವತ್ಸ ಎಂ.ವಿ, ಅಧ್ಯಕ್ಷ ಪುಟ್ಟಣ್ಣ ಗೌಡ ದೊಡ್ಡಮನೆ, ಕಾರ್ಯದರ್ಶಿ ಹೊನ್ನಪ್ಪ ಎರಂಬಿಲ, ಕೋಶಾಧಿಕಾರಿಯಾಗಿ ಹೊನ್ನಪ್ಪ ಗೌಡ ಎಣ್ಣೆಮಜಲು ಆಯ್ಕೆಗೊಂಡರು. ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾಗಿ ಪುಟ್ಟಣಣ ಗೌಡ ಪಟೇಲ್ ಎಣ್ಣೆಮಜಲು, ಅಧ್ಯಕ್ಷ ಶಿವಕುಮಾರ್ ಎಣ್ಣೆಮಜಲು, ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ನಿಡ್ಲೆ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಾಂಜಿ, ಜತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಕೊಠಾರಿ, ವಿನೋದ್ ನಡುಮನೆ, ಕೋಶಾಧಿಕಾರಿಯಾಗಿ ಮಹೇಶ್ ಚೂಂತಾರು, ಆಯ್ಕೆಗೊಂಡರು. ಬಳಿಕ ದೈವಸ್ಥಾನದ ಅಭಿವೃದ್ಧಿಗೆ ನಿಧಿ ಕ್ರೋಢಿಕರಣ ಇತ್ಯಾದಿಗಳ ಕುರಿತು ಚರ್ಚೆ ನಡೆಯಿತು. ಊರ ಭಕ್ತರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel